Published on: September 23, 2021

ಚಿರಾಪುಂಜಿಯಲ್ಲಿ ಒಣ ವಾತಾವರಣ

ಚಿರಾಪುಂಜಿಯಲ್ಲಿ ಒಣ ವಾತಾವರಣ

ಸುದ್ಧಿಯಲ್ಲಿ ಏಕಿದೆ? 900 ಎಂಎಂ ಮಳೆಯ ಮೂಲಕ ಮೇಘಾಲಯದಲ್ಲಿರುವ ಚಿರಾಪುಂಜಿ ವಿಶ್ವದ ಅತ್ಯಂತ ಹೆಚ್ಚು ಮಳೆಯಾಗುವ ಪ್ರದೇಶ. ಬೆಂಗಳೂರಿನ ವಾರ್ಷಿಕ ಮಳೆಯ ಪ್ರಮಾಣ ಇದಾಗಿದ್ದು, ಇಂತಹ ತೀವ್ರ ಮಳೆಯಾಗುವ ಪ್ರದೇಶವೂ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಇಲ್ಲದ ಶುಷ್ಕ ವಾತಾವರಣ ಉಂಟಾಗುತ್ತಿದೆ.

ಶುಷ್ಕ ವಾತಾವರಣ ಉಂಟಾಗಲು ಕಾರಣ

  • ಕೆಲವು ವರದಿಗಳು ಹೇಳುವಂತೆ ಇದಕ್ಕೆ ಕಾರಣ ಹವಾಮಾನ ಬದಲಾವಣೆಯಲ್ಲ. ಎಂದಿನ ಮಳೆಯ ವ್ಯತ್ಯಾಸವನ್ನೇ ಹವಾಮಾನ ಬದಲಾವಣೆಗೆ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತಿದೆ.
  • ಬಂಗಾಳ ಕೊಲ್ಲಿಯಿಂದ ಬರುವ ತೇವಭರಿತ ಗಾಳಿ ಈ ಪ್ರದೇಶವನ್ನು ತಲುಪದೇ ಒಡಿಶಾದ ಕಡೆ ಹೋದಾಗ ಈ ಪ್ರದೇಶದಲ್ಲಿ ಮಳೆಯಾಗುವುದಿಲ್ಲ
  • ತೇವಭರಿತ ಗಾಳಿ ಪರ್ವತವನ್ನು ತಾಗಿ ಮೇಲೇಳುತ್ತದೆ ಇದರಿಂದ ಮಳೆಯುಂಟಾಗುತ್ತದೆ. ಆದರೆ ಪರ್ವತಕ್ಕೆ ಸಮಾನಾಂತರವಾಗಿ ಹಾದು ಹೋದಾಗ ಈ ಗಾಳಿ ಪರ್ವತವನ್ನು ತಾಕದೇ ಅದರ ಸುತ್ತ ಹೋಗುತ್ತದೆ. ತಾಪಮಾನ ಕುಸಿಯುವುದಕ್ಕೆ ಹಾಗೂ ತೇವಾಂಶ ಘನೀಕರಿಸುವುದಕ್ಕೆ ತೇವಾಂಶ ಭರಿತ ಗಾಳಿ ಮೇಲೆ ಹೋಗಬೇಕು ಆದ್ದರಿಂದ ಸಣ್ಣ ಬದಲಾವಣೆಯೂ ಮಳೆಯಲ್ಲಿ ಭಾರಿ ವ್ಯತ್ಯಾಸವಾಗುತ್ತದೆ
  • ಹವಾಮಾನ ಬದಲಾವಣೆ ಮಳೆಯ ಮಾದರಿಗಳಲ್ಲಿ ಸರಾಸರಿ 30 ವರ್ಷಗಳ ಎರಡು ಅವಧಿಯಲ್ಲಿ ಬದಲಾವಣೆಯಾಗಿದೆ. ಪಶ್ಚಿಮ ಘಟ್ಟಗಳ ಮೇಲಿನ ಮಳೆಯ ಪ್ರಭಾವ ಚಿರಾಪುಂಜಿಯಷ್ಟೇ ಇದೆ.

ಚಿರಾಪುಂಜಿ ಬಗ್ಗೆ 

  • ಚಿರಪುಂಜಿ,ಸಾಮಾನ್ಯವಾಗಿ ಸೊಹರ ಎಂದೇ ಹೆಸರು ಪಡೆದ ಐತಿಹಾಸಿಕ ಸ್ಥಳ. ಇದನ್ನು ಚೆರಾಪುಂಜಿ ಎಂದು ಕರೆಯುತ್ತಾರೆ. ಒಂದು ಉಪವಭಾಗೀಯ ಪಟ್ಟಣ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಮೇಘಾಲಯ ರಾಜ್ಯದಲ್ಲಿದೆ. ಭಾರತದ ಆರ್ದ್ರ ಸ್ಥಳ ಎಂದೇ ಮನ್ನಣೆಗೆ ಪಾತ್ರನಾದ ಮಾಸಿನ್ರಾಮ್ ಹತ್ತಿರದಲ್ಲಿದೆ. ಅತ್ಯಂತ ಹೆಚ್ಚು ಸಾರ್ವಕಾಲಿಕ ಮಳೆ ಬೀಳುವ ಜಾಗ ಎಂದೇ ಪ್ರಸಿದ್ಧವಾಗಿದೆ.