Published on: May 28, 2024

ಡಿಡಿ ಕಿಸಾನ್ ವಾಹಿನಿಯಲ್ಲಿ ಎ.ಐ ನಿರೂಪಕರು

ಡಿಡಿ ಕಿಸಾನ್ ವಾಹಿನಿಯಲ್ಲಿ ಎ.ಐ ನಿರೂಪಕರು

ಸುದ್ದಿಯಲ್ಲಿ ಏಕಿದೆ? ಕೃಷಿಗೆ ಮೀಸಲಾದ ದೂರದರ್ಶನದ ಕಿಸಾನ್ ವಾಹಿನಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಎ.ಐ ಕ್ರಿಶ್ ಹಾಗೂ ಎ.ಐ ಭೂಮಿ ಹೆಸರಿನ ಇಬ್ಬರು ಎ.ಐ ಸುದ್ದಿ ನಿರೂಪಕರ ಪರಿಚಯಕ್ಕೆ ಕೇಂದ್ರ ಕೃಷಿ ಸಚಿವಾಲಯ ಮುಂದಾಗಿದೆ.

ಮುಖ್ಯಾಂಶಗಳು

  • ಈ ಕೃತಕ ಸುದ್ದಿ ವಾಚಕರು ಭಾರತ ಹಾಗೂ ವಿದೇಶಿ ಸೇರಿದಂತೆ 50 ಭಾಷೆಗಳಲ್ಲಿ ಸುದ್ದಿ ಓದಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
  • ಕೃಷಿಗೆ ಸಂಬಂಧಿಸಿದ ಸುದ್ದಿಗಳನ್ನು ವಾಚಿಸಲಿದ್ದಾರೆ.
  • ವಿರಾಮ ಇಲ್ಲದೆಯೇ ಈ ಸುದ್ದಿ ನಿರೂಪಕರು ದಿನದ 24 ಗಂಟೆ ಕಾಲ ಸುದ್ದಿ ಓದುವ ಸಾಮರ್ಥ್ಯ ಹೊಂದಿದ್ದಾರೆ.
  • ಕೃಷಿ ಸಂಶೋಧನೆ, ಮಾರುಕಟ್ಟೆಯ ಬೆಲೆ, ಹವಾಮಾನ ಮುನ್ಸೂಚನೆ, ಸರ್ಕಾರದ ಯೋಜನೆಗಳ ಬಗ್ಗೆ ರೈತರಿಗೆ ಆಯಾಕ್ಷಣದ ತಾಜಾ ಮಾಹಿತಿಗಳನ್ನು ನೀಡಲಿದ್ದಾರೆ.
  • ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಲಿದ್ದಾರೆ.

ಉದ್ದೇಶ

ಒಂಬತ್ತನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ವಾಹಿನಿಗೆ ಹೊಸ ಸ್ವರೂಪ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರೈತಾಪಿ ವರ್ಗಕ್ಕೆ ಮತ್ತಷ್ಟು ಉಪಯುಕ್ತವಾದ ಮಾಹಿತಿ ನೀಡುವ ಉದ್ದೇಶದಿಂದ ಪ್ರಸಾರ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅನುಷ್ಠಾನಕ್ಕೆ ಮುಂದಾಗಿದೆ.

ಡಿಡಿ ಕಿಸಾನ್

  • ಭಾರತ ಸರ್ಕಾರ ಆರಂಭ ಮಾಡಿದ ಮತ್ತು ರೈತರಿಗೆ ಮೀಸಲಾದ ದೇಶದ ಮೊದಲ ಸರ್ಕಾರಿ ವಾಹಿನಿ ಇದಾಗಿದೆ.
  • ಈ ವಾಹಿನಿಯನ್ನು 2015ರ ಮೇ 26 ರಂದು ಕಾರ್ಯಾರಂಭಿಸಲಾಯಿತು.
  • ಸ್ಥಾಪನೆಯ ಉದ್ದೇಶ:ಹವಾಮಾನ, ಜಾಗತಿಕ ಮತ್ತು ಸ್ಥಳೀಯ ಮಾರುಕಟ್ಟೆಗಳು ಇತ್ಯಾದಿಗಳಲ್ಲಿನ ಬದಲಾವಣೆಗಳ ಬಗ್ಗೆ ರೈತರಿಗೆ ಸದಾ ಮಾಹಿತಿ ನೀಡುವುದಾಗಿದೆ. ಮತ್ತು ಇದರಿಂದ ರೈತರು ಮುಂಚಿತವಾಗಿ ಸೂಕ್ತ ಯೋಜನೆಗಳನ್ನು ಕೈಗೊಂಡು ಸಮಯಕ್ಕೆ ಅನುಗುಣವಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.