Published on: January 29, 2022

ಹಾಸನದಿಂದ ತೆಂಗು ಬೆಳೆ

ಹಾಸನದಿಂದ ತೆಂಗು ಬೆಳೆ

ಮುಖ್ಯಾಂಶಗಳು ಸುದ್ಧಿಯಲ್ಲಿ ಏಕಿದೆ ? ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ್‌ ಭಾರತ್‌ ಯೋಜನೆಯಡಿ ಹಾಸನ ಜಿಲ್ಲೆಯ ತೆಂಗಿನ ಬೆಳೆ ಆಯ್ಕೆಯಾಗಿದೆ.

  • ಒಂದು ಜಿಲ್ಲೆ ಒಂದು ಬೆಳೆ ಅನ್ವಯ ತೆಂಗು ಆಯ್ಕೆಯಾಗಿದ್ದು, ಅರಸೀಕೆರೆ, ಚನ್ನರಾಯ ಪಟ್ಟಣ, ಹೊಳೆನರಸೀಪುರ ಭಾಗದಲ್ಲಿ 1.05 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಗಾರರಲ್ಲಿ ಅನೇಕರು ಯೋಜನೆ ಪ್ರಯೋಜನ ಪಡೆಯಲು ಮುಂದಾಗಿದ್ದಾರೆ

ಒಂದು ಜಿಲ್ಲೆ ಒಂದು ಬೆಳೆ

  • ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಡಿಯಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದ ಕೇಂದ್ರ ಸರ್ಕಾರ, ಇದೀಗ ಯೋಜನೆಯ ಅನುಷ್ಠಾನದತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕುಕ್ಕುಟೋದ್ಯಮ, ಮೀನು ಸಾಕಾಣಿಕೆ, ಸಮುದ್ರ ಉತ್ಪನ್ನ ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳಿಗೆ ಒಂದೊಂದು ನಿರ್ದಿಷ್ಟ ಜಿಲ್ಲೆಯನ್ನು ನಿಗದಿಪಡಿಸುವ ಸಲುವಾಗಿ ದೇಶಾದ್ಯಂತ ಸುಮಾರು 728 ಜಿಲ್ಲೆಗಳನ್ನು ಆರಿಸಿಕೊಂಡಿತ್ತು. ಅಲ್ಲದೇ ಆಯಾ ಜಿಲ್ಲೆಗಳಲ್ಲಿ ಒಂದೊಂದು ಪ್ರಮುಖ ಉದ್ಯಮಕ್ಕೆ ಸಂಬಂಧಿಸಿದ ಕೇಂದ್ರ ಸ್ಥಾಪಿಸುವುದಾಗಿಯೂ ಹೇಳಿತ್ತು.
  • ಕೃಷಿ ಉತ್ಪನ್ನಗಳನ್ನು ಉತ್ತೇಜಿಸುವ ಜೊತೆಗೆ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಘೋಷಿತವಾಗಿರುವ ಈ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ಯಾವ ಜಿಲ್ಲೆಗಳಿಗೆ ಯಾವ ಉತ್ಪನ್ನಗಳನ್ನು ನಿಗದಿಪಡಿಸಲಾಗಿದೆ ಎಂಬ ಮಾಹಿತಿಯುಳ್ಳ ಅಧಿಕೃತ ಪಟ್ಟಿ ಬಿಡುಗಡೆಯಾಗಿದ್ದು, ರಾಜ್ಯದ 31 ಜಿಲ್ಲೆಗಳಿಗೂ ಒಂದೊಂದು ಬೆಳೆ ನಿಗದಿ ಮಾಡಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.
  • ಬಾಗಲಕೋಟೆ – ಈರುಳ್ಳಿ, ಬಳ್ಳಾರಿ – ಅಂಜೂರ, ಬೆಳಗಾವಿ – ಕಬ್ಬು, ಬೆಂಗಳೂರು ಗ್ರಾ ಮಾಂತರ – ಕುಕ್ಕುಟೋದ್ಯಮ, ಬೆಂಗಳೂರು ನಗರ – ಬೇಕರಿ ತಿಂಡಿ ತಿನಿಸು ಉತ್ಪನ್ನಗಳು, ಬೀದರ್ – ಶುಂಠಿ, ಚಾಮರಾಜನಗರ – ಅರಶಿನ ಉತ್ಪನ್ನ, ಚಿಕ್ಕಬಳ್ಳಾಪುರ – ಟೊಮ್ಯಾಟೋ, ಧಾರವಾಡ – ಮಾವು, ಚಿಕ್ಕಮಗಳೂರು – ಮೆಣಸು ಮತ್ತು ಸಾಂಬಾರು ಪದಾರ್ಥ, ಚಿತ್ರದುರ್ಗ – ಕಡಲೆಕಾಯಿ, ದಾವಣಗೆರೆ – ಸಿರಿಧಾನ್ಯ, ದಕ್ಷಿಣ ಕನ್ನಡ – ಮೀನು ಸೇರಿದಂತೆ ಸಮುದ್ರ ಉತ್ಪನ್ನ, ಗದಗ – ಬ್ಯಾಡಗಿ ಮೆಣಸಿನಕಾಯಿ, ಕೊಡಗು – ಕಾಫಿ, ಹಾಸನ – ತೆಂಗು, ತುಮಕೂರು – ಕೊಬ್ಬರಿ ಉತ್ಪನ್ನ, ಹಾವೇರಿ – ಮಾವು, ಕಲಬುರಗಿ – ತೊಗರಿ, ಕೋಲಾರ – ಟೊಮ್ಯಾಟೋ, ಕೊಪ್ಪಳ – ಸೀಬೆ ಹಣ್ಣು, ಮಂಡ್ಯ – ಕಬ್ಬು, ಮೈಸೂರು – ಬಾಳೆಹಣ್ಣು, ರಾಯಚೂರು – ಮೆಣಸಿನಕಾಯಿ, ರಾಮನಗರ – ತೆಂಗು, ಶಿವಮೊಗ್ಗ – ಪೈನಾಪಲ್, ಶಿರಸಿ – ಜೇನು, ಉಡುಪಿ – ಮೀನು ಸೇರಿ ಸಮುದ್ರದ ಉತ್ಪನ್ನಗಳು, ಉತ್ತರ ಕನ್ನಡ – ಸಾಂಬಾರು ಪದಾರ್ಥಗಳು, ವಿಜಯಪುರ – ನಿಂಬೆಹಣ್ಣು, ಯಾದಗಿರಿ – ಕಡಲೆಕಾಯಿ