Published on: February 16, 2023

‘ಐಎನ್ಎಸ್ ಖುಕ್ರಿ’

‘ಐಎನ್ಎಸ್ ಖುಕ್ರಿ’


ಸುದ್ದಿಯಲ್ಲಿ ಏಕಿದೆ? 1971ರ ಇಂಡೋ–ಪಾಕ್ ಕದನದ ವೇಳೆ ಸಮುದ್ರದಲ್ಲಿ ಮುಳುಗಡೆಯಾಗಿದ್ದ ಭಾರತದ ಯುದ್ಧನೌಕೆ ‘ಐಎನ್ಎಸ್ ಖುಕ್ರಿ’ಗೆ ಕಡಲಾಳದಲ್ಲಿ ಗೌರವಾರ್ಪಣೆ ಮಾಡಲಾಗಿದೆ


 ಮುಖ್ಯಾಂಶಗಳು

  • ಸಮುದ್ರ ಗರ್ಭ ಸೇರಿರುವ ನೌಕೆಯ ಬಳಿಗೆ ತಲುಪಿದ್ದ ಭಾರತದ ನೌಕಾದಳದ ಮುಳುಗು ತಜ್ಞರು ನೌಕೆಯ 1971ರ ಯುದ್ಧದಲ್ಲಿ ನಷ್ಟವಾಗಿದ್ದ ನೌಕೆಯ ವಿಶ್ರಾಂತಿ ಸ್ಥಳಕ್ಕೆ ತೆರಳಿ ಅವಶೇಷಗಳಿಗೆ ಪುಷ್ಪ ನಮನ ಸಲ್ಲಿಸಿದ್ದರು.

ಹಿನ್ನೆಲೆ

  • ಇಂಡೋ–ಪಾಕ್ ಯುದ್ಧದ ವೇಳೆ ಗುಜರಾತ್ನ ಡಿಯು ಬಳಿ ಪಾಕಿಸ್ತಾನದ ಜಲಾಂತರ್ಗಾಮಿ ಹಾಂಗೋರ್ನ ದಾಳಿಗೆ ಒಳಗಾಗಿದ್ದ ಐಎನ್ಎಸ್ ಖುಕ್ರಿ, ಸಮುದ್ರದಲ್ಲಿ ಮುಳುಗಡೆಯಾಗಿತ್ತು.
  • 1971ರ ಡಿ. 9ರಂದು ನಡೆದಿದ್ದ ಈ ಘಟನೆಯಲ್ಲಿ ನೌಕೆಯ ಕ್ಯಾಪ್ಟನ್ ಮಹೇಂದ್ರ ನಾಥ್ ಮುಲ್ಲಾ ಸೇರಿದಂತೆ 18 ಅಧಿಕಾರಿಗಳು ಮತ್ತು 176 ಸೈನಿಕರು ಹುತಾತ್ಮಕರಾಗಿದ್ದರು. 6 ಅಧಿಕಾರಿಗಳು ಮತ್ತು 61 ಸೈನಿಕರು ದುರಂತದಲ್ಲಿ ಬದುಕುಳಿದಿದ್ದರು.

ಶಿಪ್ ನ ವಿವರ

  • 1989ರ ಆಗಸ್ಟ್ 23 ರಂದು ಖುಕ್ರಿ ಹಡಗನ್ನು ಮಜಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ನಿರ್ಮಿಸಲಾಗಿತ್ತು. ಪಾಶ್ಚಿಮಾತ್ಯ ಮತ್ತು ಪೂರ್ವ ನೌಕಾಪಡೆಗಳ ಎರಡೂ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದು, ಹಡಗನ್ನು ಮುಂಬೈನಲ್ಲಿಅಂದಿನ ರಕ್ಷಣಾ ಸಚಿವ ಕೃಷ್ಣಚಂದ್ರ ಪಂತ್ ಹಾಗೂ ದಿವಂಗತ ಕ್ಯಾಪ್ಟನ್ ಮಹೇಂದ್ರ ನಾಥ್ ಮುಲ್ಲಾಅವರ ಪತ್ನಿ ಶ್ರೀಮತಿ ಸುಧಾ ಮುಲ್ಲಾ, ಎಂವಿಸಿ ಕಮಾಂಡರ್ (ಈಗ ವೈಸ್ ಅಡ್ಮಿರಲ್ ನಿವೃತ್ತ) ಸಂಜೀವ್ ಭಾಸಿನ್ ಸಮ್ಮುಖದಲ್ಲಿ ನೌಕಾಪಡೆಗೆ ಸೇರಿಸಿಕೊಳ್ಳಲಾಗಿತ್ತು.