Published on: October 6, 2021

ಪಿಳಿಕುಳದಲ್ಲಿ ಕೆಂಚಳಿಲು ಸಂತಾನಾಭಿವೃದ್ಧಿ ಕೇಂದ್ರ

ಪಿಳಿಕುಳದಲ್ಲಿ ಕೆಂಚಳಿಲು ಸಂತಾನಾಭಿವೃದ್ಧಿ ಕೇಂದ್ರ

ಸುದ್ಧಿಯಲ್ಲಿ ಏಕಿದೆ? ವಿಶ್ವದ ಏಕೈಕ ಕಾಳಿಂಗ ಸರ್ಪ ಕೃತಕ ಸಂತಾನಾಭಿವೃದ್ಧಿ ಕೇಂದ್ರ ಖ್ಯಾತಿಯ ಪಿಲಿಕುಳ ನಿಸರ್ಗಧಾಮಕ್ಕೆ ಇದೀಗ ಕಾಳಿಂಗ ಸರ್ಪದ ಜತೆಗೆ ಅಪರೂಪದ ಕೆಂಚಳಿಲು ಸಂತಾನಾಭಿವೃದ್ಧಿ ಸಂಶೋಧನೆ ಮಾಡುವ ಪ್ರಾಜೆಕ್ಟನ್ನು ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ ನೀಡಿದೆ.

  • ಐದು ವರ್ಷಗಳಲ್ಲಿ ಈ ಅಪರೂಪದ ಸೂಕ್ಷ್ಮಜೀವಿಗಳ ಕೃತಕ ಸಂತಾನೋತ್ಪತ್ತಿ ಸಂಶೋಧನೆ ಮಾಡಬೇಕಿದ್ದು, ತಲಾ 2 ಕೋಟಿ ರೂ.ನಂತೆ 4 ಕೋಟಿ ರೂ.ವನ್ನು ಹಂತಹಂತವಾಗಿ ಬಿಡುಗಡೆ ಮಾಡಲಿದೆ. ಈ ನಿಟ್ಟಿನಲ್ಲಿ ಮಂಗಳೂರು ಸಮೀಪದ ವಾಮಂಜೂರಿನ ಪಿಲಿಕುಳ ಡಾ. ಶಿವರಾಮ ಕಾರಂತ ವನ್ಯಜೀವಿ ಧಾಮದಲ್ಲಿ ಪ್ರಕ್ರಿಯೆ ಆರಂಭಗೊಳ್ಳಲಿದೆ.
  • ದೇಶದ ಸುಮಾರು 100ಕ್ಕಿಂತ ಹೆಚ್ಚು ಪ್ರಾಣಿ ಸಂಗ್ರಹಾಲಯಗಳ ಪೈಕಿ ಪ್ರಮುಖ 10ನ್ನು ಮಾತ್ರ ಈ ಸಂಶೋಧನೆಗೆ ಆಯ್ಕೆ ಮಾಡಿದ್ದು, ಒಂದೊಂದು ಪ್ರಾಣಿ ಸಂಗ್ರಹಾಲಯ, ವನ್ಯಜೀವಿ ಧಾಮಗಳಿಗೆ 1-2 ಪ್ರಾಜೆಕ್ಟ್ ನೀಡಲಾಗಿದೆ.