Published on: March 15, 2023

ರಣಹದ್ದುಗಳ ಸಮೀಕ್ಷೆ

ರಣಹದ್ದುಗಳ ಸಮೀಕ್ಷೆ


ಸುದ್ದಿಯಲ್ಲಿ ಏಕಿದೆ? ತಮಿಳುನಾಡು, ಕರ್ನಾಟಕ ಹಾಗೂ ಕೇರಳ ಸೇರಿ ಮೂರು ರಾಜ್ಯಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ರಣಹದ್ದುಗಳ ಸಮೀಕ್ಷೆ ನಡೆಯಿತು.


ಮುಖ್ಯಾಂಶಗಳು

  • ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶ (ಎಂಟಿಆರ್ ) ಮತ್ತು ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶ (ಎಸಟಿಆರ್ ), ಕೇರಳದ ವಯನಾಡ್ ವನ್ಯಜೀವಿ ಅಭಯಾರಣ್ಯ (ಡಬ್ಲ್ಯೂಡಬ್ಲ್ಯೂಎಸ್) , ಕರ್ನಾಟಕದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (ಬಿಟಿಆರ್) ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ (ಎನ್ ಟಿಆರ್)ಗಳಲ್ಲಿ  ಸಮೀಕ್ಷೆಯನ್ನು ನಡೆಸಲಾಯಿತು.
  • ಈ ಸರ್ವೇ ಪ್ರಕಾರ ಬಂಡೀಪುರದಲ್ಲಿ 245 ಮೂರು ವಿಧದ ರಣಹದ್ದುಗಳು ಕಂಡುಬಂದಿವೆ. ಈ ಪೈಕಿ ಭಾರತೀಯ ರಣಹದ್ದು 34, ಕೆಂಪು ತಲೆಯ ರಣಹದ್ದು 43 ಹಾಗು ಬಿಳಿ ಬೆನ್ನಿನ ರಣ ಹದ್ದುಗಳು 168 ಎಂದು ಪತ್ತೆ ಮಾಡಲಾಗಿದೆ. ಒಟ್ಟಾರೆ 245 ರಣಹದ್ದುಗಳು ಕಾಣಿಸಿಕೊಂಡಿವೆ.
  • ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಭಾರತೀಯ ರಣ ಹದ್ದು 13, ಬಿಳಿ ಬೆನ್ನಿನ ರಣ ಹದ್ದು 61, ಕೆಂಪು ತಲೆಯ ರಣಹದ್ದು 30, ಒಟ್ಟು ಮೂರು ವಿಧದ 104 ರಣಹದ್ದುಗಳು ಕಂಡುಬಂದಿವೆ. ಈ ವ್ಯಾಪ್ತಿಯಲ್ಲಿ ರಣಹದ್ದುಗಳ ಸಂತಾನೋತ್ಪತ್ತಿ ಕ್ರಿಯೆಗಳು ನಡೆಯುತ್ತಿದೆ.

ರಣಹದ್ದುಗಳ ಬಗ್ಗೆ

  • ಮಾಂಸಹಾರಿ ಪ್ರಾಣಿಗಳು ಸಸ್ಯಹಾರಿ ಪ್ರಾಣಿಗಳನ್ನು ತಿಂದು ಬದುಕಿದರೆ, ಮಾಂಸಹಾರಿ ಪ್ರಾಣಿಗಳು ಸತ್ತಾಗ ಅವುಗಳನ್ನು ತಿನ್ನುವುದು ರಣಹದ್ದುಗಳು. ಆದ್ದರಿಂದ ರಣ ಹದ್ದುಗಳನ್ನು ‘ಪರಿಸರ ಸ್ವಚ್ಚತೆಯ ಪೌರಕಾರ್ಮಿಕ’ ಎನ್ನುತ್ತಾರೆ. ಆ ಮೂಲಕ ಪರಿಸರ ಸಮತೊಲನಕ್ಕೆ ತನ್ನದೇ ಕೊಡುಗೆಯನ್ನು ಅವುಗಳು ನೀಡುತ್ತವೆ.
  • ಇತ್ತೀಚೆಗೆ ರಣ ಹದ್ದುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಅರಣ್ಯ ನಾಶ, ಅರಣ್ಯ ಪ್ರದೇಶಕ್ಕೆ ಬೀಳುವ ಬೆಂಕಿ ಹಾಗೂ ನಾಡಿನ ಪ್ರದೇಶಗಳಲ್ಲಿ ಡೈಕ್ಲೊಫಿನಾಕ್ ಔಷಧಿ ಇರುವ ಜಾನುವಾರುಗಳ ಮೃತದೇಹ ತಿಂದು ರಣಹದ್ದುಗಳು ಸಾವನ್ನಪ್ಪುತ್ತಿವೆ.
  • ಭಾರತವು 9 ಜಾತಿಯ ರಣಹದ್ದುಗಳಿಗೆ ನೆಲೆಯಾಗಿದೆ ಅವುಗಳೆಂದರೆ ಓರಿಯೆಂಟಲ್ ವೈಟ್-ಬೆಡ್, ಲಾಂಗ್-ಬಿಲ್ಡ್, ಸ್ಲೆಂಡರ್-ಬಿಲ್ಡ್, ಹಿಮಾಲಯನ್, ರೆಡ್-ಹೆಡೆಡ್, ಈಜಿಪ್ಟಿಯನ್, ಬಿಯರ್ಡೆಡ್, ಸಿನೆರಿಯಸ್ ಮತ್ತು ಯುರೇಷಿಯನ್ ಗ್ರಿಫನ್. ಈ 9 ಪ್ರಭೇದಗಳಲ್ಲಿ ಹೆಚ್ಚಿನವು ಅಳಿವಿನ ಅಪಾಯವನ್ನು ಎದುರಿಸುತ್ತಿವೆ.

ಬೆದರಿಕೆಗಳು:

  • ಮಾನವಜನ್ಯ ಚಟುವಟಿಕೆಗಳಿಂದಾಗಿ ನೈಸರ್ಗಿಕ ಆವಾಸಸ್ಥಾನಗಳ ನಷ್ಟ.
  • ಆಹಾರದ ಕೊರತೆ ಮತ್ತು ಕಲುಷಿತ ಆಹಾರ.
  • ವಿದ್ಯುತ್ ತಂತಿಗಳಿಂದ ವಿದ್ಯುದಾಘಾತ.

ಸಂರಕ್ಷಣೆಗೆ ಸರ್ಕಾರದ  ಪ್ರಯತ್ನಗಳು:

  • ಇತ್ತೀಚೆಗೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ದೇಶದಲ್ಲಿ ರಣಹದ್ದುಗಳ ಸಂರಕ್ಷಣೆಗಾಗಿ ರಣಹದ್ದುಗಳ ಕ್ರಿಯಾ ಯೋಜನೆ 2020-25 ಅನ್ನು ಪ್ರಾರಂಭಿಸಿದೆ.
  • ಇದು ಡಿಕ್ಲೋಫೆನಾಕ್‌ನ ಕನಿಷ್ಠ ಬಳಕೆಯನ್ನು ಖಚಿತಪಡಿಸುತ್ತದೆ ಮತ್ತು ರಣಹದ್ದುಗಳ ಪ್ರಮುಖ ಆಹಾರವಾದ ದನದ ಮೃತದೇಹಗಳ ವಿಷವನ್ನು ತಡೆಯುತ್ತದೆ.
  • ಭಾರತದಲ್ಲಿ ರಣಹದ್ದುಗಳ ಸಾವಿನ ಕಾರಣವನ್ನು ಅಧ್ಯಯನ ಮಾಡಲು, 2001 ರಲ್ಲಿ ಹರಿಯಾಣದ ಪಿಂಜೋರ್‌ನಲ್ಲಿ ರಣಹದ್ದುಗಳ ಆರೈಕೆ ಕೇಂದ್ರವನ್ನು (VCC) ಸ್ಥಾಪಿಸಲಾಯಿತು.
  • ನಂತರ 2004 ರಲ್ಲಿ, VCC ಅನ್ನು ಭಾರತದಲ್ಲಿ ಮೊದಲ ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರವಾಗಿ (VCBC) ನವೀಕರಿಸಲಾಯಿತು.

ಪ್ರಸ್ತುತ, ಭಾರತದಲ್ಲಿ ಒಂಬತ್ತು ರಣಹದ್ದು ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಕೇಂದ್ರಗಳು (VCBC) ಇವೆ, ಅವುಗಳಲ್ಲಿ ಮೂರು ನೇರವಾಗಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ನಿಂದ ನಿರ್ವಹಿಸಲ್ಪಡುತ್ತವೆ.