Published on: July 1, 2025

ಅಪ್ಸರಕೊಂಡ ಕಡಲ ವನ್ಯಜೀವಿ ಧಾಮ

ಅಪ್ಸರಕೊಂಡ ಕಡಲ ವನ್ಯಜೀವಿ ಧಾಮ

ಸುದ್ದಿಯಲ್ಲಿ ಏಕಿದೆ? ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಮತ್ತು ಇಕೋಬೀಚ್‌ ಒಳಗೊಂಡ ಕಡಲತೀರ ಪ್ರದೇಶವನ್ನು, ರಾಜ್ಯದಲ್ಲಿಯೇ ಮೊದಲ ಕಡಲ ವನ್ಯಜೀವಿಧಾಮವಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.  ಕಡಲ ವನ್ಯಜೀವಿಧಾಮ ಘೋಷಣೆಯಿಂದ ಸಮುದ್ರ ಜೀವಿಗಳಿಗೆ ಹೆಚ್ಚಿನ ರಕ್ಷಣೆ ಸಿಗಲಿದೆ.

ಮುಖ್ಯಾಂಶಗಳು

  • ತಾಲೂಕಿನ ಮಂಕಿ ಮಡಿಯಿಂದ ಮುಗಳಿ, ಕಾಸರಕೋಡಿನ ಅಪ್ಸರಕೊಂಡ, ಇಕೋಬೀಚ್‌ವರೆಗಿನ ಪ್ರದೇಶವನ್ನೊಳಗೊಂಡ 322 ಹೆಕ್ಟೇರ್‌ ಪ್ರದೇಶವನ್ನು ಒಳಗೊಂಡಿದೆ.
  • ಕಡಲ ವನ್ಯಜೀವಿಧಾಮ ಪ್ರದೇಶವು ಸಮುದ್ರ ತೀರದಿಂದ ಸಮುದ್ರದ ಒಳಗಡೆ ಆರು ಕಿ.ಮೀ.ವರೆಗೆ ವಿಸ್ತರಿಸಿದ್ದು, 835 ಹೆಕ್ಟೇರ್‌ ಅರಣ್ಯ ಹೊಂದಿದೆ.
  • ರಕ್ಷಣೆ: ಈ ವ್ಯಾಪ್ತಿಯ ಕಾಂಡ್ಲಾಕಾಡು, ಹಂಪ್‌ ಬ್ಯಾಕ್‌ ತಿಮಿಂಗಲಗಳು, ಸ್ಪಾಟ್‌ಲೈಟ್‌ ಶಾರ್ಕ್ಗಳು, ಅಲಿವ್‌ ರಿಡ್ಲೆಆಮೆ ಮತ್ತು ಆಮೆ ಮರಿಗಳು, ಸಮುದ್ರ ಪಕ್ಷಿಗಳು, ಹವಳದ ದಿಬ್ಬಗಳು ಮುಂತಾದವುಗಳಿಗೆ ಇನ್ನೂ ಹೆಚ್ಚಿನ ರಕ್ಷಣೆ ಸಿಗಲಿದೆ.
  • ಇಲ್ಲಿ ಪ್ರತಿ ವರ್ಷ ಆಲಿವ್‌ರೆಡ್ಲೆಆಮೆಗಳು ಮೊಟ್ಟೆ ಇಡಲು ಬರುತ್ತವೆ.

ಉದ್ದೇಶ

ಅಪ್ಸರಕೊಂಡ ಮತ್ತು ಅಂತಾರಾಷ್ಟ್ರೀಯ ಮಟ್ಟದ ಬ್ಲೂಫ್ಲಾಗ್‌ ಮಾನ್ಯತೆ ಪಡೆದರುವ ಇಕೋ ಬೀಚ್‌ ಈಗಾಗಲೇ ಪ್ರವಾಸಿ ತಾಣವಾಗಿ ಬೆಳೆದಿದೆ. ಕಡಲ ವನ್ಯಜೀವಿಧಾಮ ಘೋಷಣೆಯಿಂದಾಗಿ ಈ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಹೆಚ್ಚಿನ ನೆರವು ದೊರೆಯಲಿದೆ. ಪರಿಸರ ಪ್ರವಾಸೋದ್ಯಮಕ್ಕೆ ಮತ್ತಷ್ಟು ಅನುಕೂಲವಾಗಲಿದೆ.

ಕಡಲ ವನ್ಯಜೀವಿಧಾಮ ಘೋಷಣೆಯಿಂದ ಸಮುದ್ರ ಜೀವಿಗಳಿಗೆ ಹೆಚ್ಚಿನ ರಕ್ಷಣೆ ಸಿಗುತ್ತವೆ. ಅರಣ್ಯ ಇಲಾಖೆಯಿಂದ ಹೆಚ್ಚಿನ ಅಭಿವೃದ್ಧಿ ಚಟವಟಿಕೆಗಳನ್ನು ಮಾಡಬಹುದು. ಪರಿಸರ, ಕಡಲ ಜೀವಿಗಳ ರಕ್ಷಣೆ, ಪರಿಸರ ಪ್ರವಾಸೋದ್ಯಮಕ್ಕೆ ಅನುಕೂಲ ಆಗುತ್ತದೆ

ಈ ಘೋಷಣೆಯ ಪ್ರಯೋಜನಗಳು:

  • ಪರಿಸರ ಸಂರಕ್ಷಣೆಗೆ ಒತ್ತ.
  • ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ.
  • ಸ್ಥಳೀಯ ಜನರಿಗೆ ಆರ್ಥಿಕ ಅವಕಾಶಗಳು
  • ಜೈವವೈವಿಧ್ಯದ ಅಧ್ಯಯನ ಮತ್ತು ಸಂಶೋಧನೆಗೆ ಅವಕಾಶ.

ಕಾನೂನು ಚೌಕಟ್ಟು:

ಭಾರತದ ಸಮುದ್ರ ಸಂರಕ್ಷಿತ ಪ್ರದೇಶಗಳನ್ನು ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ಮತ್ತು ಇತರ ಸಂಬಂಧಿತ ಶಾಸನಗಳ ಅಡಿಯಲ್ಲಿ ಸ್ಥಾಪಿಸಲಾಗುತ್ತದೆ.

ನಿಮಗಿದು ತಿಳಿದಿರಲಿ

ಕಚ್ ಕೊಲ್ಲಿಯು ಭಾರತದ ಮೊದಲ ಸಮುದ್ರ ವನ್ಯಜೀವಿ ಅಭಯಾರಣ್ಯ ಮತ್ತು ಮೊದಲ ಸಮುದ್ರ ರಾಷ್ಟ್ರೀಯ ಉದ್ಯಾನವನವಾಗಿದ್ದು, ಇದನ್ನು 1980 ಮತ್ತು 1982 ರಲ್ಲಿ ಕಚ್ ಕೊಲ್ಲಿಯಲ್ಲಿ ರಚಿಸಲಾಯಿತು