Published on: August 4, 2021

ಝಾನ್ಸಿ ರೈಲು ನಿಲ್ದಾಣ

ಝಾನ್ಸಿ ರೈಲು ನಿಲ್ದಾಣ

ಸುದ್ಧಿಯಲ್ಲಿ ಏಕಿದೆ ? ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರಕಾರವು ಝಾನ್ಸಿ ರೈಲು ನಿಲ್ದಾಣದ ಹೆಸರನ್ನು ‘ವೀರಾಂಗನಾ ಲಕ್ಷ್ಮೀಬಾಯಿ ರೈಲುನಿಲ್ದಾಣ’ ಎಂದು ಬದಲಿಸಲು ತೀರ್ಮಾನಿಸಿದೆ.

  • ಕೆಲದಿನಗಳ ಹಿಂದಷ್ಟೇ ವಾರಾಣಸಿಯ ಮಂಡೂದಿಹ್‌ ರೈಲುನಿಲ್ದಾಣದ ಹೆಸರನ್ನು ಬನಾರಸ್‌ ಎಂದು ಬದಲಿಸಲಾಗಿದೆ. ಮುಘಲ್‌ಸರಾಯ್‌ ನಿಲ್ದಾಣಕ್ಕೆ 2018ರಲ್ಲಿ ಪಂಡಿತ ದೀನ್‌ದಯಾಳ್‌ ಉಪಾಧ್ಯಾಯ ರೈಲು ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ.

ಹೆಸರು ಬದಲಾಯಿಸಲು ಇರುವ ಕ್ರಮಗಳು

  • ಈ ಸಂಬಂಧ ರೈಲ್ವೆ ಸಚಿವಾಲಯಕ್ಕೆ ಅಧಿಕೃತ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ರೈಲ್ವೆ ಸಚಿವಾಲಯವು ಪ್ರಸ್ತಾವನೆಯನ್ನು ಅಂಚೆ ಇಲಾಖೆ ಮತ್ತು ಸರ್ವೆ ಆಫ್‌ ಇಂಡಿಯಾಕ್ಕೆ ರವಾನಿಸಿದ್ದು, ದಾಖಲೆಗಳನ್ನು ಪರಿಶೀಲಿಸಿ, ಈ ಹೆಸರಿನ ಯಾವುದೇ ನಿಲ್ದಾಣ ಅಥವಾ ಊರು ಇಲ್ಲ ಎನ್ನುವುದನ್ನು ಈ ಇಲಾಖೆಗಳು ದೃಢೀಕರಿಸಬೇಕು. ನಂತರ ರೈಲ್ವೆ ಸಚಿವಾಲಯದ ಶಿಫಾರಸು ಆಧರಿಸಿ ಗೃಹ ಸಚಿವಾಲಯವು ಹೆಸರು ಬದಲಾವಣೆ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸುತ್ತದೆ.