Published on: September 8, 2021

ವಿಶ್ವ ಸಾಕ್ಷರತಾ ದಿನ

ವಿಶ್ವ ಸಾಕ್ಷರತಾ ದಿನ

ಸುದ್ಧಿಯಲ್ಲಿ ಏಕಿದೆ?  ಸೆಪ್ಟೆಂಬರ್ 8ಅನ್ನುವಿಶ್ವ ಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತದೆ

ಸಾಕ್ಷರತೆ ಎಂದರೇನು ?

  • ಓದುವ, ಬರೆಯುವ ಮತ್ತದನ್ನು ಗ್ರಹಿಸಿ, ಪರಿಣಾಮಕಾರಿಯಾಗಿ ಸಂವಹನ ನಡೆಸುವ ಸಾಮರ್ಥ್ಯವನ್ನು ಸಾಕ್ಷರತೆ ಎಂದು ಪರಿಗಣಿಸಲಾಗುತ್ತದೆ.
  • ಸಾಮಾಜಿಕ ಮತ್ತು ಮಾನವನ ಅಭಿವೃದ್ಧಿಗೆ ಅದೊಂದು ಇಂಧನ. ಸಾಕ್ಷರತೆ ಶಿಕ್ಷಣದ ಪಂಚಾಂಗ ಮಾತ್ರವಲ್ಲದೆ ಅಭಿವೃದ್ಧಿ ಶೀಲ ರಾಷ್ಟ್ರದ ಬೆನ್ನೆಲುಬು. ಭಾರತದಲ್ಲಿ ವಯಸ್ಕ ಸಾಕ್ಷರ ತೆಯು 15 ವರ್ಷ ಮೇಲ್ಪಟ್ಟವರಿಂದ ಮತ್ತು ಯುವ ಸಾಕ್ಷರತೆಯನ್ನು 15 ರಿಂದ 24 ವರ್ಷದೊಳಗಿನವರಿಂದ ಅಳೆಯಲ್ಪಡುತ್ತದೆ.

ಭಾರತದಲ್ಲಿ ಸಾಕ್ಷರತೆ:

  • ದೇಶದಲ್ಲಿ 7 ವರ್ಷ ದಾಟಿ ದವನಿಗೆ ಓದು ಬರಹ ತಿಳಿದರೆ ಅವನನ್ನು ಅಕ್ಷರಸ್ಥ ಎಂದು ಪರಿಗಣಿಸಲಾಗುತ್ತದೆ. ಭಾರತದ ಸರಾಸರಿ ಸಾಕ್ಷರತಾ ಪ್ರಮಾಣ ಶೇ.74. ಕೇರಳದಲ್ಲಿ ಅತೀ ಹೆಚ್ಚು ಎಂದರೆ ಶೇ. 94.
  • ಬಿಹಾರದಲ್ಲಿ ಅತೀ ಕಡಿಮೆ ಎಂದರೆ ಶೇ. 64. ಸುಮಾರು 287 ಮಿಲಿಯನ್ ಅನಕ್ಷರಸ್ಥ ವಯಸ್ಕರಿಗೆ ತವರಿನಂತಿರುವ ಭಾರತ ವಿಶ್ವದಲ್ಲಿ ಅತೀ ಹೆಚ್ಚು ಅನಕ್ಷರಸ್ಥ ಜನರಿರುವ ದೇಶವಾಗಿದೆ.
  • ಬಿಹಾರ, ಝಾರ್ಖಂ ಡ್ ಮತ್ತು ಉತ್ತರ ಪ್ರದೇಶ ದಲಿತ ಸಾಕ್ಷರತೆಯಲ್ಲಿ ತೀರಾ ಹಿಂದುಳಿದಿವೆ.
  • 2011 ರ ಜನಗಣತಿಯಂತೆ ಭಾರತ ಶೇ. 74 (ಇತ್ತೀ ಚೆಗಿನ ಸರ್ವೇಯಂತೆ ಶೇ.77) ಸಾಕ್ಷರತಾ ಪ್ರಮಾಣ ಸಾಧಿಸಿದೆ. ಇದರಲ್ಲಿ ಪುರುಷ ಸಾಕ್ಷರತಾ ದರ ಶೇ.82. ಸ್ತ್ರೀ ಸಾಕ್ಷರತಾ ಪ್ರಮಾಣ 2011 ರಲ್ಲಿ ಶೇ. 65ರಷ್ಟಿತ್ತು.
  • ಕೆಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಕ್ಷರತಾ ದರ ಶೇ. 85. ಕೇರಳ ಶೇ. 94ರಷ್ಟು ಸಾಕ್ಷರತೆ ಸಾಧಿಸು ವುದರ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ ಲಕ್ಷದ್ವೀ ಪ ಮತ್ತು ಮಿಜೋರಾಂ ದ್ವಿತೀಯ, ತೃತೀಯ ಸ್ಥಾನದಲ್ಲಿದೆ. ಆಂಧ್ರಪ್ರದೇಶದ ಸಾಕ್ಷರತಾ ಪ್ರಮಾಣ ಶೇ.66 ಆಗಿದ್ದು ಕೊನೆಯ ಸ್ಥಾನದಲ್ಲಿದೆ.
  • 1947ರ ಸಮಯದಲ್ಲಿ ಭಾರತದ ಸಾಕ್ಷರತಾ ದರ ಶೇ. 12ರಷ್ಟಾಗಿತ್ತು.
  • ಭಾರತದ ಸಂ ವಿಧಾನವು ಪ್ರತಿಯೊಬ್ಬ ಪ್ರಜೆಯ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳುತ್ತದೆ. ಅದಕ್ಕಾಗಿ ಅದರಲ್ಲಿ ಹಲವು ಅಂಶಗಳನ್ನು ಸೇರಿಸಲಾಗಿದೆ. ಸಂವಿಧಾನದ ಪರಿವಿಡಿ 30ರಂತೆ, ಅಲ್ಪ ಸಂಖ್ಯಾಕರ ಶಿಕ್ಷಣ, ನಿರ್ದೇ ಶಕ ತಣ್ತೀ ಗಳಡಿ ಎಲ್ಲ ಭಾರತೀಯರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ, ಪರಿವಿಡಿ 21 (ಎ) ಅನ್ವಯ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ಅವಕಾಶ, ಪರಿಚ್ಛೇ ದ 15, 17 ಮತ್ತು 46 ರಂತೆ ದುರ್ಬಲ ವರ್ಗದವರಿಗೆ ಶಿಕ್ಷಣ ಇವುಗಳಲ್ಲಿ ಕೆಲವು.

ಯುನೆಸ್ಕೊ ವರದಿ

  • ಯುನೆಸ್ಕೊ ತನ್ನ ವರದಿಯಲ್ಲಿ ಸಾಕ್ಷರತಾ ಪ್ರಮಾಣ ಇಳಿಕೆಯಾಗಿರುವುದನ್ನು ಬಹಿರಂಗಪಡಿಸಿದೆ.
  • ಯುನೆಸ್ಕೊ ಮಾಹಿತಿ ಪ್ರಕಾರ 2020ರಲ್ಲಿ ಶೇ.77.7ರಷ್ಟಿದ್ದ ದೇಶದ ಸಾಕ್ಷರತಾ ಪ್ರಮಾಣ 2021ಕ್ಕೆ ಶೇ.74.04ಕ್ಕೆ ಕುಸಿತ ಕಂಡಿದೆ. ಜತೆಗೆ, ಕಳೆದ ವರ್ಷ ಶೇ.77.2 ಸಾಕ್ಷರರೊಂದಿಗೆ ದೇಶಕ್ಕೆ 15ನೇ ಸ್ಥಾನದಲ್ಲಿದ್ದ ಕರ್ನಾಟಕ 2021ಕ್ಕೆ ಶೇ.75.6ಕ್ಕಿಳಿದು 17ನೇ ಸ್ಥಾನಕ್ಕೆ ಜಾರಿದೆ. ಉಳಿದಂತೆ ಶೇ.93.91 ಸಾಕ್ಷರತೆಯೊಂದಿಗೆ ಕೇರಳ ಮೊದಲ ಸ್ಥಾನ ಕಾಯ್ದುಕೊಂಡಿದ್ದರೆ, ಬಿಹಾರ ಶೇ.63.82ರ ಪ್ರಮಾಣದೊಂದಿಗೆ ಕೊನೆಯ ಸ್ಥಾನದಲ್ಲಿದೆ

ಸಂದಿಗ್ಧತೆ ಸವಾಲು

  • ರಾಜ್ಯದಲ್ಲಿ ಕೊರೊನಾತಂಕದ ಹಿನ್ನೆಲೆಯಲ್ಲಿ 1ರಿಂದ 5ನೇ ತರಗತಿಗಳಿಗಿನ್ನು ನೇರ ತರಗತಿ ಆರಂಭಿಸಲಾಗಿಲ್ಲ. ಯುನೆಸ್ಕೊ ಪ್ರಕಾರ 6 ವರ್ಷ ಪೂರೈಸಿದ ಪ್ರತಿ ಮಗು ಬರೆಯುವ ಮತ್ತು ಓದುವ ಕೌಶಲ ಪಡೆಯಬೇಕು. ಆಗ ಮಾತ್ರ ಸಾಕ್ಷರ ಪ್ರಮಾಣ ಏರಿಕೆಯಾಗುತ್ತದೆ. ಜತೆಗೆ, ಆರ್ಥಿಕವಾಗಿ, ಸಾಮಾಜಿಕವಾಗಿ ದೇಶದ ಬೆಳವಣಿಗೆ ಸಾಧ್ಯವಾಗುತ್ತದೆ.
  • ಆದರೆ, ಸೋಂಕಿನಾತಂಕದಲ್ಲಿ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜತೆಗೆ ಅನೇಕರು ಬಾಲ ಕಾರ್ಮಿಕ ಪದ್ಧತಿಗೆ ಒಳಗಾಗುತ್ತಿದ್ದು, ಸಾಕ್ಷರ ಪ್ರಮಾಣ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ. ಕೊರೊನಾ ತೀವ್ರತೆ ಇಳಿಕೆಯಾದ ಬಳಿಕ ಈ ಮಕ್ಕಳು ಶಾಲೆಗೆ ಪ್ರವೇಶ ಪಡೆದು ಶಿಕ್ಷಣ ಪಡೆಯುವ ಅವಕಾಶ ದೊರಕದೆ ಹೋದರೆ ಜೀವನಪರ್ಯಂತ ಅನಕ್ಷರಸ್ಥರಾಗಿಯೇ ಮುಂದುವರಿಯುವ ಅಪಾಯವಿದೆ.

ಸರಕಾರಗಳಿಂದ ಉತ್ತೇ ಜನ :

  • ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗಿನಿಂದಲೂ ಎಲ್ಲ ಸರಕಾರಗಳೂ ಶಿಕ್ಷಣಕ್ಕೆ ಉತ್ತೇ ಜನ ನೀಡುತ್ತಲೇ ಬಂದಿವೆ. ಸ್ವಾತಂತ್ರ್ಯ ಪೂರ್ವಕ್ಕೆ ಹೋಲಿಸಿದಲ್ಲಿ ದೇಶ ಶೈಕ್ಷಣಿಕವಾಗಿ ಗಮನಾರ್ಹ ಸಾಧನೆಗೈದಿದೆಯಾದರೂ ಶತಪ್ರತಿಶತ ಸಾಕ್ಷರತೆಯನ್ನು ಸಾಧಿಸಲು ಸಾಧ್ಯವಾಗಿಲ್ಲ.
  • ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳು, ಬಡವರು, ಪರಿಶಿಷ್ಟ ಜಾತಿ, ಪಂಗಡ, ಬುಡಕಟ್ಟು ಜನಾಂಗದವರು ಇನ್ನೂ ಶಾಲೆಗಳ ಮೆಟ್ಟಲೇರದಿರುವುದು ದೇ ಶ ಸಾಕ್ಷರತೆಯಲ್ಲಿ ಹಿಂದುಳಿಯಲು ಪ್ರಮುಖ ಕಾರಣಗಳಾ ಗಿವೆ. ಶಿಕ್ಷಣಕ್ಕೆ ಪ್ರೋ ತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿದ್ಯಾರ್ಥಿ ವೇತನ, ವಸತಿ ಸಹಿತ ಶಾಲೆಗಳು, ಉಚಿತ ವಿದ್ಯಾರ್ಥಿ ನಿಲಯ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಗ್ರಿಗಳು, ಸೈಕಲ್ ಆದಿಯಾಗಿ ಹತ್ತು ಹಲವು ಯೋಜನೆ ಗಳನ್ನು ಅನು ಷ್ಠಾನಗೊಳಿಸಿವೆ.
  • 1995ರಲ್ಲಿ ಜಾರಿಗೆ ಬಂದ ಮಧ್ಯಾ ಹ್ನದ ಬಿಸಿಯೂಟ ಯೋಜನೆ ಇವುಗಳಲ್ಲಿ ಅತ್ಯಂ ತ ಮಹತ್ವಾ ಕಾಂಕ್ಷಿ ಯೋಜನೆಯಾಗಿದ್ದು ಇದರಿಂದ ಮಕ್ಕಳಿಗೆ ಶಿಕ್ಷಣದ ಜತೆಜತೆಯಲ್ಲಿ ಪೌಷ್ಟಿಕ ಆಹಾರವನ್ನು ನೀಡಲು ಸಾಧ್ಯವಾಗಿದೆ.
  • ಸಾಕ್ಷರತೆ ಗುರಿ ಸಾಧನೆಗೆ ‘ಓದು ಬರಹ’ ಅಭಿಯಾನ..! 2030ರ ವೇಳೆಗೆ ಅನಕ್ಷರತೆ ಕಳಂಕ ಅಳಿಸಲು ಸಂಕಲ್ಪ

ನಿಪುಣ್ ಭಾರತ್:

  • ನೂತನ ಶಿಕ್ಷಣ ನೀತಿಯಡಿಯಲ್ಲಿ “ನಿಪುಣ್ ಭಾರತ್’ ಎಂಬ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಇದಕ್ಕೆ 2021-22 ಸಾಲಿನಲ್ಲಿ 2,688 ಕೋ.ರೂ.ಗಳನ್ನು ಮೀಸಲಿಡಲಾಗಿದೆ. 3 ರಿಂದ 9 ವರ್ಷದ ಮಕ್ಕಳಲ್ಲಿ ಸಾಕ್ಷರತೆಯ ತಳಹದಿ ಮತ್ತು ಅಂಕೆ ಸಂಖ್ಯೆಗಳ ಕೌಶಲವನ್ನು ಸಾಧಿಸುವುದು (ಫೌಂ ಡೇಶನಲ್ ಲಿಟೆರೆಸಿ ಆಂಡ್ ನ್ಯೂಮೆರೆಸಿ- ಎಫ್ಎಲ್ಎನ್) ಈ ಯೋಜನೆಯ ಉದ್ದೇ ಶ.
  • 2026-27 ರಲ್ಲಿ ಪ್ರತಿಯೊಂದು ವಿದ್ಯಾರ್ಥಿಯೂ ಎಫ್ಎಲ್ಎನ್ ಕೌಶಲವನ್ನು ಪಡೆಯುವಂತಾಗಬೇಕು. ಪ್ರಾಥಮಿಕ ಶಾಲೆಯ ಹಂತದಲ್ಲಿ ಚಟುವಟಿಕೆ – ಕಥೆ, ಕಲೆ, ಆಧಾರಿತ ಪಾಠ ನಿಪುಣ್ ಯೋಜನೆಯ ಪ್ರಮುಖ ಅಂಶಗಳಲ್ಲೊಂದಾಗಿದೆ. ಅಂಗನವಾಡಿ, ಕಿರಿಯ ಪ್ರಾಥಮಿಕ ಹಂತದ ಶಿಕ್ಷಕರಿಗೆ ಈ ನಿಟ್ಟಿನಲ್ಲಿ ವಿಶೇಷ ತರಬೇತಿಗಳನ್ನು ಹಮ್ಮಿಕೊಳ್ಳಲು ಉದ್ದೇ ಶಿಸಲಾಗಿದೆಯಲ್ಲದೆ ಯೋಜನೆಯ ಯಶಸ್ಸಿಗಾಗಿ ಹೆತ್ತವರು ಮತ್ತು ಸಮುದಾಯದ ಸಹಕಾರವನ್ನು ಪಡೆಯಲಾಗುವುದು.

ಸಾಕ್ಷರತಾ ದಿನದ ಹಿನ್ನಲೆ..

  • 1965ರಲ್ಲಿ ಇರಾನ್ ನಲ್ಲಿ ನಡೆದಿದ್ದ ವಿಶ್ವಸಂಸ್ಥೆ ಸಭೆಯಲ್ಲಿ ಜಗತ್ತಿನ ಅನಕ್ಷರತೆ ನಿವಾರಣೆಗೆ ಪ್ರಯತ್ನಿಸಲು ತೀರ್ಮಾನ ಕೈಗೊಳ್ಳಲಾಯಿತು. ಈ ಹಿನ್ನಲೆಯಲ್ಲಿ ಪ್ರತಿ ವರ್ಷದ ಸೆ.8ರಂದು ವಿಶ್ವಸಾಕ್ಷರತಾ ದಿನ ಆಚರಿಸಲು ತೀರ್ಮಾನಿಸಲಾಯಿತು.
  • ಪ್ರತಿವರ್ಷ ಒಂದೊಂದು ಥೀಮ್ ನೀಡಲಾಗುತ್ತದೆ. ಮಾನವ ಕೇಂದ್ರೀತ ಸಾಕ್ಷರತೆಯ ಚೇತರಿಕೆ , ಡಿಜಿಟಲ್ ಅಂತರ ಕಿರಿದಾಗಿಸುವುದು ಈ ವರ್ಷದ ಥೀಮ್ ಆಗಿದೆ.