Published on: November 3, 2022
ಹಂಪಿ ಬೈ ನೈಟ್’ಯೋಜನೆ
ಹಂಪಿ ಬೈ ನೈಟ್’ಯೋಜನೆ
![](https://nammakpsc.com/wp-content/uploads/2022/11/Picture-1-14.jpg)
ಸುದ್ದಿಯಲ್ಲಿ ಏಕಿದೆ?
ವಿಶ್ವವಿಖ್ಯಾತ ಹಂಪಿಯಲ್ಲಿ ಕನ್ನಡ ರಾಜ್ಯಾತ್ಸವದ ನಿಮಿತ್ತ ರಾತ್ರಿ ಹಂಪಿ ಬೈ ನೈಟ್ ವಿನೂತನ ಯೋಜನೆಯ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಚಾಲನೆ ನೀಡಿದರು.
ಮುಖ್ಯಾಂಶಗಳು
- ಇನ್ನು ಮುಂದೆ ಹಂಪಿಯಲ್ಲಿರುವ 18 ಸ್ಮಾರಕಗಳನ್ನು ಪ್ರವಾಸಿಗರು ಸಂಜೆ ವೇಳೆ ಬೆಳಕು ಮತ್ತು ಧ್ವನಿ ಕಾರ್ಯಕ್ರಮದ ಮೂಲಕ ವೀಕ್ಷಿಸಬಹುದು.
- ತಾಂತ್ರಿಕ ಕಾರಣಗಳಿಂದ ಒಂದು ವರ್ಷದಿಂದ ‘ಹಂಪಿ ಬೈ ನೈಟ್’ ಯೋಜನೆ ಸ್ಥಗಿತಗೊಂಡಿತ್ತು. ಹಂಪಿ ವರ್ಲ್ಡ್ ಹೆರಿಟೇಜ್ ಏರಿಯಾ ಮ್ಯಾನೇಜ್ಮೆಂಟ್ ಅಥಾರಿಟಿ ಮತ್ತು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾಯಿಂದ ಅನುಮತಿಯ ದೊರೆಯದ ಹಿನ್ನೆಲೆಯಲ್ಲಿ ಯೋಜನೆಯನ್ನು ತಡೆಹಿಡಿಯಲಾಗಿತ್ತು.
- ಹಂಪಿ ಸ್ಥಳದ ಮಹಿಮೆ ಸಾರುವ ಕಥನ, ಶ್ರೀವಿರೂಪಾಕ್ಷೇಶ್ವರ ಮತ್ತು ಶ್ರೀ ಪಂಪಾಂಬಿಕೆ ದೇವಿ ಕಥನ ಮತ್ತು ವಾಲಿ ಮತ್ತು ಸುಗ್ರೀವ ಕಥನವುಳ್ಳ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು.
- ಜಿಲ್ಲಾಡಳಿತ ಮತ್ತು ಹಂಪಿ ವರ್ಲ್ಡ್ ಹೆರಿಟೇಜ್ ಏರಿಯಾ ಮ್ಯಾನೇಜ್ಮೆಂಟ್ ಅಥಾರಿಟಿ ಮೇಲ್ವಿಚಾರಣೆಯಲ್ಲಿ ಖಾಸಗಿ ಕಂಪನಿಯೊಂದು ಹಂಪಿ ಬೈ ನೈಟ್ ಕಾರ್ಯಕ್ರಮದ ಗುತ್ತಿಗೆಯನ್ನು ಪಡೆದುಕೊಂಡಿದೆ.
ಹಂಪಿಯ ಬಗ್ಗೆ ವಿವರಣೆ
- ಹಂಪಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಐತಿಹಾಸಿಕ ಸ್ಥಳ. ೧೩೩೬ರಿಂದ ೧೫೬೫ರವರೆಗೆ (1336-1565) ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು.
- ಹಂಪಿಯ ಮೊದಲನೆ ಹೆಸರು ‘ಪಂಪಾ’ ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು ‘ವಿಜಯನಗರ’ ಮತ್ತು ‘ವಿರುಪಾಕ್ಷಪುರ’ ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.
- ಚಂಪೊಲಿಥಿಕ್ ಮತ್ತು ನವಶಿಲಾಯುಗದ ಯುಗದ ಹೊರತಾಗಿ ಹಂಪಿಯ ಇತಿಹಾಸವು 3 ನೇ ಶತಮಾನದ ಅಶೋಕ ಸಾಮ್ರಾಜ್ಯದ ಶಾಸನಗಳನ್ನು ಸಹ ನಮಗೆ ತಿಳಿಸುತ್ತದೆ.
- ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಬಗಳು, ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪತಿ, ಉಗ್ರನರಸಿಂಹ, ಕಮಲ ಮಹಲ್, ಬಡವಿ ಲಿಂಗ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.
- ಕೃಷ್ಣ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆ ಸ್ಮಾರಕಗಳ ಪಟ್ಟಿ ಮಾಡಲಾಗಿದೆ. ಕೃಷ್ಣ ದೇವಾಲಯವನ್ನು ಕ್ರಿ.ಶ 1513 ರಲ್ಲಿ ಕೃಷ್ಣದೇವರಾಯ ನಿರ್ಮಾಣ ಮಾಡಿದ್ದಾನೆ.