Published on: November 1, 2021

ಜನಸೇವಕ ಆರಂಭ

ಜನಸೇವಕ ಆರಂಭ

ಸುದ್ಧಿಯಲ್ಲಿ ಏಕಿದೆ?  8 ಇಲಾಖೆಗಳ 58 ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ‘ಜನಸೇವಕ’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಜನಸೇವಕ, ಏಕೀಕೃತ ದೂರು ಪರಿಹಾರ ವ್ಯವಸ್ಥೆ ಮತ್ತು ಸಾರಿಗೆ ಇಲಾಖೆಯ ಕಾಗದ ರಹಿತ ಮತ್ತು ಸಂಪರ್ಕ ರಹಿತ ಸೇವೆಗಳನ್ನು ಉದ್ಘಾಟಿಸಿದರು.

ಜನಸೇವಕ ಯೋಜನೆ

  • ಜನಸೇವಕ ಯೋಜನೆಯಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಆಧಾರ್), ಕಂದಾಯ ಇಲಾಖೆಯ 21, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯ ಒಂಬತ್ತು, ಬಿಬಿಎಂಪಿಯ 18, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಒಂದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಂದು, ಪೊಲೀಸ್ ಇಲಾಖೆಯ ಮೂರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಒಂದು ಸೇವೆಯನ್ನು ಒದಗಿಸಲಾಗುತ್ತದೆ.
  • ಈ ಯೋಜನೆಯನ್ನು ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಗಳಲ್ಲಿ ಸೋಮವಾರದಿಂದ ಜಾರಿಗೆ ತರಲಾಗಿದೆ. 2022ರ ಜನವರಿ 26ರೊಳಗೆ ರಾಜ್ಯದ ಎಲ್ಲ ಕಡೆಗಳಲ್ಲೂ ಜಾರಿಗೊಳಿಸುವ ಗುರಿ ಇದೆ.
  • ಈ ಯೋಜನೆಯ ಅಡಿಯಲ್ಲಿ ಜನಸೇವಕರನ್ನು ನೇಮಿಸಲಾಗುತ್ತದೆ. ಜನರು ಸರ್ಕಾರಿ ಸೇವೆ ಪಡೆಯಲು 080-44554455ಗೆ ಕರೆ ಮಾಡಬಹುದು ಅಥವಾ ಮೊಬೈಲ್ ಒನ್ ತಂತ್ರಾಂಶದಲ್ಲಿ ಕೋರಿಕೆ ಸಲ್ಲಿಸಬಹುದು ಅಥವಾ www.janasevaka.Karnataka.gov.in ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಸಬಹುದು.
  • ಜನರು ನಿಗದಿಪಡಿಸಿದ ಸಮಯಕ್ಕೆ ಜನಸೇವಕರು ಸಂಬಂಧಿಸಿದ ಅರ್ಜಿ ನಮೂನೆಗಳೊಂದಿಗೆ ಜನರ ಮನೆ ಬಾಗಿಲಿಗೆ ಹೋಗುತ್ತಾರೆ. ಮನೆಯಿಂದಲೇ ಅರ್ಜಿ ಪಡೆದು ಸೇವೆ ಒದಗಿಸಲಾಗುತ್ತದೆ.

ಉಪಯೋಗಗಳು

  • ಜನರ ಮನೆ ಬಾಗಿಲಿಗೆ ಸೇವೆ ತಲುಪಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ.
  • ಜನರಿಗೆ ಅನುಕೂಲ ಆಗುತ್ತದೆ.
  • ವಿಳಂಬ ತಪ್ಪುತ್ತದೆ