ಏರ್ಪೋರ್ಟ್ ಭಾಗ್ಯ
ಸುದ್ಧಿಯಲ್ಲಿ ಏಕಿದೆ ?ವಿಮಾನ ನಿಲ್ದಾಣ ಹೊಂದಿರದ ರಾಷ್ಟ್ರದ ಏಕೈಕ ರಾಜ್ಯವಾಗಿದ್ದ ಅರುಣಾಚಲ ಪ್ರದೇಶಕ್ಕೆ ಏರ್ಪೋರ್ಟ್ ಭಾಗ್ಯ ಸಿಕ್ಕಿದೆ.
- ಈಗಾಗಲೇ ರಾಷ್ಟ್ರದ 29 ರಾಜ್ಯಗಳಲ್ಲಿ ವಿಮಾನ ನಿಲ್ದಾಣ ಸೌಲಭ್ಯವಿದೆ. ಆದರೆ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ವಿಮಾನ ನಿಲ್ದಾಣದ ಕೊರತೆಯಿತ್ತು.
- ಪ್ರಧಾನಿ ನರೇಂದ್ರ ಮೋದಿ ಅರುಣಾಚಲ ಪ್ರದೇಶದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದು, ಸುವ್ಯವಸ್ಥಿತ ವಿಮಾನ ನಿಲ್ದಾಣಕ್ಕೂ ಚಾಲನೆ ನೀಡಿದ್ದಾರೆ. ಪ್ರ
- ಧಾನಿ ಮೋದಿ ಇಟಾನಗರದ ಸಮೀಪ ಹೊಲಂಗಿಯಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು.
- ತೇಜು ನಗರದಲ್ಲಿ ಪುನಃ ನಿರ್ಮಾಣಗೊಂಡ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದರು. 125 ಕೋಟಿ ರೂ. ವೆಚ್ಚದಿಂದ ತೇಜು ವಿಮಾನ ನಿಲ್ದಾಣ ನಿರ್ಮಿಸಲಾಗಿದೆ.
- ಉಡಾನ್ ಯೋಜನೆಯಡಿ ತೇಜು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸೇವೆ ಆರಂಭಗೊಳ್ಳುತ್ತದೆ.
ತೇಜು ವಿಮಾನ ನಿಲ್ದಾಣದ ಪ್ರಮುಖ ವೈಶಿಷ್ಟ್ಯಗಳು
- ಯೋಜನೆಯ ವೆಚ್ಚ: ರೂ 125 ಕೋಟಿ
- ಟರ್ಮಿನಲ್ ವಿಸ್ತೀರ್ಣ: 4,000 ಚ.ಮಿ.
- ಪೀಕ್ ಗಂಟೆ ನಿರ್ವಹಣೆ ಸಾಮರ್ಥ್ಯ: 200 ಪ್ರಯಾಣಿಕರು
- ಚೆಕ್ ಇನ್ ಕೌಂಟರ್ಗಳು: ಐದು
- ಪಾರ್ಕಿಂಗ್ ಕೊಲ್ಲಿಗಳು: ಎರಡು
ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಎಂದರೇನು ?
- ಗ್ರೀನ್ಫೀಲ್ಡ್ ವಿಮಾನನಿಲ್ದಾಣವು ಗ್ರೀನ್ಫೀಲ್ಡ್ ಯೋಜನೆಯ ಗುಣಲಕ್ಷಣಗಳೊಂದಿಗೆ ಒಂದು ವಾಯುಯಾನ ಸೌಲಭ್ಯವಾಗಿದೆ.
- ಈ ಪದನಾಮವು ಕೆಲವು ಪರಿಸರೀಯ ಗುಣಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಸಾಮಾನ್ಯವಾಗಿ ಪ್ರಾರಂಭದಿಂದಲೇ ಕೈಗೊಳ್ಳುವ ಯೋಜನೆ, ಯೋಜನೆ ಮತ್ತು ನಿರ್ಮಾಣ ಪ್ರಕ್ರಿಯೆಗಳನ್ನು ಪ್ರತಿನಿಧಿಸುತ್ತದೆ.
- ಪ್ರಕೃತಿಯಲ್ಲಿ ಕಂಡುಬರುವ ಒಂದು ಹಸಿರು ಕ್ಷೇತ್ರವನ್ನು ನೈಸರ್ಗಿಕ ಭೂಮಿ ವಿಶಾಲ ವ್ಯಾಪ್ತಿಯೆಂದು ವ್ಯಾಖ್ಯಾನಿಸಲಾಗಿದೆ. ಇಲ್ಲಿ ಗ್ರೀನ್ಫೀಲ್ಡ್ನಲ್ಲಿ ಯೋಜನೆಯು ಮುಂಚಿನ ಕೆಲಸದಿಂದ ಅಥವಾ ಅಸ್ತಿತ್ವದಲ್ಲಿರುವ ಮೂಲಸೌಕರ್ಯದಿಂದ ಹೇರಿರುವ ಯಾವುದೇ ನಿರ್ಬಂಧಗಳನ್ನು ಹೊಂದಿರುವುದಿಲ್ಲ ಎಂದು ಸೂಚಿಸುತ್ತದೆ.
ಬಾಲ್ಯ ವಿವಾಹ:
ಸುದ್ಧಿಯಲ್ಲಿ ಏಕಿದೆ ?ಬಾಲ್ಯ ವಿವಾಹವೆಂಬ ಸಾಮಾಜಿಕ ಪಿಡುಗು ಚಾಲ್ತಿಯಲ್ಲಿರುವ ನಂಬರ್ ಒನ್ ರಾಜ್ಯವೆಂಬ ಕುಖ್ಯಾತಿ ಈಗ ಪಶ್ಚಿಮ ಬಂಗಾಳದ ಪಾಲಾಗಿದೆ.
- 2015-16ರಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ-4) ಪ್ರಕಾರ,
- ಹಿಮಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ಅಲ್ಪ ಏರಿಕೆ ಹೊರತುಪಡಿಸಿದರೆ ಒಟ್ಟಾರೆ ಬಾಲಿಕಾ ವಿವಾಹ ಪ್ರಕರಣಗಳು ಗಮನಾರ್ಹವಾಗಿ ಇಳಿಕೆಯಾಗುತ್ತಿವೆ.
- 15-19 ವಯಸ್ಸಿನ ಬಾಲಕಿಯರ ವಿವಾಹದ ರಾಷ್ಟ್ರೀಯ ಸರಾಸರಿ ಪ್ರಮಾಣ ಶೇ 9ರಷ್ಟಿದೆ.
- ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಬಾಲ್ಯ ವಿವಾಹದ ಅನಿಷ್ಠ ಪದ್ಧತಿ ವ್ಯಾಪಕವಾಗಿ ಆಚರಣೆಯಲ್ಲಿವೆ. ಆದರೆ ಪ್ರಸ್ತುತ ಉಳಿದೆಲ್ಲ ರಾಜ್ಯಗಳನ್ನು ಮೀರಿಸಿದ ಕುಖ್ಯಾತಿ ಪಶ್ಚಿಮ ಬಂಗಾಳಕ್ಕೆ ದಕ್ಕಿದೆ.
- 15ರಿಂದ 19 ವರ್ಷದೊಳಗಿನ ಬಾಲಕಿಯರ ಮದುವೆ ಪ್ರಮಾಣ ಪಶ್ಚಿಮ ಬಂಗಾಳದಲ್ಲೇ ಅತ್ಯಧಿಕ ದಾಖಲಾಗಿದೆ.
- ಸಾಂಪ್ರದಾಯಿಕವಾಗಿ ರಾಜಸ್ಥಾನ ಬಾಲ್ಯವಿವಾಹಕ್ಕೆ ಹೆಸರಾಗಿದೆ.
- ಉತ್ತಮ ಶಿಕ್ಷಣ ಮತ್ತು ಆದಾಯದ ಮಟ್ಟ ಏರಿಕೆಯಿಂದಾಗಿ ದೇಶದಲ್ಲಿ ಬಾಲ್ಯ ವಿವಾಹದ ಪ್ರಕರಣಗಳು ಕಡಿಮೆಯಾಗುತ್ತಿವೆ. ಬಿಹಾರ, ರಾಜಸ್ಥಾನ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಗಣನೀಯವಾಗಿ ಈ ಪ್ರಮಾಣ ಕಡಿಮೆಯಾಗಿದೆ.
- ಉತ್ತರ ಪ್ರದೇಶದಲ್ಲಿ 15ರಿಂದ 19 ವರ್ಷದೊಳಗಿನ ಬಾಲಕಿಯರ ಮದುವೆ ಪ್ರಮಾಣ ಶೇ 4ಕ್ಕೆ ಇಳಿದಿದೆ. ಆದರೆ ಬಂಗಾಳದಂತಹ ರಾಜ್ಯಗಳು ಈ ನಿಟ್ಟಿನಲ್ಲಿ ಅತ್ಯಂತ ಕಳಪೆ ಸುಧಾರಣೆ ಕಂಡಿವೆ.
- 2005-06ರಲ್ಲಿ ನಡೆದ ಇಂತಹದೇ ಸಮೀಕ್ಷೆಯ ಪ್ರಕಾರ, ಬಾಲ್ಯ ವಿವಾಹದಲ್ಲಿ ಬಿಹಾರ ಶೇ .8ರ ಪ್ರಮಾಣದೊಂದಿಗೆ ನಂ.1 ಸ್ಥಾನದಲ್ಲಿತ್ತು. ಶೇ ಜಾರ್ಖಂಡ್ (44.7), ರಾಜಸ್ಥಾನ (40.4) ಮತ್ತು ಬಂಗಾಳ ಶೇ 34ರ ಪ್ರಮಾಣದೊಂದಿಗೆ ನಂತರದ ಸ್ಥಾನದಲ್ಲಿದ್ದವು.
- ಆದರೆ ನಂತರದ 10 ವರ್ಷಗಳ ಬಳಿಕ ಬಿಹಾರ, ಜಾರ್ಖಂಡ್, ರಾಜಸ್ಥಾನ, ಉತ್ತರ ಪ್ರದೇಶಗಳು ಬಾಲ್ಯ ವಿವಾಹ ಪ್ರಮಾಣವನ್ನು ಶೇ 20ರಷ್ಟು ಇಳಿಸುವಲ್ಲಿ ಯಶಸ್ವಿಯಾದವು. ಅದೇ ಅವಧಿಯಲ್ಲಿ ಬಂಗಾಳ ಕೇವಲ ಶೇ 4ರಷ್ಟು ಮಾತ್ರ ಇಳಿಸುವಲ್ಲಿ ಯಶಸ್ವಿಯಾಗಿತ್ತು.
ಗ್ರಾಮೀಣಕ್ಕೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಸುಧಾರಣೆ
- ಗ್ರಾಮೀಣ ಭಾರತದಲ್ಲಿ ಬಾಲ್ಯ ವಿವಾಹದ ಪ್ರಮಾಣ ಸರಾಸರಿ ಶೇ 1ರಷ್ಟಿದ್ದರೆ, ನಗರಗಳಲ್ಲಿ ಶೇ 6.9ರಷ್ಟಿದೆ. ಇದು ನೇರವಾಗಿ ಆದಾಯದ ಪ್ರಮಾಣ ಹಾಗೂ ಶಿಕ್ಷಣದ ಜತೆ ನಿಕಟ ಸಂಬಂಧ ಹೊಂದಿದೆ. ಹೆಚ್ಚು ಶಿಕ್ಷಣ ಪಡೆದ ಹಾಗೂ ಉತ್ತಮ ಆದಾಯ ಹೊಂದಿರುವ ಬಾಲಕಿಯರ ಕುಟುಂಬದಲ್ಲಿ ಬಾಲ್ಯ ವಿವಾಹದ ಪ್ರಮಾಣ ಕಡಿಮೆಯಿದೆ.
ಹದಿಹರೆಯದ ಗರ್ಭಧಾರಣೆಯೇ ಸಮಸ್ಯೆ
- ಬಹುತೇಕ ಬಾಲ್ಯ ವಿವಾಹಗಳು ಹದಿಹರೆಯದ ಗರ್ಭಧಾರಣೆಗೆ ಕಾರಣವಾಗುತ್ತಿವೆ. ಸಾಮಾಜಿಕ ಒತ್ತಡಗಳು ಹಾಗೂ ಕುಟುಂಬ ಯೋಜನೆಯ ಅರಿವಿನ ಕೊರತೆ ಇದಕ್ಕೆ ಕಾರಣವಾಗಿವೆ.
- 15ರಿಂದ 19 ವರ್ಷದೊಳಗೆ ಮದುವೆಯಾಗುವ ಮೂವರಲ್ಲಿ ಒಬ್ಬ ಬಾಲಕಿ ಹದಿಹರಯದಲ್ಲಿರುವಾಗಲೇ ಮಗುವಿನ ತಾಯಿಯಾಗುತ್ತಾಳೆ. ಅವರ ಪೈಕಿ ಶೇ 25ರಷ್ಟು ಬಾಲಕಿಯರು 17ನೇ ವಯಸ್ಸಿಗೆ, ಶೇ 31ರಷ್ಟು ಮಕ್ಕಳು 18ನೇ ವಯಸ್ಸಿಗೆ ತಾಯಿಯಾಗಿರುವುದು ಕಂಡುಬಂದಿದೆ.
- ಇದರಿಂದಾಗಿ ಬಾಲಕಿಯರ ಶಿಕ್ಷಣ ಹಾಗೂ ಉದ್ಯೋಗಕ್ಕೆ ಸೇರಿ ಸ್ವಂತ ಕಾಲಲ್ಲಿ ನಿಲ್ಲುವ ಸ್ವಾವಲಂಬನೆ ಸಾಧ್ಯತೆಗಳು ಅಕ್ಷರಶಃ ಮುಚ್ಚಿಹೋಗುತ್ತವೆ.
ಎನ್ಎಫ್ಹೆಚ್ಎಸ್ –4 ಸಮೀಕ್ಷೆ
- ಎನ್ಎಫ್ಹೆಚ್ಎಸ್ -4 ಎನ್ಎಫ್ಹೆಚ್ಎಸ್ ಸರಣಿಯ ಮೊದಲನೆಯದು, ಅದು ಭಾರತದ 29 ರಾಜ್ಯಗಳು ಮತ್ತು ಎಲ್ಲಾ 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ದತ್ತಾಂಶವನ್ನು ಸಂಗ್ರಹಿಸುತ್ತದೆ. ಅಲ್ಲದೆ, ಎನ್ಎಫ್ಹೆಚ್ಎಸ್ -4, ಮೊದಲ ಬಾರಿಗೆ, 2011 ರ ಜನಗಣತಿಯಲ್ಲಿ ಸೇರಿದ ದೇಶದ 640 ಜಿಲ್ಲೆಗಳಿಗೆ ಜಿಲ್ಲೆಯ ಹೆಚ್ಚಿನ ಸೂಚಕಗಳ ಅಂದಾಜುಗಳನ್ನು ಒದಗಿಸುತ್ತದೆ.
- ಎನ್ಎಫ್ಹೆಚ್ಎಸ್ -4 ರಲ್ಲಿ, 15-49 ವರ್ಷ ವಯಸ್ಸಿನ ಮಹಿಳೆಯರು ಮತ್ತು 15-54 ವರ್ಷ ವಯಸ್ಸಿನ ಪುರುಷರ ಸಂದರ್ಶನ ಮಾಡಲಾಗುತ್ತದೆ. ಸಮೀಕ್ಷೆ ದೇಶದಾದ್ಯಂತ ಪೂರ್ಣಗೊಂಡಾಗ, ಸುಮಾರು 570,000 ಮನೆಗಳನ್ನು ಮಾಹಿತಿ ಪಡೆಯಲಾಗಿರುತ್ತದೆ
ಎನ್ಎಫ್ಹೆಚ್ಎಸ್ ಬಗ್ಗೆ:
- ಎನ್ಎಫ್ಹೆಚ್ಎಸ್ ಪ್ರಭುತ್ವ ಸೇರಿದಂತೆ ಪ್ರಮುಖ ಜನಸಂಖ್ಯೆ, ಆರೋಗ್ಯ ಮತ್ತು ಪೌಷ್ಟಿಕಾಂಶ ಸೂಚಕಗಳಲ್ಲಿ ನವೀಕರಣಗಳು ಮತ್ತು ಪ್ರವೃತ್ತಿಗಳ ಪುರಾವೆಗಳನ್ನು NFHS ಒದಗಿಸುತ್ತದೆ.
- ಇದಲ್ಲದೆ, ಸಮೀಕ್ಷೆ ಆರೋಗ್ಯ, ಸಂಬಂಧಿತ ಫಲವತ್ತತೆ, ಶಿಶು ಮತ್ತು ಶಿಶು ಮರಣ, ತಾಯಿಯ ಮತ್ತು ಮಕ್ಕಳ ಆರೋಗ್ಯ, ಪೆರಿನಾಟಲ್ ಮರಣ, ಹರೆಯದ ಸಂತಾನೋತ್ಪತ್ತಿ ಆರೋಗ್ಯ, ಅಪಾಯಕಾರಿ ಲೈಂಗಿಕ ವರ್ತನೆಯನ್ನು, ಸುರಕ್ಷಿತ ಚುಚ್ಚುಮದ್ದು, ಕ್ಷಯರೋಗ, ಮತ್ತು ಮಲೇರಿಯಾ, ಸಂವಹನ ರೋಗಗಳು, ಗೃಹ ಹಿಂಸೆ, ಎಚ್ಐವಿ ಜ್ಞಾನ, ಮತ್ತು ಎಚ್ಐವಿ ಜನರು ವಾಸಿಸುವ ಕಡೆಗೆ ಜನರ ವರ್ತನೆಗಳು.
- ಜನಸಂಖ್ಯೆಮಾಹಿತಿ, ಆರೋಗ್ಯ, ಪೋಷಣೆ, ಮತ್ತು ಎಚ್ಐವಿ / ಎಐಡಿಎಸ್ಗೆ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಲು ಈ ಮಾಹಿತಿಯನ್ನು GOI ಗೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳಿಗೆ ಒದಗಿಸಲು ಅನುವು ಮಾಡಿಕೊಡುತ್ತದೆ.
ಅಬುಧಾಬಿ ಕೋರ್ಟ್ನಲ್ಲಿ ಮೂರನೇ ಅಧಿಕೃತ ಭಾಷೆ ಹಿಂದಿ
ಸುದ್ಧಿಯಲ್ಲಿ ಏಕಿದೆ ?ಐತಿಹಾಸಿಕ ನಿರ್ಣಯವೊಂದರಲ್ಲಿ ಹಿಂದಿಯನ್ನು ಅಬುಧಾಬಿಯ ಕೋರ್ಟ್ಗಳಲ್ಲಿ ಮೂರನೇ ಅಧಿಕೃತ ಭಾಷೆಯನ್ನಾಗಿ ಬಳಸುವ ನಿರ್ಧಾರಕ್ಕೆ ಅಬುಧಾಬಿ ನ್ಯಾಯಾಂಗ ಇಲಾಖೆ ಆದೇಶ ಹೊರಡಿಸಿದೆ.
- ಅರಬ್ ಸಂಯುಕ್ತ ಸಂಸ್ಥಾನ (ಯುಎಇ)ದಲ್ಲಿ ವಿದೇಶಿಯರ ಸಂಖ್ಯೆ ಸುಮಾರು 50 ಲಕ್ಷ. ಆ ಪೈಕಿ ಭಾರತೀಯರು ಸುಮಾರು 26 ಲಕ್ಷ ಮಂದಿ ಇದ್ದು, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.30ರಷ್ಟು ಇದ್ದಾರೆ.
ಏಕೆ ಈ ನಿರ್ಣಯ ?
- ಈಗಾಗಲೇ ಅರೇಬಿಕ್ ಮೊದಲ ಭಾಷೆಯಾಗಿದ್ದರೆ, ಇಂಗ್ಲಿಷ್ ಎರಡನೇ ಭಾಷೆಯಾಗಿ ಮಾನ್ಯತೆ ಪಡೆದಿದೆ. ಆದರೆ ಭಾರತ ಮತ್ತು ಏಷ್ಯಾದ ಜನರು ಹೆಚ್ಚು ಇರುವುದರಿಂದ, ಜತೆಗೆ ಕಾರ್ಮಿಕ ವಲಯ ಹಾಗು ಉದ್ಯೋಗದಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರೂ ಇರುವುದರಿಂದ ಹಿಂದಿಯನ್ನು ನ್ಯಾಯಾಲಯದಲ್ಲಿ ಬಳಸಿದರೆ, ಅದರಿಂದ ಸಮರ್ಥವಾಗಿ ವಾದ-ವಿವಾದ ನಡೆಸಲು ಸಾಧ್ಯವಾಗುತ್ತದೆ. ಜತೆಗೆ ಅರ್ಜಿದಾರರಿಗೂ ನ್ಯಾಯಾಲಯ ಪ್ರಕ್ರಿಯೆ ಪೂರ್ಣಗೊಳಿಸಲು ಅನುಕೂಲವಾಗಲಿದೆ.
- ಭಾಷಾ ತೊಡಕಿನಿಂದ ಕೆಲವೊಂದು ಪ್ರಕರಣದಲ್ಲಿ ಭಾರತೀಯರ ಸಹಿತ ಏಷ್ಯಾದ ವಾಸಿಗಳು ನ್ಯಾಯಾಲಯದಲ್ಲಿ ವಿಚಾರಣೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ಹಿಂದಿ ಕೂಡ ಲಭ್ಯವಾದರೆ ಅದರಿಂದ, ಅರಬ್ ಸಂಯುಕ್ತ ಒಕ್ಕೂಟದಲ್ಲಿರುವ ಒಟ್ಟು ಜನಸಂಖ್ಯೆಯ ಶೇ. 30 ಭಾರತೀಯರಿಗೂ ಅನುಕೂಲವಾಗಲಿದೆ.
- ಉದ್ಯೋಗ ಮತ್ತು ಕಾರ್ಮಿಕ ಸಂಬಂಧಿ ಪ್ರಕರಣಗಳು ಭಾರತೀಯರ ಕುರಿತು ಹೆಚ್ಚಿದ್ದು, ಹೀಗಾಗಿ ಅಬುಧಾಬಿ ನ್ಯಾಯಾಂಗ ಈ ನಿರ್ಧಾರಕ್ಕೆ ಮುಂದಾಗಿದೆ.
ಡಾನ್ ಡೇವಿಡ್ ಪ್ರಶಸ್ತಿ
ಸುದ್ಧಿಯಲ್ಲಿ ಏಕಿದೆ ?ಖ್ಯಾತ ಭಾರತೀಯ ಇತಿಹಾಸಕಾರ ಸಂಜಯ್ ಸುಬ್ರಹ್ಮಣ್ಯಂ ಅವರಿಗೆ ಇಸ್ರೇಲ್ನ ಪ್ರತಿಷ್ಠಿತ ಡಾನ್ ಡೇವಿಡ್ ಪ್ರಶಸ್ತಿ ಸಂದಾಯವಾಗಿದೆ.
- ಆರಂಭಿಕ ಆಧುನಿಕ ಯುಗದಲ್ಲಿ ಏಷ್ಯನ್ನರು, ಯುರೋಪಿಯನ್ನರು ಹಾಗೂ ಉತ್ತರ ಮತ್ತು ದಕ್ಷಿಣ ಅಮೆರಿಕದ ಜನರ ನಡುವಿನ ಅಂತರ್ಸಾಂಸ್ಕೃತಿಕ ಸಂಬಂಧ ಕುರಿತು ಸಂಜಯ್ ಅವರ ಕೆಲಸಕ್ಕಾಗಿ ಈ ವರ್ಷದ ಪ್ರಶಸ್ತಿ ಲಭಿಸಿದೆ.
- 10 ಲಕ್ಷ ಡಾಲರ್ ಮೊತ್ತದ ಈ ಪ್ರಶಸ್ತಿಯನ್ನು ಬೃಹತ್ ಇತಿಹಾಸ ವಿಭಾಗದಲ್ಲಿ ಸಂಜಯ್ ಮತ್ತು ಚಿಕಾಗೊ ವಿಶ್ವವಿದ್ಯಾಲಯದ ಪ್ರೊ.ಕೆನ್ನೆತ್ ಪೊಮೆರಾನ್ಜ್ ಸಮನಾಗಿ ಹಂಚಿಕೊಂಡಿದ್ದಾರೆ.
- ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದ ಮಾನವ ಸಾಧನೆಯನ್ನು ಪ್ರತಿನಿಧಿಸುವ, ವೈಜ್ಞಾನಿಕ, ತಾಂತ್ರಿಕ ಮತ್ತು ಮಾನವಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ವಾರ್ಷಿಕವಾಗಿ ಅಂತಾರಾಷ್ಟ್ರೀಯ ಡಾನ್ ಡೇವಿಡ್ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ವರ್ಷ ಮೂರು ಡಾನ್ ಡೇವಿಡ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
Related Posts

ಕಾವೇರಿ ನದಿ ನೀರು ಪ್ರಾಧಿಕಾರ
ಸುದ್ದಿಯಲ್ಲಿ ಏಕಿದೆ? ಕಾವೇರಿ ಜಲವಿವಾದ ನ್ಯಾಯಾಧೀಕರಣ 2007ರ ತನ್ನ ಐತೀರ್ಪಿನಲ್ಲಿ ಹೇಳಿದ್ದ ನೀರು ನಿರ್ವಹಣಾ ಮಂಡಳಿಯ ತದ್ರೂಪದಂತಿರುವ 'ಕಾವೇರಿ ನೀರು ನಿರ್ವಹಣಾ ಯೋಜನೆ-2018'ರ ಕರಡನ್ನು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರಕಾರ ಸಲ್ಲಿಸಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಲು ...
READ MORE
ಮನೆಗೊಬ್ಬರು ಯೋಗಪಟು ಯೋಜನೆ
ದೇಶದ 500 ಗ್ರಾಮಗಳನ್ನು ‘ಸಂಪೂರ್ಣ ಯೋಗ ಗ್ರಾಮ’ಗಳಾಗಿ ರೂಪಿಸುವ ಉಪಕ್ರಮವೊಂದನ್ನು ಆಯುಷ್ ಸಚಿವಾಲಯ ಹಮ್ಮಿಕೊಂಡಿದೆ.
ಪ್ರತಿ ಮನೆಯ ಕನಿಷ್ಠ ಒಬ್ಬ ವ್ಯಕ್ತಿ ನಿಯಮಿತವಾಗಿ ಯೋಗ ಅಭ್ಯಾಸ ಮಾಡಬೇಕು ಎಂಬುದು ಈ ಯೋಜನೆಯ ತಿರುಳು. ಜೂನ್ 21ರ ಅಂತರರಾಷ್ಟ್ರೀಯ ಯೋಗ ದಿನಕ್ಕೂ ...
READ MORE
ಪ್ರಮುಖ ಔಷಧಿಗಳ ಬ್ಯಾನ್
ಸುದ್ಧಿಯಲ್ಲಿ ಏಕಿದೆ ? 28 ಸ್ಥಿರ ಸಂಯೋಜನೆಯ ಔಷಧಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬ್ಯಾನ್ ಮಾಡಿದೆ.
ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧ ಮಾಡಲಾಗಿದ್ದು, ಇತರೆ 6 ಔಷಧವನ್ನು ನಿರ್ಬಂಧಿಸಿದೆ. ಇದರಿಂದ 2016ರಿಂದ ಸಂಯೋಜನೆಯ ...
READ MORE
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತಿ ಅಂಗವಾಗಿ 2015–16ನೇ ಸಾಲಿನಲ್ಲಿ ಪರಿಶಿಷ್ಟರಿಗೆ ವಸತಿ ಒದಗಿಸಲು ಅಂಬೇಡ್ಕರ್ ನಿವಾಸ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯ ಅಡಿಯಲ್ಲೇ ಈ ಯೋಜನೆಗೆ ಅನುದಾನ ಹೊಂದಿಸಲಾಗುವುದು.
ಗ್ರಾಮೀಣ ...
READ MORE
ವಿಶ್ವ ತುಳು ಸಮ್ಮೇಳನ
ಸುದ್ಧಿಯಲ್ಲಿ ಏಕಿದೆ ?ಕಡಲಾಯೆರೆದ ತುಳುವೆರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ತುಳು ಒಕ್ಕೂಟ ಸಹಕಾರದಲ್ಲಿ ದುಬೈಯ ಅಲ್ ನಾಸರ್ ಎರಡು ದಿನಗಳ ವಿಶ್ವ ತುಳು ಸಮ್ಮೇಳನ ಲೀಸರ್ ಲ್ಯಾಂಡ್ ಐಸ್ರಿಂಕ್ ಒಳಾಂಗಣ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಉದ್ಘಾಟನಾ ಸಮಾರಂಭ ...
READ MORE
ಪೌರತ್ವ ವಿಧೇಯಕ
ಸುದ್ಧಿಯಲ್ಲಿ ಏಕಿದೆ ?ಅಕ್ರಮ ವಲಸಿಗರ ಪಿಡುಗಿಗೆ ತಡೆ ಹಾಕುವ ಮಹತ್ವದ ಪೌರತ್ವ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಭಾರಿ ಗದ್ದಲದ ನಡುವೆ ಅಂಗೀಕಾರಗೊಂಡಿದೆ.
ಏನಿದು ಪೌರತ್ವ ವಿಧೇಯಕ?
ಪ್ರಸ್ತುತ ದೇಶದಲ್ಲಿ ಪೌರತ್ವ ಕಾಯಿದೆ-1955ರ ಪ್ರಕಾರ ವಲಸಿಗರನ್ನು ಗುರುತಿಸಲಾಗುತ್ತಿದೆ. ಈ ಕಾಯಿದೆಗೆ ತಿದ್ದುಪಡಿ ಮಾಡುವ ...
READ MORE
'ಮೇಘಾಲಯನ್ ಯುಗ'
ಸುದ್ಧಿಯಲ್ಲಿ ಏಕಿದೆ? ಇದೇನಿದುಮೇಘಾಲಯನ್ ಯುಗ ಎಂಬ ಅಚ್ಚರಿಯೇ? ಹೌದು, ನಾವೀಗ ಜೀವಿಸುತ್ತಿರುವುದು ಮೇಘಾಲಯನ್ ಯುಗದಲ್ಲಿ. ಮೇಘಾಲಯನ್ ಯುಗವು 4,200 ವರ್ಷಗಳ ಹಿಂದೆ ಆರಂಭಗೊಂಡಿದೆ. ಹೀಗೆಂದು ವಿಜ್ಞಾನಿಗಳೇ ಷರಾ ಬರೆದಿದ್ದಾರೆ.
ಭೂವಿಜ್ಞಾನಿಗಳು ಸೃಷ್ಟಿಸಿರುವ ಭೂಮಿಯ ಭೂವೈಜ್ಞಾನಿಕ ಇತಿಹಾಸದ ಹೊಸ ಅಧ್ಯಾಯವೇ ಮೇಘಾಲಯನ್ ಯುಗ.
ನಾವೀಗ ಹೊಲೊಸಿನ್ನಲ್ಲಿ ...
READ MORE
ಜಡ್ಜ್ಗಳ ಕೊರತೆ ಪಟ್ಟಿಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ
ಸುದ್ಧಿಯಲ್ಲಿ ಏಕಿದೆ ? ನ್ಯಾಯಾಧೀಶರ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳು 2, 3ನೇ ಸ್ಥಾನದಲ್ಲಿವೆ. ಕರ್ನಾಟಕ 7ನೇ ಸ್ಥಾನದಲ್ಲಿದೆ.
ಉತ್ತರ ಪ್ರದೇಶದಲ್ಲಿ 1,188 ಹುದ್ದೆಗಳು ...
READ MORE
ಇ–ವಾಹನ ಚಾರ್ಜಿಂಗ್ ಕೇಂದ್ರಕ್ಕೆ ಪರವಾನಗಿ ಅನಗತ್ಯ
ಬ್ಯಾಟರಿ ಚಾಲಿತ ವಾಹನಗಳ (ಇ–ವಾಹನ) ಚಾರ್ಜಿಂಗ್ ಕೇಂದ್ರಗಳಿಗೆ ಪರವಾನಗಿ ಪಡೆಯುವ ಅವಶ್ಯಕತೆ ಇಲ್ಲ ಎಂದು ಇಂಧನ ಸಚಿವಾಲಯ ಹೇಳಿದೆ. ಈ ಕ್ರಮದಿಂದಾಗಿ ಇ–ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ದೊರಕಲಿದೆ.
‘ವಿದ್ಯುಚ್ಛಕ್ತಿ ಕಾಯ್ದೆ ಅಡಿಯಲ್ಲಿ ವಿದ್ಯುತ್ ಪ್ರಸರಣ, ಸರಬರಾಜು, ...
READ MORE
ಆಯುಷ್ಮಾನ್ಭವ
ಸುದ್ಧಿಯಲ್ಲಿ ಏಕಿದೆ ?ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಬಡವರ ಆರೋಗ್ಯ ಕಾಪಾಡುವ, ಜಗತ್ತಿನ ಅತಿ ದೊಡ್ಡ ಸರಕಾರ ಪ್ರಾಯೋಜಿತ ಹೆಲ್ತ್ ಕೇರ್ ಯೋಜನೆ 'ಆಯುಷ್ಮಾನ್ ಭಾರತ್' ಲೋಕಾರ್ಪಣೆಗೊಂಡಿತು.
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ...
READ MORE“15th ಮೇ 2018 ಕನ್ನಡ ಪ್ರಚಲಿತ ವಿದ್ಯಮಾನ”
20th ಮಾರ್ಚ್ 2018 ಕನ್ನಡ ಪ್ರಚಲಿತ ವಿದ್ಯಮಾನ
“14th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
ಅಂಬೇಡ್ಕರ್ ನಿವಾಸ ಯೋಜನೆ
“24 ನವೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“09 ಜನವರಿ 2019 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
20th ಜುಲೈ 2018 ಕನ್ನಡ ಪ್ರಚಲಿತ ವಿದ್ಯಮಾನ
“31 ಡಿಸೆಂಬರ್ 2018 ರ ಕನ್ನಡ ಪ್ರಚಲಿತ ವಿದ್ಯಮಾನಗಳು”
“17th ಏಪ್ರಿಲ್ 2018 ಕನ್ನಡ ಪ್ರಚಲಿತ ವಿದ್ಯಮಾನ”
“24th ಸೆಪ್ಟೆಂಬರ್ 2018 ಕನ್ನಡ ಪ್ರಚಲಿತ ವಿದ್ಯಮಾನ”
Super good information