Published on: December 12, 2022

ಜಿ-20 ರಾಷ್ಟ್ರಗಳ ಆರ್ಥಿಕತೆ ಸಭೆ

ಜಿ-20 ರಾಷ್ಟ್ರಗಳ ಆರ್ಥಿಕತೆ ಸಭೆ

ಸುದ್ದಿಯಲ್ಲಿ ಏಕಿದೆ? ಡಿಸೆಂಬರ್‌ 13-15ರವರೆಗೆ ಬೆಂಗಳೂರಿನಲ್ಲಿ ಮೊದಲ ಜಿ20 ಹಣಕಾಸು ಮತ್ತು ಸೆಂಟ್ರಲ್‌ ಬ್ಯಾಂಕ್‌ ನಿಯೋಗಗಳ ಸಭೆ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವಾಲಯ ಮತ್ತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಜಂಟಿಯಾಗಿ ಇದನ್ನು ಆಯೋಜಿಸಿವೆ.

ಮುಖ್ಯಾಂಶಗಳು

  • ಹಣಕಾಸು ಸಚಿವಾಲಯ ಈ ವಿಚಾರವನ್ನು ಜಿ20 ಫೈನಾನ್ಸ್‌ ಟ್ರ್ಯಾಕ್‌ ಕಾರ್ಯಸೂಚಿಯಲ್ಲಿ ಅಳವಡಿಸಿಕೊಂಡಿದೆ. ಜಿ20 ಹಣಕಾಸು ಮತ್ತು ಸೆಂಟ್ರಲ್‌ ಬ್ಯಾಂಕ್‌ ನಿಯೋಗಿಗಳ ಸಭೆಯ ಅಧ್ಯಕ್ಷತೆಯನ್ನು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಜಯ್‌ ಸೇಠ್‌ ಮತ್ತು ಆರ್‌ಬಿಐನ ಡೆಪ್ಯುಟಿ ಗವರ್ನರ್‌ ಡಾ. ಮೈಕೆಲ್‌ ಡಿ. ಪಾತ್ರಾ ವಹಿಸಲಿದ್ದಾರೆ.
  • ಜಿ20 ಸದಸ್ಯ ರಾಷ್ಟ್ರಗಳಿಂದ ಆಹ್ವಾನಿತರಾದ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
  • ಭಾರತದ ಅಧ್ಯಕ್ಷತೆಯ ಜಿ20 ಫೈನಾನ್ಸ್‌ ಟ್ರ್ಯಾಕ್‌ ಮತ್ತು ಅದರ ಧ್ಯೇಯವಾಕ್ಯವಾದ ‘ಒಂದೇ ನೆಲ, ಒಂದೇ ಕುಟುಂಬ, ಒಂದೇ ಭವಿಷ್ಯ’ದ ಚರ್ಚೆಗಳಿಗೆ ಮಾರ್ಗದರ್ಶನ ನೀಡಲಿದೆ.
  • ಫೈನಾನ್ಸ್‌ ಟ್ರ್ಯಾಕ್‌ನ ಸುಮಾರು 40 ಸಭೆಗಳು ಭಾರತದ ಹಲವಾರು ಸ್ಥಳಗಳಲ್ಲಿ ನಡೆಯಲಿವೆ. ಇದರಲ್ಲಿ ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್‌ ಬ್ಯಾಂಕ್‌ ಗವರ್ನರ್‌ಗಳ ಸಭೆಗಳು ಸೇರಿವೆ.
  • ವಿಷಯ: ’21 ನೇ ಶತಮಾನದ ಪಾಲುದಾರಿಕಾ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಪ್ರಬಲಪಡಿಸುವಿಕೆ’ ಎಂಬ ವಿಷಯದ ಬಗ್ಗೆ ಸಮಿತಿ ಚರ್ಚೆ ನಡೆಸಲಿದೆ. ‘ಸೂಕ್ಷ್ಮ ಹಣಕಾಸು ವ್ಯವಸ್ಥೆಯಲ್ಲಿ ಕೇಂದ್ರೀಯ ಬ್ಯಾಂಕುಗಳ ಪಾತ್ರ’ ಕುರಿತ ವಿಚಾರ ಸಂಕಿರಣವೂ ನಡೆಯಲಿದೆ.

ಉದ್ದೇಶ

  • ಜಿ20 ಫೈನಾನ್ಸ್‌ ಟ್ರ್ಯಾಕ್‌ ಚರ್ಚೆ ಮತ್ತು ನೀತಿ ಸಮನ್ವಯಕ್ಕೆ ವೇದಿಕೆ ಸೃಷ್ಟಿ ಸಲಿದೆ. ವಸುಧೈವ ಕುಟುಂಬಕಂ’ ಧ್ಯೇಯವಾಕ್ಯದಡಿ ಸಾಮಾನ್ಯ ಮಾರ್ಗ ರಚನೆಯ ಗುರಿಯನ್ನು ಭಾರತ ಹೊಂದಿದೆ. ಭಾರತದ ಅಧ್ಯಕ್ಷತೆಯಲ್ಲಿ ಜಿ20 ಫೈನಾನ್ಸ್‌ ಟ್ರ್ಯಾಕ್‌ನ ಕಾರ್ಯಸೂಚಿಯ ಮೇಲಿನ ಚರ್ಚೆಗಳ ಆರಂಭವನ್ನು ಸೂಚಿಸುವ ಈ ಸಭೆಯನ್ನು ಆಯೋಜಿಸಿವೆ.

ಪ್ರಮುಖ ಚರ್ಚಾಗೋಷ್ಠಿಗಳು

  • ಜಾಗತಿಕ ಆರ್ಥಿಕತೆ, ಜಾಗತಿಕ ಆರ್ಥಿಕ ದೃಷ್ಟಿಕೋನ, ಅಂತಾರಾಷ್ಟ್ರೀಯ ಹಣಕಾಸು ರಚನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು, ಸುಸ್ಥಿರ ಹಣಕಾಸು, ಜಾಗತಿಕ ಆರೋಗ್ಯ, ಅಂತರರಾಷ್ಟ್ರೀಯ ತೆರಿಗೆ ಮತ್ತು ಹಣಕಾಸು ವಲಯದ ಸಮಸ್ಯೆಗಳನ್ನು ಒಳಗೊಂಡ ಜಾಗತಿಕ ಆರ್ಥಿಕತೆಯ ಪ್ರಸ್ತುತ ಪ್ರಮುಖ ವಿಷಯಗಳನ್ನು ಜಿ20 ಫೈನಾನ್ಸ್‌ ಟ್ರ್ಯಾಕ್‌ ಚರ್ಚಿಸಲಿದೆ.

ಕಾರ್ಯಸೂಚಿಗಳು:

  • ‘ಒಳಗೊಳ್ಳುವಿಕೆ, ಮಹಾತ್ವಕಾಂಕ್ಷೆ, ಕ್ರಿಯಾತ್ಮಕತೆ ಹಾಗೂ ನಿಖರತೆಯು ಭಾರತದ ಜಿ–20 ಅಧ್ಯಕ್ಷತೆಯ ಕಾರ್ಯಸೂಚಿಯಾಗಿದೆ’.
  • ‘ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯ’ ಭಾರತದ ಅಧ್ಯಕ್ಷತೆಯ ಧ್ಯೇಯವಾಕ್ಯವಾಗಿದ್ದು, ಏಕತೆಯನ್ನು ಉತ್ತೇಜಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸಲಿದೆ.’
  • ‘ಭಯೋತ್ಪಾದನೆ, ಹವಾಮಾನ ಬದಲಾವಣೆ ಹಾಗೂ ಸಾಂಕ್ರಾಮಿಕ ಪಿಡುಗಿನಂತಹ ದೊಡ್ಡ ಸವಾಲುಗಳ ವಿರುದ್ಧ ಒಂದಾಗಿ ಹೋರಾಡುವುದು.
  • ಜಿ–20 ಮಿತ್ರ ರಾಷ್ಟ್ರಗಳಷ್ಟೇ ಅಲ್ಲದೆ ಜಗತ್ತಿನ ದಕ್ಷಿಣ ಭಾಗದ ಇತರ ರಾಷ್ಟ್ರಗಳ ಜೊತೆಗೂ ಸಮಾಲೋಚನೆ ನಡೆಸಿ ನಮ್ಮ ಆದ್ಯತೆಗಳನ್ನು ರೂಪಿಸಲಾಗುತ್ತದೆ’.
  • ಭಾರತದ ಅಧ್ಯಕ್ಷತೆಯನ್ನು ಸಾಮರಸ್ಯ ಮತ್ತು ಭರವಸೆಯ ಪ್ರತೀಕವಾಗಿಸಲು ಹಾಗೂ ಮಾನವ ಕೇಂದ್ರಿತ ಜಾಗತೀಕರಣದ ಮಾದರಿ ರೂಪಿಸುವ ಗುರಿಯನ್ನು ಹೊಂದಿದೆ.
  • ‘ಸುಸ್ಥಿರ ಜೀವನಶೈಲಿಯನ್ನು ಪ್ರೋತ್ಸಾಹಿಸುವ, ಆಹಾರ, ರಸಗೊಬ್ಬರ ಮತ್ತು ವೈದ್ಯಕೀಯ ಉತ್ಪನ್ನಗಳ ಜಾಗತಿಕ ಪೂರೈಕೆಯನ್ನು ರಾಜಕೀಯಗೊಳಿಸದೇ ಇರುವ ದಿಸೆಯಲ್ಲಿ ದೇಶವು ಕೆಲಸ ಮಾಡಲು ನಿಶ್ಚಯಿಸಿದೆ.  ‘ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ವೇದಿಕೆ ಕಲ್ಪಿಸುವ ‘ಯೂನಿವರ್ಸಿಟಿ ಕನೆಕ್ಟ್‌’ ಕಾರ್ಯಕ್ರಮದ ಮೂಲಕ ಭಾರತ ತನ್ನ ಜಿ–20 ಅಧ್ಯಕ್ಷತೆ ಆರಂಭಿಸಿದೆ’.
  • ‘ಅಧ್ಯಕ್ಷತೆಯ ಅವಧಿಯಲ್ಲಿ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾರತದ ಜಿ–20 ಅಧ್ಯಕ್ಷತೆಯ ಮಹತ್ವದ ಕುರಿತು ಅರಿವು ಮೂಡಿಸಲಿದ್ದಾರೆ. ಸಾಮರಸ್ಯವನ್ನು ಪ್ರತಿಪಾದಿಸುವ ಮೂಲಕ ಭಾರತವು ಜಗತ್ತಿನ ಇತರ ರಾಷ್ಟ್ರಗಳಿಗೆ ಹೇಗೆ ಮಾದರಿಯಾಗಲಿದೆ.
  • ಜೀವಿಗಳು ಹಾಗೂ ವಸ್ತುಗಳು ಪಂಚತತ್ವ ಆಧರಿಸಿವೆ. ಇದು ನಮ್ಮ ಪರಿಸರ, ದೈಹಿಕ, ಸಾಮಾಜಿಕ ಯೋಗಕ್ಷೇಮಕ್ಕೆ ಅಗತ್ಯ. ಭಾರತದ ನೇತೃತ್ವದಲ್ಲಿ ನಡೆಯಲಿರುವ ಶೃಂಗಸಭೆಯು ಏಕತ್ವ ಪ್ರಜ್ಞೆಯನ್ನು ಉತ್ತೇಜಿಸಲು ಯತ್ನಿಸುತ್ತದೆ.
  • 21ನೇ ಶತಮಾನದ ಜಾಗತಿಕ ಸವಾಲುಗಳನ್ನು ಎದುರಿಸಲು ಹಣಕಾಸು ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವುದು, ಭವಿಷ್ಯದ ದಿನಗಳಲ್ಲಿ ಹಣಕಾಸು ಒದಗಿಸುವುದು, ಹವಾಮಾನ ಕ್ರಮ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಹಣಕಾಸು ಒದಗಿಸುವುದು, ಬೆಂಬಲವಿಲ್ಲದ ಕ್ರಿಪ್ಟೋಗಳಿಗೆ ಜಾಗತಿಕವಾಗಿ ಸಂಘಟಿತ ವಿಧಾನ ಮತ್ತು ಅಂತಾರಾಷ್ಟ್ರೀಯ ತೆರಿಗೆ ಕಾರ್ಯಸೂಚಿಯನ್ನು ತಯಾರಿಸುವುದು ಇದರಲ್ಲಿ ಸೇರಿದೆ.

ಸಚಿವರ ಸಭೆ

  • 2023ರ ಫೆಬ್ರವರಿ 23 ರಿಂದ 25ರ ವರೆಗೆ ಬೆಂಗಳೂರಿನಲ್ಲಿಮೊದಲ ಹಣಕಾಸು ಸಚಿವರು ಮತ್ತು ಸೆಂಟ್ರಲ್‌ ಬ್ಯಾಂಕ್‌ ಗೌವರ್ನರ್‌ಗಳ ಸಭೆ ನಡೆಯಲಿದೆ.