Published on: November 1, 2023

ಅಮೃತ ಕಲಶ ಯಾತ್ರೆ

ಅಮೃತ ಕಲಶ ಯಾತ್ರೆ

ಸುದ್ದಿಯಲ್ಲಿ ಏಕಿದೆ? ಅಮೃತ ಕಲಶ ಯಾತ್ರೆ ವಿಶೇಷ ರೈಲಿಗೆ ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಲ್ಲಿ ಚಾಲನೆ ನೀಡಿದರು.

ಮುಖ್ಯಾಂಶಗಳು

ನವದೆಹಲಿಯಲ್ಲಿ ನಡೆದ ‘ಮೇರಿ ಮಾಟಿ ಮೇರಾ ದೇಶ್’ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಅನುಕೂಲವಾಗುವಂತೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿತ್ತು.

ದೇಶಕ್ಕಾಗಿ ತ್ಯಾಗ ಮಾಡಿದ ಜನರಿಗೆ ಗೌರವ ಸಲ್ಲಿಸುವ ಸಂಕೇತವಾಗಿ ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸಲಾಗಿತ್ತು. ರಾಷ್ಟ್ರದ ರಾಜಧಾನಿಯಲ್ಲಿ ನಿರ್ಮಿಸಲಾಗುತ್ತಿರುವ ಅಮೃತ ವಾಟಿಕಾದಲ್ಲಿಈ ಮಣ್ಣು ಬಳಕೆಯಾಗಲಿದೆ. ಅಜಾದಿ ಕಾ ಅಮೃತ್ ಮಹೋತ್ಸವದ ಸ್ಮಾರಕದೊಂದಿಗೆ ಅಮೃತ್ ವಾಟಿಕಾವು ಇರಲಿದೆ.  ‘ಮೇರಿ ಮಾಟಿ ಮೇರಾ ದೇಶ್’ ಅಭಿಯಾನ

ಅಭಿಯಾನವು ಕರ್ತವ್ಯದ ವೇಳೆ ಅತ್ಯುನ್ನತ ತ್ಯಾಗ ಮಾಡಿದ ಸೈನಿಕರಿಗೆ ಗೌರವವಾಗಿದೆ. ಜನರ ಸಹಭಾಗಿತ್ವದ ಉತ್ಸಾಹದಲ್ಲಿ (ಜನ ಭಾಗಿದಾರಿ), ಈ ಅಭಿಯಾನವು ದೇಶದಾದ್ಯಂತ ಪಂಚಾಯತ್, ಗ್ರಾಮ, ಬ್ಲಾಕ್, ನಗರ ಸ್ಥಳೀಯ ಸಂಸ್ಥೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಸಲಾದ ಅನೇಕ ಚಟುವಟಿಕೆಗಳು ಮತ್ತು ಸಮಾರಂಭಗಳನ್ನು ಒಳಗೊಂಡಿದೆ.

ಈ ಘಟನೆಯು ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು ಮಾರ್ಚ್ 12, 2021 ರಂದು ಪ್ರಾರಂಭವಾದ ಎರಡು ವರ್ಷಗಳ ಅಭಿಯಾನದ ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಸಮಾರೋಪವನ್ನು ಸೂಚಿಸುತ್ತದೆ.