Published on: April 30, 2024

ಇಂದುಲೇಖಾ ಪೇಂಟಿಂಗ್

ಇಂದುಲೇಖಾ ಪೇಂಟಿಂಗ್

ಸುದ್ದಿಯಲ್ಲಿ ಏಕಿದೆ? ಇತ್ತೀಚೆಗೆ, ಖ್ಯಾತ ಕಲಾವಿದ ರಾಜಾ ರವಿವರ್ಮ ಅವರ 176 ನೇ ಜನ್ಮದಿನ(29 ಏಪ್ರಿಲ್ 1848) ದ ಆಚರಣೆಯ ಸಂದರ್ಭದಲ್ಲಿ ಅವರ ಐಕಾನಿಕ್ ಪೇಂಟಿಂಗ್(ವರ್ಣಚಿತ್ರ) “ಇಂದುಲೇಖಾ” ದ ಮೊದಲ ನೈಜ ಪ್ರತಿಯ ಅನಾವರಣವು ರವಿವರ್ಮನ ಜನ್ಮಸ್ಥಳವಾದ ತಿರುವಾಂಕೂರಿನ ಕಿಲಿಮನೂರ್ ಅರಮನೆಯಲ್ಲಿ ನಡೆಯಿತು.

ಮುಖ್ಯಾಂಶಗಳು

  • 1889 ರಲ್ಲಿ ಒ. ಚಂದು ಮೆನನ್ ಅವರ ಮಲಯಾಳಂ ಸಾಹಿತ್ಯ ಕಾದಂಬರಿಯಲ್ಲಿ ಇಂದುಲೇಖಾ ಚಿತ್ರಕಲೆಯನ್ನು ಮೊದಲ ಬಾರಿಗೆ ಪ್ರಕಟಿಸಲಾಗಿತ್ತು
  • ಈ ಚಿತ್ರಕಲೆ 2022 ರಲ್ಲಿ ಸಾರ್ವಜನಿಕರ ಗಮನ ಸೆಳೆಯಿತು.

ರಾಜಾ ರವಿವರ್ಮ

  • ರಾಜಾ ರವಿವರ್ಮರನ್ನು ಆಧುನಿಕ ಭಾರತೀಯ ಕಲೆಯ ಪಿತಾಮಹ ಎಂದು ಪರಿಗಣಿಸಲಾಗಿದೆ.
  • ಅವರು ಕೇರಳದ ಶ್ರೀಮಂತ ಕುಟುಂಬದಲ್ಲಿ ಜನಿಸಿದರು, 22 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
  • ತೈಲವರ್ಣಗಳನ್ನು ಬಳಸಿದ ಮೊದಲ ಭಾರತೀಯ ಕಲಾವಿದರಲ್ಲಿ ವರ್ಮಾ ಕೂಡ ಒಬ್ಬರು
  • ಭಾರತೀಯ ಮತ್ತು ಯುರೋಪಿಯನ್ ಸೌಂದರ್ಯಶಾಸ್ತ್ರವನ್ನು ಸಂಯೋಜಿಸುವ ಹೊಸ ತಂತ್ರಗಳು ಮತ್ತು ಶೈಲಿಗಳನ್ನು ಪರಿಚಯಿಸುವ ಮೂಲಕ ಭಾರತೀಯ ಕಲೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಕೀರ್ತಿ ರಾಜಾ ರವಿವರ್ಮರಿಗೆ ಸಲ್ಲುತ್ತದೆ.
  • ಅವರು ತಮ್ಮ ಕಲಾಕೃತಿಗಳನ್ನು ಯುರೋಪ್‌ನಲ್ಲಿ ಪ್ರದರ್ಶಿಸಿದ ಮೊದಲ ಭಾರತೀಯ ಕಲಾವಿದರಾಗಿದ್ದರು, ಯುರೋಪ್‍ನಲ್ಲಿಯೂ ಸಹ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದರು.
  • ಅವರು ಭಾರತೀಯ ಮತ್ತು ಯುರೋಪಿಯನ್ ತಂತ್ರಗಳನ್ನು ಮಿಶ್ರಣ ಮಾಡುವ ಮೂಲಕ ಹೊಸ ಶೈಲಿಯ ವರ್ಣಚಿತ್ರವನ್ನು ರಚಿಸಿದರು, ಇದು “ರವಿ ವರ್ಮ ಶೈಲಿ” ಎಂದು ಕರೆಯಲ್ಪಟ್ಟಿತು.
  • ಅವರು ಲಂಡನ್‌ನಲ್ಲಿರುವ ರಾಯಲ್ ಅಕಾಡೆಮಿ ಆಫ್ ಆರ್ಟ್ಸ್‌ನ ಸದಸ್ಯರಾಗಿದ್ದರು, ಈ ಗೌರವವನ್ನು ಪಡೆದ ಮೊದಲ ಭಾರತೀಯ ಕಲಾವಿದರಾದರು.
  • ಕಲೆಗೆ ಅವರು ನೀಡಿದ ಕೊಡುಗೆಗಳಿಗಾಗಿ 1904 ರಲ್ಲಿ ಬ್ರಿಟಿಷ್ ಸರ್ಕಾರವು ಅವರಿಗೆ ಕೈಸರ್-ಐ-ಹಿಂದ್ ಚಿನ್ನದ ಪದಕವನ್ನು ನೀಡಿ ಗೌರವಿಸಿತು.
  • ಅವರ ಗೌರವಾರ್ಥವಾಗಿ 2013 ರಲ್ಲಿ, ಬುಧ ಗ್ರಹದ ಒಂದು ಕುಳಿಗೆ ಅವರ ಹೆಸರನ್ನು ಇಡಲಾಯಿತು
  • ರಾಜಾ ರವಿವರ್ಮ ಅಕ್ಟೋಬರ್ 2, 1906 ರಂದು ಕೇರಳದ ಅಟ್ಟಿಂಗಲ್‌ನಲ್ಲಿ ನಿಧನರಾದರು.