Published on: September 3, 2022

ಖಾದಿ ಉತ್ಸವ

ಖಾದಿ ಉತ್ಸವ

ಸುದ್ದಿಯಲ್ಲಿ ಏಕಿದೆ?

ಆಗಸ್ಟ್  27 ರಂದು  ಅಹಮದಾಬಾದ್‌ನ ಸಾಬರಮತಿ ನದಿ ತೀರದಲ್ಲಿ ‘ಖಾದಿ ಉತ್ಸವ’ ನಡೆಯಿತು. ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಭಾಗವಾಗಿ ಈ ಉತ್ಸವವನ್ನು ಆಯೋಜಿಸಲಾಗಿದೆ. ಖಾದಿ ಉತ್ಸವದಲ್ಲಿ ಸುಮಾರು 7,500 ಮಹಿಳೆಯರು ಏಕಕಾಲಕ್ಕೆ ಚರಕದಲ್ಲಿ ನೂಲುವ ಮೂಲಕ ದಾಖಲೆ ಬರೆದಿದ್ದಾರೆ.

ಮುಖ್ಯಾಂಶಗಳು

  • ಖಾದಿಯಲ್ಲಿ ಕಡಿಮೆ ಇಂಗಾಲದ ಅಂಶವಿದೆ. ತಾಪಮಾನ ಹೆಚ್ಚಿರುವ ಅನೇಕ ದೇಶಗಳಿವೆ, ಆರೋಗ್ಯದ ದೃಷ್ಟಿಯಿಂದ ಖಾದಿ ಕೂಡ ಬಹಳ ಮುಖ್ಯವಾಗಿದೆ. ಆದ್ದರಿಂದ ಖಾದಿ ಜಾಗತಿಕ ಮಟ್ಟದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.
  • ಇದೇ ಸಂದರ್ಭದಲ್ಲಿ ಪ್ರಧಾನಿಯವರು ಅಹಮದಾಬಾದ್‌ನಲ್ಲಿ ಅಟಲ್ ಸೇತುವೆಯನ್ನು ಉದ್ಘಾಟಿಸಿದರು. ಅಟಲ್ ಸೇತುವೆಯು ಸಾಬರಮತಿ ನದಿಯ ಎರಡು ದಡಗಳನ್ನು ಸಂಪರ್ಕಿಸುವುದು ಮಾತ್ರವಲ್ಲದೆ ವಿನ್ಯಾಸ ಮತ್ತು ನಾವೀನ್ಯತೆಯಲ್ಲಿ ಅಭೂತಪೂರ್ವವಾಗಿದೆ.

    ಖಾದಿ ಉತ್ಸವದ ಉದ್ದೇಶ

  • ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಭಾಗವಾಗಿ ಈ ಉತ್ಸವವನ್ನು ಆಯೋಜಿಸಲಾಗಿತ್ತು. ಖಾದಿ ಉತ್ಸವವನ್ನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಖಾದಿಗೆ ಮತ್ತು ಅದರ ಮಹತ್ವವನ್ನು ಗೌರವಿಸಲು ಆಯೋಜಿಸಲಾಗಿತ್ತು.

ಅಟಲ್ ಸೇತುವೆ

·        ಅಹಮದಾಬಾದ್‌ನ ಸಾಬರಮತಿ ನದಿಯ ಮೇಲೆ ನಿರ್ಮಿಸಲಾಗಿರುವ ಅಟಲ್‌ ಸೇತುವೆ ಸಾಬರಮತಿ ನದಿಯ ಪೂರ್ವ ಮತ್ತು ಪಶ್ಚಿಮದ ದಂಡೆಗಳಿಗೆ ಸಂಪರ್ಕ ಕಲ್ಪಸುತ್ತದೆ.

·        ಅಮ್ದಾವದ್ ಮುನ್ಸಿಪಲ್ ಕಾರ್ಪೊರೇಷನ್ ನಿರ್ಮಿಸಿರುವ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ಸೇತುವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

·        ಪಾದಚಾರಿಗಳಿಗೆ ಮಾತ್ರ ಇರುವ ‘ಅಟಲ್ ಎಲ್ಲಿಸ್ ಸೇತುವೆ ಮತ್ತು ಸರ್ದಾರ್ ಸೇತುವೆಯ ನಡುವೆ ನಿರ್ಮಿಸಲಾಗಿದೆ. – ಕಣ್ಮನ ಸೆಳೆಯುವ ವಿನ್ಯಾಸ ಮತ್ತು ಎಲ್ಇಡಿ ಲೈಟಿಂಗ್ ಹೊಂದಿರುವ ಈ ಸೇತುವೆಯು ಸುಮಾರು 300 ಮೀಟರ್ ಉದ್ದ ಮತ್ತು ಮಧ್ಯದಲ್ಲಿ 14 ಮೀಟರ್ ಅಗಲವಿದೆ.