Published on: September 17, 2025
ಡಾ. ಭೂಪೇನ್ ಹಜಾರಿಕಾ: ಅಸ್ಸಾಂನ “ಬ್ರಹ್ಮಪುತ್ರದ ಜನಪದ ಕವಿ” 100ನೇ ಜನ್ಮದಿನಾಚರಣೆ
ಡಾ. ಭೂಪೇನ್ ಹಜಾರಿಕಾ: ಅಸ್ಸಾಂನ “ಬ್ರಹ್ಮಪುತ್ರದ ಜನಪದ ಕವಿ” 100ನೇ ಜನ್ಮದಿನಾಚರಣೆ
ಸುದ್ದಿ – ಡಾ. ಭೂಪೇನ್ ಹಜಾರಿಕಾ (1926–2011), ಮಾನವತಾವಾದಿ ಸಂಗೀತಜ್ಞ, ಅಸ್ಸಾಮಿ ಜನಪದವನ್ನು ನ್ಯಾಯ, ಸೌಹಾರ್ದತೆ ಮತ್ತು ಸಹಾನುಭೂತಿ ಸಂದೇಶಗಳೊಂದಿಗೆ ದೇಶ-ವಿದೇಶದಲ್ಲಿ ಪ್ರಸಿದ್ಧಿಪಡಿಸಿದರು.
ಭೂಪೇನ್ ಹಜಾರಿಕಾ (1926-2011) ಕುರಿತು:
- ಅಸ್ಸಾಂನಲ್ಲಿ ಜನಿಸಿದ ಇವರು, ” ಬ್ರಹ್ಮಪುತ್ರದ ಜನಪದ ಕವಿ ” (Bard of Brahmaputra) ಮತ್ತು “ಸುಧಾಕಂಠ” (Sudhakantha – ಕೋಗಿಲೆ) ಎಂದು ಜನಪ್ರಿಯವಾಗಿ ಪರಿಚಿತರಾಗಿದ್ದಾರೆ.
- ಅವರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಮತ್ತು ಭಾರತ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಪ್ರಮುಖ ಕೊಡುಗೆಗಳು:
- ಅವರು ಮಾನವತಾವಾದಿ ಆಗಿದ್ದರು. ಅವರ ಹಾಡುಗಳು ಸಾಮುದಾಯಿಕ ಸೌಹಾರ್ದತೆ, ಆಶಾವಾದ, ನ್ಯಾಯ, ಪ್ರತಿಭಟನೆಯ ಸಂದೇಶ, ಕ್ರಾಂತಿಕಾರಿ ಉತ್ಸಾಹ ಮತ್ತು ಜನರ ನಡುವೆ ಸಹಾನುಭೂತಿ ಎಂಬ ವಿಷಯಗಳನ್ನು ಉತ್ತೇಜಿಸಿದವು.
- “ಮನುಹೆ ಮನುಹರ್ ಬಾಬೆ”, “ಮೊಯ್ ಎತಿ ಜಾಜಬೋರ್”, “ಬಿಸ್ತಿರ್ಣ ಪರೋರೆ” ನಂತಹ ಅಮರ ಗೀತೆಗಳನ್ನು ರಚಿಸಿದರು. ಇವು ಅಸ್ಸಾಮಿ ಜಾನಪದವನ್ನು ಮಾನವೀಯತೆ, ನ್ಯಾಯ ಮತ್ತು ಸೌಹಾರ್ದತೆಯ ಸಾರ್ವತ್ರಿಕ ಸಂದೇಶಗಳೊಂದಿಗೆ ಬೆರೆಸಿವೆ.
- ಅವರು ಈ ಪ್ರದೇಶದ ಬುಡಕಟ್ಟು ಜನಾಂಗದವರಲ್ಲಿ ಭ್ರಾತೃತ್ವ ಮತ್ತು ಏಕತೆಯ ಭಾವನೆಯನ್ನು ಉತ್ತೇಜಿಸಿದರು.
