Published on: December 22, 2022

‘ಒಪಿಎಸ್‌’ ಸಂಘರ್ಷ

‘ಒಪಿಎಸ್‌’ ಸಂಘರ್ಷ

ಸುದ್ದಿಯಲ್ಲಿ ಏಕಿದೆ? ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹೊಸ ಪಿಂಚಣಿ ವ್ಯವಸ್ಥೆಯನ್ನು (ಎನ್‌ಪಿಎಸ್) ರದ್ದುಗೊಳಿಸಿ ಹಳೆಯ ಪಿಂಚಣಿ ಪದ್ಧತಿ (ಒಪಿಎಸ್‌) ಜಾರಿಗೊಳಿಸಿರುವ ಬೆನ್ನಲ್ಲೇ ರಾಜ್ಯದಲ್ಲೂ ಸರಕಾರಿ ನೌಕರರು ‘ಒಪಿಎಸ್‌’ ಬೇಡಿಕೆಯನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ.

ುಖ್ಯಾಂಶಗಳು

  • 2006ರ ನಂತರ ನೇಮಕವಾದ ಸರಕಾರಿ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಈ ವ್ಯವಸ್ಥೆಯಿಂದ ಸರಕಾರಿ ನೌಕರರಿಗೆ ನಿವೃತ್ತಿ ಸಂದರ್ಭದಲ್ಲಿ ಯಾವುದೇ ಸೌಲಭ್ಯ ದೊರೆಯುವುದಿಲ್ಲ.
  • ಎನ್‌ಪಿಎಸ್‌ನಿಂದಾಗುತ್ತಿರುವ ಶೋಷಣೆಯನ್ನರಿತ ರಾಜಸ್ಥಾನ, ಛತ್ತೀಸ್‌ಗಡ, ಪಂಜಾಬ್‌ ಮತ್ತು ಜಾರ್ಖಂಡ್‌ ರಾಜ್ಯಗಳು ಇದನ್ನು ರದ್ದುಗೊಳಿಸಿವೆ.
  • “2018ರಲ್ಲಿ ನಿವೃತ್ತಿ ಮತ್ತು ಮರಣ ಉಪಧನ ಜಾರಿ ಮಾಡಲಾಗಿದೆ. ಮರಣ ಹೊಂದಿದ ಸರಕಾರಿ ನೌಕರರ ಪಾಲಿನ ವಂತಿಕೆ ಹಾಗೂ ಅದರ ಮೇಲಿನ ಲಾಭಾಂಶವನ್ನು ಅವರ ಅವಲಂಬಿತರಿಗೆ ಸಿಗುವಂತೆ ಮಾಡಲಾಗಿದೆ.

ಹಳೆಯ ಪಿಂಚಣಿ ಯೋಜನೆ (ಒಪಿಎಸ್‌)

  • ವೇತನ ಪರಿಷ್ಕರಣೆಯಾದಂತೆಲ್ಲಾ ನೌಕರರ ವೇತನ ಹೆಚ್ಚಾಗುತ್ತಿತ್ತು.
  • ನಿವೃತ್ತಿ ಬಳಿಕ ವೇತನದಲ್ಲಿ ಶೇ. 50ರಷ್ಟು ನಿವೃತ್ತಿ ವೇತನ ಸಿಗುತ್ತಿತ್ತು.
  • ಒಂದು ವೇಳೆ ನೌಕರ ಅಕಾಲಿಕ ಮರಣ ಹೊಂದಿದರೂ ಕುಟುಂಬದ ಅವಲಂಬಿತರಿಗೆ ಪಿಂಚಣಿ ಹಣ ಸೇರುತ್ತಿತ್ತು. ಇದರಿಂದ ಕುಟುಂಬ ಆರ್ಥಿಕ ಸ್ವಾವಲಂಬನೆಯಿಂದ ಜೀವನ ನಡೆಸಬಹುದಾಗಿತ್ತು.
  • ಸರ್ಕಾರ ತೆರಿಗೆದಾರರ ಹಣವನ್ನು ಬಳಸಿ ಈ ಪಿಂಚಣಿ ನೀಡುತ್ತಿತ್ತು.
  • ಕನಿಷ್ಟ ಹತ್ತು ವರ್ಷ ಸರ್ಕಾರೀ ಸೇವೆ ಸಲ್ಲಿಸಿದ ನೌಕರರು ಈ ಪಿಂಚಣಿ ಯೋಜನೆಗೆ ಅರ್ಹರಾಗಿರುತ್ತಿದ್ದರು.
  • ಈ ಪಿಂಚಣಿ ಪಡೆಯಲು ಅವರು ಯಾವುದೇ ಮೊತ್ತವನ್ನು ಹೂಡಿಕೆ ಮಾಬೇಕಾಗುವುದಿಲ್ಲ

ನೂತನ ಪಿಂಚಣಿ ಯೋಜನೆಗೆ (ಎನ್‌ಪಿಎಸ್‌)

  • 2006 ಏಪ್ರಿಲ್‌ 1ರ ನಂತರ ಸರಕಾರಿ ಹುದ್ದೆಗಳಿಗೆ ನೇಮಕವಾದ ನೌಕರರೆಲ್ಲರೂ ನೂತನ ಪಿಂಚಣಿ ಯೋಜನೆಗೆ (ಎನ್‌ಪಿಎಸ್‌) ವ್ಯಾಪ್ತಿಗೆ ಒಳಪಟ್ಟಿದ್ದಾರೆ.
  • ಅಟಲ್‌ ಬಿಹಾರಿ ವಾಜಪೇಯಿ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿತು.
  • ಇದರ ಅಡಿಯಲ್ಲಿ ನಿವೃತ್ತಿಯ ನಂತರ ಎಷ್ಟು ಮೊತ್ತ ಪಿಂಚಣಿಯಾಗಿ ದೊರೆಯುತ್ತದೆ ಎಂದು ನಿರ್ಧಿಷ್ಟವಾಗಿ ಹೇಳಲಾಗುವುದಿಲ್ಲ. ಕಾರಣ ಪ್ರತಿ ತಿಂಗಳು ಏನ್ ಪಿ ಎಸ ಖಾತೆಯಲ್ಲಿ ವೇತನದ ಶೇ. 10 ರಷ್ಟನ್ನು ಇರಿಸಬೇಕು. ಅದಕ್ಕೆ ಪ್ರತಿಯಾಗಿ ಸರ್ಕಾರವು ಶೇ. 14 ರಷ್ಟನ್ನು ನೀಡುತ್ತದೆ. ಈ ರೀತಿ ಜಮಾ ಆದ ಮೊತ್ತಕ್ಕೆ ಎಷ್ಟು ಲಾಭ ಸಿಗುತ್ತದೆ ಎಂಬುದನ್ನು ಆಧರಿಸಿ ಪಿಂಚಣಿ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ.
  • ನೌಕರರ ಸಂಬಳದಿಂದ ಕಡಿತ ಮಾಡಿದಮೊತ್ತವನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿರುವ ಕಂಪನಿಗಳು ಆಯಾ ಕಾಲಕ್ಕೆ ಅವರ ಲಾಭ ನಷ್ಟಗಳ ಆಧಾರದಲ್ಲಿ ಪಿಂಚಣಿಯ ಮೊತ್ತವನ್ನು ನಿಗದಿಪಡಿಸಬಹುದು. ಆ ಮೊತ್ತ ಹೆಚ್ಚಿರಬಹುದು, ಕಡಿಮೆ ಇರಬಹುದು ಅಥವಾ ಏನೂ ಇಲ್ಲದೆ ಹೋಗಬಹುದು. ಇದರ ಪ್ರಕಾರ ಪಿಂಚಣಿ ಮೊತ್ತದ ನೀಡಿಕೆಯ ಬಗ್ಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಆಯಾ ಕಾಲಘಟದಲ್ಲಿ ಪಿಂಚಣಿ ನಿರ್ವಾಹಕರ ತೀರ್ಮಾನದಂತೆ ಪಿಂಚಣಿಯನ್ನು ನೀಡಲಾಗುತ್ತದೆ

ಜಾರಿ: ಕೇಂದ್ರ ಸರ್ಕಾರವು ಹೊಸ ಪಿಂಚಣಿ ಯೋಜನೆ ಜಾರಿಗೊಳಿಸುವ ಉದ್ದೇಶದಿಂದ “ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ”(ಪಿ ಎಫ್ ಆರ್ ಡಿ ಎ) ರೂಪಿಸಿದೆ. 2004 ರ ಜನವರಿ ಒಂದರಿಂದ ನೇಮಕವಾಗುವ ಕೇಂದ್ರ ಸರ್ಕಾರೀ ನೌಕರರಿಗೆ ಈ ಹೊಸ ಪಿಂಚಣಿ ಯೋಜನೆ ಜಾರಿಗೆ ಬಂದಿದೆ. ರಾಜ್ಯದಲ್ಲಿ  ಹೊಸ ಪಿಂಚಣಿ  ಯೋಜನೆಯು   4 ನೇ   ಏಪ್ರಿಲ್ 2006 ರಿಂದ ಜಾರಿಗೆ ಬಂದಿದೆ. ಈ ಕುರಿತು 2009 ರಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, 2006 ರಿಂದ ಪೂರ್ವಾನ್ವಯವಾಗುವಂತೆ ಇದನ್ನು ಜಾರಿಗೆ ತರಲು ತೀರ್ಮಾನಿಸಲಾಗಿತ್ತು.

ಎನ್‌ಪಿಎಸ್‌ ಜಾರಿಗೆ ತಂದಿರುವ ಉದ್ದೇಶ

ಸರಕಾರಿ ನೌಕರರಿಗೆ ವೇತನ ಸೇರಿದಂತೆ ಪಿಂಚಣಿ ಯೋಜನೆಗಾಗಿ ಸರಕಾರ ಕೋಟ್ಯಂತರ ಹಣ ನೀಡಬೇಕು. ಇನ್ನು ಕೇಂದ್ರದಲ್ಲಿ ವೇತನ ಪರಿಷ್ಕರಣೆಯಾದಂತೆ ರಾಜ್ಯ ಸರಕಾರಿ ನೌಕರರಿಗೂ ವೇತನ ಪರಿಷ್ಕರಣೆ ಮಾಡಬೇಕು. ಮತ್ತಷ್ಟು, ಕೋಟಿ ರೂಪಾಯಿ ಮೀಸಲಿಡಬೇಕೆಂದು ಕೇಂದ್ರ ಸರಕಾರ 2006ರಲ್ಲಿ ಈ ಎನ್‌ಪಿಎಸ್‌ ಯೋಜನೆ ಜಾರಿಗೆ ತಂದಿದೆ.