Published on: September 27, 2022

ವಾಯುಮಾಲಿನ್ಯ ಪರಿಹಾರಕ್ಕೆ ವಿಶೇಷ ಯೋಜನೆ

ವಾಯುಮಾಲಿನ್ಯ ಪರಿಹಾರಕ್ಕೆ ವಿಶೇಷ ಯೋಜನೆ

ಸುದ್ದಿಯಲ್ಲಿ ಏಕಿದೆ?

ದೆಹಲಿಯಲ್ಲಿ ಪ್ರತೀ ವರ್ಷ ಮಾಲಿನ್ಯ ಸೃಷ್ಟಿಸುತ್ತಿರುವ ರೈತರ ಕೃಷಿ ತ್ಯಾಜ್ಯ ಸುಡುವಿಕೆ ಸಮಸ್ಯೆಗೆ ಅಂತ್ಯ ಹಾಡಲು ಪಂಜಾಬ್ ಮತ್ತು ದೆಹಲಿ ಸರ್ಕಾರಗಳು ಕೈಜೋಡಿಸಿವೆ. ಬೆಳೆ ತ್ಯಾಜ್ಯ ನಿರ್ವಹಣೆಗೆ ಸದ್ಯದಲ್ಲೇ ಪೈಲಟ್ ಯೋಜನೆ ಆರಂಭಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಮುಖ್ಯಾಂಶಗಳು

  • ದೆಹಲಿ ಮತ್ತು ಪಂಜಾಬ್ ಸರ್ಕಾರಗಳ ಜಂಟಿ ಸಹಯೋಗದಲ್ಲಿ ಈ ಪೈಲಟ್ ಯೋಜನೆ ಪ್ರಾರಂಭಿಸಲಾಗುತ್ತಿದೆ.
  • ಈ ಯೋಜನೆಯಡಿ ಬೆಳೆ ಕಟಾವು ಮಾಡಿದ ಬಳಿಕ ಪಂಜಾಬ್ ರಾಜ್ಯದ 5,000 ಎಕರೆ ಕೃಷಿ ಜಮೀನಿನಲ್ಲಿ ಜೈವಿಕ ವಿಘಟಕಗಳನ್ನು ಸಿಂಪಡಣೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • ಯೋಜನೆ ಅನ್ವಯ, ಪಂಜಾಬ್ ಸರ್ಕಾರವು ಗದ್ದೆಗಳಲ್ಲಿ ಉಳಿಯುವ ಹುಲ್ಲಿನ ನಿರ್ವಹಣೆಗೆ ಎಲ್ಲ ತಯಾರಿ ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದ ಉಪಕರಣಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಕಣ್ಗಾವಲಿಗಾಗಿ ಎಲ್ಲ ಜಿಲ್ಲೆಗಳಲ್ಲಿ ತಂಡಗಳನ್ನು ನಿಯೋಜಿಸಲಾಗಿದೆ.

ಉದ್ದೇಶ

  • ಕೃಷಿಯಲ್ಲಿ ಉಳಿದ ಹುಲ್ಲಿನ ಮೇಲೆ ಪುಸಾ ಜೈವಿಕ ವಿಘಟಕವನ್ನು ಸಿಂಪಡಣೆ ಮಾಡಲಾಗುತ್ತದೆ. ಅದರಿಂದ ಹುಲ್ಲು ಕೊಳೆತು ಮಣ್ಣು ಸೇರುತ್ತದೆ.ಇದರಿಂದ ಸುಡುವ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಈ ರೀತಿಯಾಗಿ ಸುಡುವುದರಿಂದ ಆಗುವ ವಾಯು ಮಾಲಿನ್ಯವನ್ನು ತಡೆಯಲು ಸಹಾಯಕವಾಗಿದೆ

ಪುಸಾ ಜೈವಿಕ ವಿಘಟಕ:

  • ಕೃಷಿಯಲ್ಲಿ ಉಳಿದ ಹುಲ್ಲು ಸುಡುವಿಕೆಗೆ ಪರಿಹಾರವಾಗಿ, ಪುಸಾ ವಿಘಟಕಗಳನ್ನು ಬಳಸಲಾಗುತ್ತಿದೆ. ‘ಪುಸಾ ವಿಘಟಕ‘ದ್ರಾವಣವನ್ನು ಬೆಳೆಗಳ ಮೇಲೆ ಸಿಂಪಡಿಸುವುದರಿಂದ ಅದು ಕೊಳೆತು ಮಣ್ಣು ಸೇರುತ್ತದೆ. ಪೂಸಾ ಡಿಕಂಪೋಸರ್ ಎಂದು ಕರೆಯಲ್ಪಡುವ ಕಡಿಮೆ-ವೆಚ್ಚದ ಜೈವಿಕ ಕಿಣ್ವವು ಒಣಹುಲ್ಲಿನ ಭಾಗವನ್ನು ವಿಭಜಿಸುತ್ತದೆ ಮತ್ತುಅದನ್ನು ಗೊ ಬ್ಬರವಾಗಿ ಪರಿವರ್ತಿಸುತ್ತದೆ. ಇದನ್ನ ಸರ್ಕಾರಿ ಸ್ವಾಮ್ಯದ ಭಾರತೀಯ ಕೃಷಿ ಸಂಶೋ ಧನಾ ಸಂಸ್ಥೆಯು ಅಭಿವೃದ್ಧಿಪಡಿಸಿದೆ.

ಕೃಷಿ ತ್ಯಾಜ್ಯವನ್ನು ಸುಡಲು ಕಾರಣ

  • ಹೆಚ್ಚಿನ ರೈತರು ಕೃಷಿ ತ್ಯಾಜ್ಯವನ್ನು ಸುಡುತ್ತಾರೆ ಏಕೆಂದರೆ ಇದು ರಾಬಿ ಋತುವಿನ ಗೋಧಿ ಬೆಳೆ ಬಿತ್ತನೆಗಾಗಿ ಹೊಲಗಳನ್ನು ಹದಗೊಳಿಸಲು ತ್ವರಿತ ಮತ್ತು ಅಗ್ಗದ ಮಾರ್ಗವಾಗಿದೆ,. ಇದರ ಪರಿಣಾಮವಾಗಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಅಪಾಯಕಾರಿ ಮಟ್ಟದ ವಾಯು ಮಾಲಿನ್ಯವನ್ನು ವರದಿ ಮಾಡುತ್ತವೆ.