Published on: June 24, 2022

ಸುದ್ಧಿ ಸಮಾಚಾರ – 24 ಜೂನ್ 2022

ಸುದ್ಧಿ ಸಮಾಚಾರ – 24 ಜೂನ್ 2022

  • ಭಾರತೀಯ ವಿಜ್ಞಾನ ಸಂಸ್ಥೆ (IISc) ಬೆಂಗಳೂರಿನಲ್ಲಿ 280 ಕೋಟಿ ರೂಪಾಯಿ ವೆಚ್ಚದಲ್ಲಿ ಮೆದುಳಿನ ಸಂಶೋಧನಾ ಕೇಂದ್ರವನ್ನು (CBR) ಸ್ಥಾಪಿಸಲಾಗಿದೆ.

  • ಒಂದೂವರೆ ವರ್ಷಗಳ ನಂತರ ಕಬ್ಬನ್ ಪಾರ್ಕ್‌ನಲ್ಲಿರುವ ನಗರದ ಬಹು ನಿರೀಕ್ಷಿತ ಜವಾಹರ್ ಬಾಲ ಭವನ (ಜೆಬಿಬಿ) ಜೂನ್ 25 ಜನರಿಗೆ ತೆರೆದುಕೊಳ್ಳಲಿದೆ.
  • 2022, ಜೂನ್ 21 ರಂದು ಎಂಟನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಾಗಿದೆ. ಮಾನವೀಯತೆಗಾಗಿ ಯೋಗ: ಇದು ಈ ಬಾರಿಯ ಯೋಗ ದಿನಾಚರಣೆಯ ಘೋಷವಾಕ್ಯ. ಈ ಬಾರಿ ಮೈಸೂರಿನಲ್ಲಿ ಪ್ರಮುಖ ಕಾರ್ಯಕ್ರಮ ನಡೆಯಿತು, ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಜತೆಗೆ 15,000ಕ್ಕೂ ಅಧಿಕ ಮಂದಿ ಯೋಗ ಪ್ರದರ್ಶನ ನೀಡಿದರು.
  • ಆಯುಷ್‌ ಇಲಾಖೆಯು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಹಯೋಗದಲ್ಲಿ ಈ ಡಿಜಿಟಲ್ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು, ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಗಾಟಿಸಿದ್ದರು.
  • ಹಿರಿಯ ರಾಜತಾಂತ್ರಿಕ ಅಧಿಕಾರಿ ರುಚಿರಾ ಕಾಂಬೋಜ್ ಅವರನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ.
  • ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಡಿಜಿಟಲೀಕರಣಗೊಳ್ಳುತ್ತಿದ್ದು, ಅಂಚೆ ಇಲಾಖೆಯ ಸೇವೆಗಳು ಕೂಡ ವಾಟ್ಸ್ಆ್ಯಪ್ ಮೂಲಕ ಲಭ್ಯವಾಗಲಿದೆ.
  • ಚಿನ್ನದ ಸಂಸ್ಕರಣೆ ಮತ್ತು ಮರುಬಳಕೆಯ ವರದಿಯನ್ನು ಇತ್ತೀಚೆಗೆ WGC ಪ್ರಕಟಿಸಿದೆ. ವರದಿಯಲ್ಲಿ, 2021 ರಲ್ಲಿ 168 ಟನ್ ಚಿನ್ನವನ್ನು ಮರುಬಳಕೆ ಮಾಡಿದ ನಂತರ ಚೀನಾ ಜಾಗತಿಕ ಚಿನ್ನದ ಮರುಬಳಕೆ ಚಾರ್ಟ್‌ನಲ್ಲಿ ಮೊದಲ ಸ್ಥಾನದಲ್ಲಿದೆ.ಇದರ ನಂತರ ಇಟಲಿ 80 ಟನ್ ಚಿನ್ನ ಮತ್ತು ಯುಎಸ್ ಮೂರನೇ ಸ್ಥಾನದಲ್ಲಿದೆ, 2021 ರಲ್ಲಿ 78 ಟನ್ ಮರುಬಳಕೆ ಮಾಡಲಾಗುತ್ತಿದೆ.
  • ಆಗ್ನೇಯ ಏಷ್ಯಾ ರಾಷ್ಟ್ರ ಮತ್ತು ಯುನೈಟೆಡ್ ಸ್ಟೇಟ್ಸ್‌ನ ವಿಜ್ಞಾನಿಗಳ ಪ್ರಕಾರ, ವಿಶ್ವದ ಅತಿದೊಡ್ಡ ದಾಖಲಿತ ಸಿಹಿನೀರಿನ ಮೀನು, ದೈತ್ಯ ಸ್ಟಿಂಗ್ರೇ, ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಸಿಕ್ಕಿದೆ.
  • ಕುರ್ಟಾನಾ ಗೇಮ್ಸ್: ಫಿನ್ ಲ್ಯಾಂಡ್ ನ ಕುರ್ಟಾನಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತದ ನೀರಜ್ ಚೋಪ್ರಾ ಮತ್ತೊಂದು ಸಾಧನೆ ಮಾಡಿದ್ದು, ಮತ್ತೆ ಚಿನ್ನ ಗೆದ್ದ ಇತಿಹಾಸ ಬರೆದಿದ್ದಾರೆ.ಟೋಕಿಯೊ ಒಲಿಂಪಿಕ್ಸ್‌ನ ನಂತರ ಇದು ನೀರಜ್ ಚೋಪ್ರಾರ ಎರಡನೇ ಸ್ಪರ್ಧೆಯಾಗಿದ್ದು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚೋಪ್ರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯರಾದರು. ಇನ್ನು ಕೆಶೋರ್ನ್ ವಾಲ್ಕಾಟ್ 86.64 ಮೀ. ಎಸೆದು ಎರಡನೇ ಸ್ಥಾನ ಪಡೆದರೆ, ಆಂಡರ್ಸನ್ ಪೀಟರ್ಸ್ 84.75ರ ಅತ್ಯುತ್ತಮ ಪ್ರಯತ್ನದೊಂದಿಗೆ ಮೂರನೇ ಸ್ಥಾನ ಪಡೆದರು.