Published on: January 20, 2022

ಚಿನ್ನದ ನಿಕ್ಷೇಪ!

ಚಿನ್ನದ ನಿಕ್ಷೇಪ!

ಸುದ್ಧಿಯಲ್ಲಿ ಏಕಿದೆ ?  ರಾಜ್ಯದ 10 ಕಡೆ ಚಿನ್ನದ ನಿಕ್ಷೇಪಗಳನ್ನು ಗುರುತಿಸಿರುವ ಜಿಯಾಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ 8 ಕಡೆ ಗಣಿ ಆರಂಭಕ್ಕೆ ಖಾಸಗಿ ಕಂಪನಿಗಳಿಗೆ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದೆ. ಆ ಮೂಲಕ ರಾಜ್ಯದಲ್ಲಿ ಚಿನ್ನದ ಗಣಿಗಾರಿಕೆಗೆ ಹೊಸ ಪ್ರದೇಶಗಳನ್ನು ಸಜ್ಜುಗೊಳಿಸಲು ಸಿದ್ಧತೆಗಳು ನಡೆದಿವೆ.

ಮುಖ್ಯಾಂಶಗಳು

  • ಜಿ-4 ಹಂತದ ಪರಿಶೀಲನೆಯಲ್ಲಿ ಚಿನ್ನದ ನಿಕ್ಷೇಪವಿರುವುದು ಖಚಿತವಾಗಿರುವ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹರಾಜಿಗೆ ಮುಂದಾಗಿದ್ದು, ಮಾರ್ಚ್ ವೇಳೆಗೆ ಚಿನ್ನದ ಗಣಿ ಬಗ್ಗೆ ನಿಖರತೆ ದೊರೆಯಲಿದೆ.

ಕೆಜಿಎಫ್‌ಗೆ ಮರುಜೀವ

  • ಕೆಜಿಎಫ್‌ನ ಸೈನೈಡ್‌ ಗುಡ್ಡ ಮತ್ತು ಗಣಿ ಪ್ರದೇಶಗಳಲ್ಲಿನ ನಿಕ್ಷೇಪಗಳ ಕುರಿತು ಟೆಕ್ನೋ ಎಕನಾಮಿಕಲ್‌ ಫೀಸಿಬಿಲಿಟಿ ಸ್ಟಡಿ ಹಾಗೂ ಮಿನರಲ್‌ ಎಕ್ಸ್‌ಫೊಲರೇಷನ್‌ ಕಾರ್ಪೊರೇಷನ್‌ ಲಿಮಿಟೆಡ್‌ ಸಂಸ್ಥೆಗಳು 2018, 2021ರಲ್ಲಿ ವರದಿ ಸಲ್ಲಿಕೆ ಮಾಡಿದ್ದವು. ಭಾರತ್‌ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌(ಬಿಜಿಎಂಎಲ್‌) ತನ್ನ ಸ್ವಂತ ಶಕ್ತಿಯಿಂದ ಚಿನ್ನದ ಉತ್ಪಾದನೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಖಾಸಗಿ ಸಹಭಾಗಿತ್ವದಲ್ಲಿ ಚಿನ್ನದ ಉತ್ಪಾದನೆಗೆ ಹಸಿರು ನಿಶಾನೆ ಲಭಿಸುವ ಮುನ್ಸೂಚನೆ ಸಿಕ್ಕಿದ್ದು, ಶೀಘ್ರದಲ್ಲೇ ಕೋಲಾರದಲ್ಲೂ ಚಿನ್ನ ದೊರೆಯಲಿದೆ.

ಎಲ್ಲೆಲ್ಲಿ ಎಷ್ಟೆಷ್ಟು?

ಪ್ರದೇಶ ವಿಸ್ತೀರ್ಣ (ಚ.ಕಿಮೀ)

  • ಅಜ್ಜಗೊಂಡನಹಳ್ಳಿ (ತುಮಕೂರು) 9.49
  • ಕಟ್ಟನಹಳ್ಳಿ (ಚಿತ್ರದುರ್ಗ) 25.22
  • ಕಣಿವೆಹಳ್ಳಿ (ದಾವಣಗೆರೆ, ಬಳ್ಳಾರಿ) 30.78
  • ಮುದುಡಿ (ಹಾಸನ) 40
  • ಮಾರುತಿಪುರ (ಧಾರವಾಡ, ಹಾವೇರಿ) 28.92
  • ಬೆಳಗಟ್ಟ (ಚಿತ್ರದುರ್ಗ) 25
  • ಸೇವಾನಗರ (ಹಾವೇರಿ) 30.46
  • ಕಾಕೋಳ್‌ (ಹಾವೇರಿ) 29.06

ರಾಜ್ಯಕ್ಕೇನು ಲಾಭ?

  • ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾಸನ, ಧಾರವಾಡ, ಹಾವೇರಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ
  • ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ರಾಜಧನ ಸೃಷ್ಟಿ