Published on: January 25, 2023

ಚುಟುಕು ಸಮಾಚಾರ – 25 ಜನವರಿ 2023

ಚುಟುಕು ಸಮಾಚಾರ – 25 ಜನವರಿ 2023

  • ಭಾರತವು ತನ್ನ 13 ನೇ ರಾಷ್ಟ್ರೀಯ ಮತದಾರರ ದಿನವನ್ನು ಜನವರಿ 25 ರಂದು ಆಚರಿಸುತ್ತಿದೆ ಥೀಮ್, 2023:  “ಮತದಾನದ ಹಾಗೆ ಇನ್ನೊಂದಿಲ್ಲ,  ನಾನು ಖಚಿತವಾಗಿ ಮತ ಹಾಕುತ್ತೇನೆ”. 2011ರಲ್ಲಿ ಮೊದಲ ಬಾರಿಗೆ ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಅಂದಿನ ರಾಷ್ಟ್ರಪತಿ ಪ್ರತಿಭಾ ದೇವಿ ಪಾಟೀಲ್ ಅವರು ಭಾರತದ ಚುನಾವಣಾ ಆಯೋಗದ 61ನೇ ಸಂಸ್ಥಾಪನಾ ದಿನದಂದು ಈ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲು ಪ್ರಾರಂಭಿಸಲಾಯಿತು.
  • ಭಾರತದ ಎಲ್ಲಾ ಮೂರು ರಕ್ಷಣಾ ಪಡೆಗಳು, ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಇತ್ತೀಚೆಗೆ AMPHEX ನಲ್ಲಿ ಭಾಗವಹಿಸಿದ್ದವು. AMPHEX ತ್ರಿ-ಸೇನಾ ವ್ಯಾಯಾಮವಾಗಿದ್ದು, ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆಯಿತು.
  • ಭಾರತೀಯ ವಿಜ್ಞಾನ ಸಂಸ್ಥೆಯ (IISc) ನಾಲ್ವರು ಅಧ್ಯಾಪಕರು ಯುವ ವಿಜ್ಞಾನಿಗಳ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (INSA) ಪದಕಕ್ಕೆ ಆಯ್ಕೆಯಾಗಿದ್ದಾರೆ. ಡಾ ಶ್ರೀಮೊಂಟಾ ಗಯೆನ್, ಡಾ ಸುಭೋಜೋಯ್ ಗುಪ್ತಾ, ಡಾ ಮೋಹಿತ್ ಕುಮಾರ್ ಜಾಲಿ ಮತ್ತು ಡಾ ವೆಂಕಟೇಶ್ ರಾಜೇಂದ್ರನ್ ಸೇರಿದಂತೆ ಭಾರತದಾದ್ಯಂತ 42 ವಿಜ್ಞಾನಿಗಳು ಪದಕಕ್ಕೆ ಆಯ್ಕೆಯಾಗಿದ್ದಾರೆ.  ಪ್ರೊಫೆಸರ್ ಹರ್ ಸ್ವರೂಪ್ ಸ್ಮಾರಕ ಪ್ರಶಸ್ತಿಗೆ ಭಾಜನರಾದ ಇಬ್ಬರಲ್ಲಿ ಒಬ್ಬರು ಪರಿಸರ ವಿಜ್ಞಾನ ಕೇಂದ್ರದ (CES) ಸಹಾಯಕ ಪ್ರಾಧ್ಯಾಪಕ ಡಾ ಕಾರ್ತಿಕ್ ಸುನಾಗರ್ ಎಂದು IISc ಘೋಷಿಸಿದೆ.
  • ಮಕ್ಕಳಿಗಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಪ್ರಶಸ್ತಿಯನ್ನು (ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಎಂದೂ ಕರೆಯುತ್ತಾರೆ) ನೀಡಲಾಯಿತು. ಇದನ್ನು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ. ರಾಷ್ಟ್ರಪತಿಗಳು 11 ಮಕ್ಕಳಿಗೆ ಈ ಪ್ರಶಸ್ತಿಯನ್ನು ನೀಡಿದರು.     ಈ ಪ್ರಶಸ್ತಿಯನ್ನು 5 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ
  • ಪ್ರಶಸ್ತಿಯನ್ನು ಭಾರತ ಸರ್ಕಾರವು 6 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಾಲಕರಿಗೆ ನೀಡುತ್ತದೆ. ಸಂಸ್ಕೃತಿ, ಶೌರ್ಯ, ಆವಿಷ್ಕಾರ, ಪಾಂಡಿತ್ಯ, ಸಮಾಜ ಸೇವೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮನ್ನಣೆಗೆ ಪಾತ್ರರಾದವರಿಗೆ ನೀಡಲಾಗುತ್ತದೆ. ಪ್ರಶಸ್ತಿ ಪುರಸ್ಕೃತರು ಪ್ರಮಾಣಪತ್ರ, ಪದಕ ಮತ್ತು ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆಯುತ್ತಾರೆ.
  • ಅಸ್ಸಾಂ ರಾಜ್ಯದಲ್ಲಿ ಬಾಲ್ಯ ವಿವಾಹಗಳ ವಿರುದ್ಧ ಬೃಹತ್ ಅಭಿಯಾನವನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಯನ್ನು ಬಾಲ್ಯ ವಿವಾಹ ತಡೆ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ಅಭಿಯಾನವು ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸಲು ಉತ್ತೇಜಿಸುತ್ತದೆ.
  • ನವೀಕರಿಸಬಹುದಾದ ಶಕ್ತಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಶುದ್ಧ ಕುಡಿಯುವ ನೀರಿನ ಉತ್ಪಾದನೆ ಮಾಡುವ ಸಂಶೋಧನೆಗಳಿಗೆ ಮೀಸಲಾದ, ‘ಮೊಹಮದ್ ಬಿನ್ ರಷೀದ್ ಅಲ್ ಮುಖ್ತಮ್ ಜಾಗತಿಕ ಜಲ ಪ್ರಶಸ್ತಿ’ಯು ನಗರದ ಜೈನ್ ವಿಶ್ವವಿದ್ಯಾಲಯದ ಪ್ರೊ. ಆರ್. ಗೀತಾ ಬಾಲಕೃಷ್ಣ ಅವರಿಗೆ ಲಭಿಸಿದೆ. ಅಂತರರಾಷ್ಟ್ರೀ ಯ ಮಟ್ಟದಲ್ಲಿ ನವೀನ ಮಾದರಿಯ ತಂತ್ರಜ್ಞಾನ ಹಾಗೂ ಯೋಜನೆಗಳನ್ನು ರೂಪಿಸುವ ಕಂಪನಿಗಳು, ವಿಶ್ವವಿದ್ಯಾಲಯಗಳು ಹಾಗೂ ವೈಯಕ್ತಿಕವಾಗಿ ಕೈಗೊಳ್ಳಲಾಗುವ ಸಂಶೋಧನೆಗಳ ಪ್ರೋತ್ಸಾಹಕ್ಕಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ‘ಹೈದರಾಬಾದ್ನ ಮೈತ್ರಿ ಅಕ್ವಾ ಟೆಕ್ ಕಂಪನಿಯ ಸಹಭಾಗಿತ್ವದಲ್ಲಿ ಗೀತಾ ಬಾಲಕೃಷ್ಣ ಈ ಸಂಶೋಧನೆ ಕೈಗೊಂಡಿದ್ದು, ರೂ. 40 ಲಕ್ಷ ಮೊತ್ತದ ಈ ಪ್ರಶಸ್ತಿಗೆ ಕಂಪನಿ ಮತ್ತು ಗೀತಾ ಬಾಲಕೃಷ್ಣ ಭಾಜನರಾಗಿದ್ದಾರೆ‘. ಇತ್ತೀ ಚೆಗೆ ದುಬೈನಲ್ಲಿ ನಡೆದ ಸಮಾರಂಭದಲ್ಲಿ ಯುಎಇ ಪ್ರಧಾನಿ ಶೇಕ್ ಮೊಹಮದ್ ಬಿನ್ ರಷೀದ್ ಅಲ್ ಮುಖ್ತಮ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.