Published on: August 30, 2022

ಕರ್ನಾಟಕ ಕಲಾಶ್ರೀ’ ಪ್ರಶಸ್ತಿ

ಕರ್ನಾಟಕ ಕಲಾಶ್ರೀ’ ಪ್ರಶಸ್ತಿ

ಸುದ್ದಿಯಲ್ಲಿ ಏಕಿದೆ?

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2022–23ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಗೌರವ ಪ್ರಶಸ್ತಿ’ಗೆ ಚನ್ನರಾಯಪಟ್ಟಣದ ಗಾಯಕ ಸಿ.ಆರ್. ರಾಮಚಂದ್ರ ಹಾಗೂ ಮಂಗಳೂರಿನ ನೃತ್ಯ ಗುರು ಗೀತಾ ಸರಳಾಯ ಆಯ್ಕೆಯಾಗಿದ್ದಾರೆ.

ಮುಖ್ಯಾಂಶಗಳು

  • ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ ಸೇರಿದಂತೆ ಏಳು ವಿಭಾಗಗಳಿಂದ 16 ಕಲಾವಿದರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿಯು ತಲಾ 50 ಸಾವಿರ ರೂ.ಗಳ ಹಾಗೂ ವಾರ್ಷಿಕ ಪ್ರಶಸ್ತಿ ತಲಾ 25 ಸಾವಿರ ರೂ.ಗಳ ನಗದು ಬಹುಮಾನ ಹೊಂದಿದೆ

ಕರ್ನಾಟಕ ಕಲಾಶ್ರೀ’ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರು

  • ಕರ್ನಾಟಕ ಸಂಗೀತ ಸಿ.ಎ. ನಾಗರಾಜ, ಮೈಸೂರು (ಹಾಡುಗಾರಿಕೆ) 2. ಎಂ. ನಾರಾಯಣ, ಮಂಗಳೂರು (ಹಾಡುಗಾರಿಕೆ) 3. ಪಿ.ಕೆ. ದಾಮೋದರಂ, ಪುತ್ತೂರು (ಸ್ಯಾಕ್ಸೋಫೋನ್)
  • ಹಿಂದೂಸ್ತಾನಿ ಸಂಗೀತ ಎಂ.ಪಿ. ಹೆಗಡೆ ಪಡಿಗೆರೆ, ಶಿರಸಿ (ಗಾಯನ) 2. ಮಹಾದೇವಪ್ಪ ನಿಂಗಪ್ಪ ಹಳ್ಳಿ, ಗದಗ (ಗಾಯನ) 3. ಹನುಮಂತಪ್ಪ ಬ. ತಿಮ್ಮಾಪೂರ, ಹಾವೇರಿ (ವಯಲಿನ್) 4. ಫಯಾಜ್ ಖಾನ್, ಬೆಂಗಳೂರು (ಸಾರಂಗಿ/ಗಾಯನ)
  • ನೃತ್ಯ ರೋಹಿಣಿ ಇಮಾರತಿ, ಧಾರವಾಡ 2. ಪುಷ್ಪ ಕೃಷ್ಣಮೂರ್ತಿ, ಶಿವಮೊಗ್ಗ 3. ಪುರುಷೋತ್ತಮ, ಬೆಂಗಳೂರು
  • ಸುಗಮ ಸಂಗೀತ ಸಿದ್ರಾಮಪ್ಪ ಪೊಲೀಸ್ ಪಾಟೀಲ್, ಕಲಬುರ್ಗಿ 2. ಮಧರಾ ರವಿಕುಮಾರ್, ಬೆಂಗಳೂರು ಕಥಾಕೀರ್ತನ ‌ 1. ಶೀಲಾ ನಾಯ್ಡು, ಬೆಂಗಳೂರು ಗಮಕ 1. ಅನಂತ ನಾರಾಯಣ, ಹೊಸಹಳ್ಳಿ 2. ಚಂದ್ರಶೇಖರ ಕೇದಿಲಾಯ, ಉಡುಪಿ ವಿಶೇಷ ಪ್ರಶಸ್ತಿ 1.ಪ್ರವೀಣ್ ಡಿ. ರಾವ್, ಬೆಂಗಳೂರು (ವಾದಕರು, ಸಂಯೋಜಕರು)