Published on: December 6, 2022

ಕಮಿಟಿ ಆನ್‌ ಆ್ಯಕ್ಸೆಸಿಬಿಲಿಟಿ

ಕಮಿಟಿ ಆನ್‌ ಆ್ಯಕ್ಸೆಸಿಬಿಲಿಟಿ

ಸುದ್ದಿಯಲ್ಲಿ ಏಕಿದೆ?

ಅಂಗವಿಕಲರಿಗೆ ನ್ಯಾಯಾಂಗ ಸೇವೆ ಸುಲಭವಾಗಿ ದೊರೆಯುವಂತೆ ಮಾಡುವ ಗುರಿಯೊಂದಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಸುಪ್ರೀಂ ಕೋರ್ಟ್‌ ಕಮಿಟಿ ಆನ್‌ ಆ್ಯಕ್ಸೆಸಿಬಿಲಿಟಿ’ ಹೆಸರಿನ ಸಮಿತಿಯೊಂದನ್ನು ರಚಿಸಿದ್ದಾರೆ. 

ಮುಖ್ಯಾಂಶಗಳು

  • ಮುಖ್ಯಸ್ಥರು: ಈ ಸಮಿತಿಗೆ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಎಸ್‌.ರವೀಂದ್ರ ಭಟ್‌ ಮುಖ್ಯಸ್ಥರಾಗಿರಲಿದ್ದಾರೆ.
  • ಸದಸ್ಯರು :ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಯು) ಓರ್ವ ಪ್ರಾಧ್ಯಾಪಕ, ಸುಪ್ರೀಂ ಕೋರ್ಟ್‌ ಉದ್ಯೋಗಿಯಾಗಿರುವ ಅಂಗವಿಕಲ ವ್ಯಕ್ತಿ, ಸುಪ್ರೀಂ ಕೋರ್ಟ್‌ನ ವಕೀಲರ ಸಂಘ ನಾಮನಿರ್ದೇಶನ ಮಾಡುವ ವಕೀಲ (ಅಂಗವಿಕಲ) ಹಾಗೂ ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡುವ ವ್ಯಕ್ತಿಯೊಬ್ಬರು ಸಮಿತಿಯಲ್ಲಿ ಇರಲಿದ್ದಾರೆ. ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯ ಅಧಿಕಾರಿಯೊಬ್ಬರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.

ಉದ್ದೇಶ

  • ‘ನ್ಯಾಯಾಲಯಕ್ಕೆ ಬರುವ ಅಂಗವಿಕಲರು ಎದುರಿಸುತ್ತಿರುವ ಸಮಸ್ಯೆ ಹಾಗೂ ಅದರ ಸ್ವರೂಪವನ್ನು ಅರಿಯುವ ಸಲುವಾಗಿ ಅಗತ್ಯ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಬಿಡುಗಡೆಗೊಳಿಸುವ ಹೊಣೆಯನ್ನು ಈ ಸಮಿತಿಗೆ ವಹಿಸಲಾಗಿದೆ’.