Published on: August 6, 2022

ಮಾರಿಕಾಂಬೆ ಪ್ರಸಾದಕ್ಕೆ ‘ಭೋಗ್’ ಮಾನ್ಯತೆ

ಮಾರಿಕಾಂಬೆ ಪ್ರಸಾದಕ್ಕೆ ‘ಭೋಗ್’ ಮಾನ್ಯತೆ

ಸುದ್ದಿಯಲ್ಲಿ ಏಕಿದೆ?

ನಾಡಿನ ಶಕ್ತಿಪೀಠದಲ್ಲೊಂದಾದ ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ಮಧ್ಯಾಹ್ನ ಭಕ್ತರಿಗೆ ನೀಡುವ ಅನ್ನ ಪ್ರಸಾದಕ್ಕೆ ರಾಷ್ಟ್ರೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ನೀಡುವ ‘ಭೋಗ್’ (Blissfull Hygiene Offering to God) ಪ್ರಮಾಣಪತ್ರ ಲಭಿಸಿದೆ.

ಮುಖ್ಯಾಂಶಗಳು

  • ರಾಜ್ಯದ ಪ್ರಮುಖ ನಾಲ್ಕು ದೇವಾಲಯಗಳಿಗೆ ಕೆಲ ದಿನಗಳ ಹಿಂದಷ್ಟೆ ಈ ಪ್ರಮಾಣ ಪತ್ರ ದೊರೆತಿದ್ದು ಇದರಲ್ಲಿ ಶಿರಸಿಯ ಮಾರಿಕಾಂಬಾ ದೇವಾಲಯವೂ ಒಂದಾಗಿದೆ. ಪ್ರತಿನಿತ್ಯ ಇಲ್ಲಿ ಮಧ್ಯಾಹ್ನ ಸರಾಸರಿ 800 ರಿಂದ 1 ಸಾವಿರ ಭಕ್ತರು ಅನ್ನ ಪ್ರಸಾದ ಸ್ವೀಕರಿಸುತ್ತಿದ್ದಾರೆ.
  • ಕಳೆದ ವರ್ಷ ‘ಭೋಗ್’ ಪ್ರಮಾಣಪತ್ರ ನೀಡಬಹುದಾದ ದೇವಸ್ಥಾನಗಳ ಪಟ್ಟಿ ಸಿದ್ಧಪಡಿಸಿದ್ದ ಪ್ರಾಧಿಕಾರ ಆಯಾ ದೇವಾಲಯಗಳಿಗೆ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುವ ಕುರಿತು ಸೂಚಿಸಿತ್ತು. ಇದರ ಭಾಗವಾಗಿ ಕಳೆದ ಜನವರಿ ವೇಳೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ದೇವಸ್ಥಾನಕ್ಕೆ ಭೇಟಿ ನೀಡಿ ಪಾಕಶಾಲೆ ವೀಕ್ಷಿಸಿತ್ತು.
  • ‘ಭೋಗ್ ಪ್ರಮಾಣ ಪತ್ರ ಪಡೆಯಲು ರಾಷ್ಟ್ರೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಕೆಲವು ಮಾನದಂಡ ನಿರ್ದಿಷ್ಟಪಡಿಸಿದೆ. ಈ ಮಾನದಂಡಗಳನ್ನು ಅಂಕದ ಆಧಾರದಲ್ಲಿ ಅಳೆಯಲಾಗುತ್ತಿದ್ದು 116 ಅಂಕಕ್ಕೆ ಕನಿಷ್ಠ 90 ಅಂಕ ಗಳಿಸಿರಬೇಕು.
  • ಮಾರಿಕಾಂಬಾ ದೇವಾಲಯ 100ಕ್ಕೂ ಹೆಚ್ಚು ಅಂಕಗಳಿಸಿ ಪ್ರಮಾಣಪತ್ರಕ್ಕೆ ಅರ್ಹತೆ ಪಡೆದಿದೆ.’
  • ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯವು ಉತ್ತರ ಕನ್ನಡದ ಅತ್ಯಂತ ಪ್ರಸಿದ್ಧ ಮತ್ತು ಪುರಾತನ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ.

‘ಭೋಗ್’ ಪ್ರಮಾಣ ಪತ್ರ ನೀಡಲು ಇರುವ ಮಾನದಂಡಗಳು

  • ದೇವಾಲಯಗಳಲ್ಲಿ ದೇವರಿಗೆ ಅರ್ಪಿಸುವ ನೇವೇದ್ಯ, ಭಕ್ತರಿಗೆ ವಿತರಿಸುವ ಪ್ರಸಾದದ ಗುಣಮಟ್ಟ, ತಯಾರಿಸುವ ವಿಧಾನ, ಪಾಕಶಾಲೆಯ ನಿರ್ವಹಣೆ, ಸೋರುವಿಕೆ ಇಲ್ಲದ, ಉತ್ತಮ ಗುಣಮಟ್ಟದ ಗೋಡೆ, ಕಾಲು ಜಾರದಂತಹ ನೆಲಹಾಸು, ತುಕ್ಕು ಹಿಡಿಯದ ಕಿಟಕಿ ಬಾಗಿಲು, ಆಹಾರ ತಯಾರಿಸುವ ಪಾತ್ರೆಯ ಶುಚಿತ್ವ, ಆಹಾರ ತಯಾರಿಕಾ ಸಾಮಾಗ್ರಿಗಳ ದಾಸ್ತಾನು ಕೊಠಡಿ, ಪಾತ್ರೆ ತೊಳೆಯುವ ನೀರು, ತ್ಯಾಜ್ಯ ವಿಲೇವಾರಿ ಇತ್ಯಾದಿಗಳ ಗುಣಮಟ್ಟವನ್ನು ಪರೀಕ್ಷಿಸಿದ ಬಳಿಕ ಪ್ರಮಾಣಪತ್ರಕ್ಕೆ ಶಿಫಾರಸ್ಸು ಮಾಡಲಾಗುವುದು. ಆಹಾರ ತಯಾರಿಕಾ ಕೊಠಡಿಯು ಗಾಳಿ, ಬೆಳಕು ಸೌಲಭ್ಯದೊಂದಿಗೆ ಸುಸಜ್ಜಿತವಾಗಿರಬೇಕಿತ್ತು.

ಕರ್ನಾಟಕದಲ್ಲಿ ಯಾವ ದೇವಸ್ಥಾನಗಳು ಭೋಗ್ ಮಾನ್ಯತೆ ಪಡೆದಿವೆ?

  • ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ
  • ಕೊಲ್ಲೂರು ಮೂಕಾಂಬಿಕಾ ದೇವಾಲಯ
  • ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ
  • ಶಿರಸಿ ಮಾರಿಕಾಂಬಾ ದೇವಾಲಯ

BHOG ಎಂದರೇನು?· 

  • ಇವು FSSAI ನೀಡಿದ ಪ್ರಮಾಣಪತ್ರಗಳಾಗಿವೆ. ಭೋಗ್ ಪ್ರಮಾಣಪತ್ರಗಳು ಭಕ್ತರಿಗೆ ಮತ್ತು ದೇವತೆಗಳಿಗೆ ಬಡಿಸುವ ಆಹಾರದ ಗುಣಮಟ್ಟವನ್ನು ಖಚಿತಪಡಿಸುತ್ತದೆ. ದೇವಸ್ಥಾನಗಳಲ್ಲಿ ಆಹಾರ ಪದಾರ್ಥಗಳ ಶುಚಿತ್ವ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಇದನ್ನು ಆರಂಭಿಸಲಾಗಿದೆ. ಯೋಜನೆಯ ಬಗ್ಗೆ·
  • ಈ ಯೋಜನೆಯನ್ನು FSSAI ಆರಂಭಿಸಿದೆ.·
  • ಈ ಯೋಜನೆಯು ದೇವಾಲಯಗಳಲ್ಲಿನ ಆಹಾರದ ಗುಣಮಟ್ಟವನ್ನು ಕಾಪಾಡುವುದರ ಜೊತೆಗೆ ಆಹಾರ ನಿರ್ವಹಣೆ ಮಾಡುವವರಿಗೆ ಮೂಲಭೂತ ಆಹಾರ ಸುರಕ್ಷತೆಯ ಬಗ್ಗೆ ತರಬೇತಿಯನ್ನು ನೀಡುತ್ತದೆ. ·
  • ಇದು ಗುರುದ್ವಾರಗಳು, ದೇವಾಲಯಗಳು, ಮಸೀದಿಗಳನ್ನು ಒಳಗೊಂಡಿದೆ. ಯೋಜನೆಯು ದೇವಾಲಯದ ಆವರಣದಲ್ಲಿ ಮತ್ತು ಸುತ್ತಮುತ್ತಲಿನ ಪ್ರಸಾದವನ್ನು ಮಾರಾಟ ಮಾಡುವ ಪ್ರಸಾದ ಮಳಿಗೆಗಳು ಮತ್ತು ಮಾರಾಟಗಾರರಿಗೆ BHOG ಪ್ರಮಾಣಪತ್ರವನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಈಟ್ ರೈಟ್ ಅಭಿಯಾನ

  • ಈ ಪ್ರಮಾಣಪತ್ರವು ಈಟ್ ರೈಟ್ ಅಭಿಯಾನದ ತತ್ವಗಳನ್ನು ಸಹ ಒಳಗೊಂಡಿದೆ. ಈಟ್ ರೈಟ್ ಅಭಿಯಾನವು “ಈಟ್ ಹೆಲ್ತಿ” ಮತ್ತು “ಈಟ್ ರೈಟ್” ಎಂಬ ಎರಡು ವಿಶಾಲ ಸ್ತಂಭಗಳನ್ನು ಆಧರಿಸಿದೆ.

ಏನಿದು ಅಭಿಯಾನ?

  • ಈಟ್ ರೈಟ್ ಇಂಡಿಯಾ ಅಭಿಯಾನವು ಎಲ್ಲಾ ಭಾರತೀಯರಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಸುಸ್ಥಿರ ಆಹಾರವನ್ನು ಖಚಿತಪಡಿಸಿಕೊಳ್ಳಲು ದೇಶದ ಆಹಾರ ವ್ಯವಸ್ಥೆಯನ್ನು ಪರಿವರ್ತಿಸಲು ಭಾರತ ಸರ್ಕಾರ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ದ ಉಪಕ್ರಮವಾಗಿದೆ.