Published on: October 15, 2022

ಸುದ್ಧಿ ಸಮಾಚಾರ – 15 ಅಕ್ಟೋಬರ್ 2022

ಸುದ್ಧಿ ಸಮಾಚಾರ – 15 ಅಕ್ಟೋಬರ್ 2022

         ಆಚಾರ್ಯ ಬಾಲಕೃಷ್ಣಗೆ ಜಾಗತಿಕ ಮಾನ್ಯತೆ

  • ಪತಂಜಲಿ ಆಯುರ್ವೇದ್ ಕಂಪನಿಯ ಅಧ್ಯಕ್ಷ ಆಚಾರ್ಯ ಬಾಲಕೃಷ್ಣ ಅವರನ್ನು ‘ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ಎಲ್ಸುವೀರ್‌ ಸಂಸ್ಥೆಯು ವಿಶ್ವದ ಶೇಕಡ 2ರಷ್ಟು ಉನ್ನತ ವಿಜ್ಞಾನಿಗಳ ಪೈಕಿ ಒಬ್ಬರು ಎಂದು ಮಾನ್ಯ ಮಾಡಿವೆ’. ಭಾರತದ ಪುರಾತನ ವಿಜ್ಞಾನ ‘ಆಯುರ್ವೇದ ಮತ್ತು ಯೋಗದ ಮೇಲಿನ ವೈಜ್ಞಾನಿಕ ಸಂಶೋಧನೆಗಳಿಗೆ ಹಿಂದೆಂದೂ ಸಿಗದಿದ್ದಂತಹ ಜಾಗತಿಕ ಮಾನ್ಯತೆ ಇದು.
  • ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿದೆ. 2018ರಲ್ಲಿ ಈ ಯೋಜನೆ ರದ್ದುಗೊಳಿಸಲಾಗಿತ್ತು. ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ ತಲಾ 500 ರೂ. ಹಾಗೂ ನಗರ ಪ್ರದೇಶದ ಸಹಕಾರಿಗಳಿಗೆ 1000 ರೂ. ವಂತಿಗೆ ನಿಗದಿ ಪಡಿಸಲಾಗಿದೆ.
  • ಗುಜರಾತನಲ್ಲಿ ನಡೆದ 36ನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ 88 ಪದಕಗಳು ಲಭಿಸಿದ್ದು, 27 ಚಿನ್ನ, 23 ಬೆಳ್ಳಿ ಮತ್ತು 38 ಕಂಚಿನ ಪದಕಗಳನ್ನು ಪಡೆದುಕೊಂಡು 4 ನೇ ಸ್ಥಾನದಲ್ಲಿದೆ.