Published on: September 27, 2022

ನೆಹರೂ ಟ್ರೋಫಿ ದೋಣಿ ಸ್ಪರ್ಧೆ

ನೆಹರೂ ಟ್ರೋಫಿ ದೋಣಿ ಸ್ಪರ್ಧೆ

ಸುದ್ದಿಯಲ್ಲಿ ಏಕಿದೆ?

ಓಣಂ ಹಬ್ಬದ ಪ್ರಯುಕ್ತ ಕೇರಳದಲ್ಲಿ ವರ್ಷಂಪ್ರತಿ ಆಯೋಜನೆಯಾಗುತ್ತಿರುವ ನೆಹರೂ ಟ್ರೋಫಿ ದೋಣಿ ಸ್ಪರ್ಧೆಗೆ ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೇರಳ ಸರ್ಕಾರವು ಆಹ್ವಾನ ನೀಡಿತ್ತು.

ಮುಖ್ಯಾಂಶಗಳು

  • ಆಲಪ್ಪುಳದ ಪುನ್ನಮಡ ಹಿನ್ನೀರಿನಲ್ಲಿ ವರ್ಣರಂಜಿತ ದೋಣಿ ಸ್ಪರ್ಧೆಯು ಸೆಪ್ಟೆಂಬರ್ ನಲ್ಲಿ ನಡೆಯಿತು.
  • ಈ ಸ್ಪರ್ಧೆಯಲ್ಲಿ ಪಳ್ಳತುರುತಿ ಬೋಟ್ ಕ್ಲಬ್‌ನ ‘ಮಹಾದೇವಿಕಾಡು ಕಟ್ಟಿಲ್ ತೆಕೆತಿಲ್’ ಟ್ರೋಫಿ ಗೆದ್ದರೆ, ಎನ್‌ಸಿಡಿಸಿ ಬೋಟ್ ಕ್ಲಬ್‌ನ ‘ನಾಡುಭಾಗಂ’ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
  • ಕೇರಳದ ಐತಿಹಾಸಿಕ ಪ್ರಸಿದ್ಧ ದೋಣಿ ಸ್ಪರ್ಧೆಗೆ ‘ಚಾಂಪಿಯನ್ಸ್​​ ಬೋಟ್​ ಲೀಗ್’​(ಸಿಬಿಎಲ್​) ಎಂದು 2019 ರಲ್ಲಿ ಮರುನಾಮಕರಣ ಮಾಡಲಾಗಿದೆ.

ನೆಹರು ಟ್ರೋಫಿಗೆ ನೆಹರು ಹೆಸರೇಕೆ

ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ 1952ರಲ್ಲಿ ಕೇರಳಕ್ಕೆ ತನ್ನ ಮೊದಲ ಭೇಟಿಯ ವೇಳೆ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಕುಟ್ಟನಾಡ್‌ಗೆ ಭೇಟಿ ನೀಡಿದ ನೆನಪಿಗಾಗಿ ಈ ದೋಣಿ ಸ್ಪರ್ಧೆಗೆ ನೆಹರೂ ಅವರ ಹೆಸರನ್ನು ಇರಿಸಲಾಗಿದೆ.