Published on: January 1, 2024

ಕುವೆಂಪು ರಾಷ್ಟ್ರೀಯ ಪುರಸ್ಕಾರ 2023

ಕುವೆಂಪು ರಾಷ್ಟ್ರೀಯ ಪುರಸ್ಕಾರ 2023

ಸುದ್ದಿಯಲ್ಲಿ ಏಕಿದೆ? 2023ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಬಂಗಾಳಿ ಭಾಷೆಯ ಖ್ಯಾತ ಸಾಹಿತಿ ಶೀರ್ಷೆಂಧು ಮುಖ್ಯೋಪಾಧ್ಯಾಯ ಅವರನ್ನು ಆಯ್ಕೆ ಮಾಡಲಾಗಿದೆ.

ಮುಖ್ಯಾಂಶಗಳು

  • ಮುಖ್ಯೋಪಾಧ್ಯಾಯ ಅವರು ಈ ಪ್ರಶಸ್ತಿಯನ್ನು ಪಡೆದ 11 ನೇ ಪುರಸ್ಕೃತರು ಮತ್ತು ಮೊದಲ ಬಂಗಾಳಿ ಬರಹಗಾರರಾದರು.
  • ಬೆಂಗಳೂರಿನಲ್ಲಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಅವರ ಅಧ್ಯಕ್ಷತೆಯಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿಯ ಸಭೆ ನಡೆದಿತ್ತು.

ಶೀರ್ಷೆಂಧು ಮುಖ್ಯೋಪಾಧ್ಯಾಯ

  • ಮುಖ್ಯೋಪಾಧ್ಯಾಯ ಅವರು, ಬ್ರಿಟಿಷ್ ಇಂಡಿಯಾದ (ಪ್ರಸ್ತುತ ಬಾಂಗ್ಲಾದೇಶದ) ಮೈಮೆನ್ಸಿಂಗ್ ಎಂಬಲ್ಲಿ ನವೆಂಬರ್ 9, 1935ರಂದು ಜನಿಸಿದರು.
  • ಭಾರತ ವಿಭಜನೆಯ ಸಂದರ್ಭದಲ್ಲಿ ಅವರ ಕುಟುಂಬ ಕೋಲ್ಕತ್ತಾಗೆ ವಲಸೆ ಬಂದಿತ್ತು. ಅವರ ಬಾಲ್ಯ ಮತ್ತು ಪ್ರಾರಂಭದ ಶಿಕ್ಷಣ ಅವಿಭಜಿತ ಬಂಗಾಳ, ಅಸ್ಸಾಂ ಮತ್ತು ಬಿಹಾರದಲ್ಲಿ ಕಳೆಯಿತು.
  • ದೇಶ್ ಎಂಬ ಬಂಗಾಳಿ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಈಗಲೂ ಆನಂದ ಬಜಾರ್ ಪತ್ರಿಕೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ.
  • 1959ರಲ್ಲಿ ಶೀರ್ಷಂಧು ಅವರ ಮೊದಲ ಕಥೆ ‘ದೇಶ್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
  • ಅವರ ಮೊದಲ ಕಾದಂಬರಿ ಘುಸ್ಪೋಕ 1967ರಲ್ಲಿ ದೇಶ್ ಪತ್ರಿಕೆಯ ‘ಪೂಜಾ’ ವಾರ್ಷಿಕ ಸಂಪುಟದಲ್ಲಿ ಪ್ರಕಟವಾಗಿತ್ತು.
  • ಮೊದಲ ಮಕ್ಕಳ ಪುಸ್ತಕ ಮನೋಜ್‌ದೇರ್‌ ಅದ್ಭುತ್ ಬಾರಿ 1978ರಲ್ಲಿ ಪ್ರಕಟವಾಯಿತು.
  • ಕಥೆ, ಕಾದಂಬರಿ, ಪ್ರವಾಸಕಥನ, ಮಕ್ಕಳ ಪುಸ್ತಕಗಳು ಸೇರಿ ಸುಮಾರು 90 ಕೃತಿಗಳು ಇದುವರೆಗೆ ಪ್ರಕಟವಾಗಿವೆ.

ರಾಷ್ಟ್ರೀಯ ಕುವೆಂಪು ಟ್ರಸ್ಟ್ ಕುರಿತು:

2013 ರಿಂದ ಲೇಖಕರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಈ 2023ರ ಸಂದರ್ಭದಲ್ಲಿ ಈ ಕೆಳಗಿನವುಗಳನ್ನು ಬಿಡುಗಡೆ ಮಾಡಲಾಗಿದೆ:

ಬಿಗಿನರ್ಸ್ ಮ್ಯೂಸ್ ಮತ್ತು ಏಲಿಯನ್ ಹಾರ್ಪ್, ಕುವೆಂಪು ಅವರ ಇಂಗ್ಲಿಷ್ ಕವನಗಳ ಸಂಗ್ರಹ.

ಶಿವಮೊಗ್ಗದ ಅಹರ್ನಿಶಿ ಪ್ರಕಾಶನವು ಮುಖ್ಯೋಪಾಧ್ಯಾಯರ ಸಣ್ಣ ಕಥೆಗಳ ಅನುವಾದವನ್ನು ಸಮೀಪ್ಯ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದೆ.

ಕುವೆಂಪು ರಾಷ್ಟ್ರೀಯ ಪುರಸ್ಕಾರ

ಇದು ರಾಷ್ಟ್ರೀಯ ಪ್ರಶಸ್ತಿಯಾಗಿದ್ದು, ದಿವಂಗತ ಕವಿ ಕುವೆಂಪು ಅವರ ಸ್ಮರಣಾರ್ಥ ವಾರ್ಷಿಕವಾಗಿ ನೀಡಲಾಗುತ್ತದೆ.

ಭಾರತೀಯ ಸಂವಿಧಾನದಿಂದ ಗುರುತಿಸಲ್ಪಟ್ಟ ಯಾವುದೇ ಭಾಷೆಗಳಲ್ಲಿ ಕೊಡುಗೆ ನೀಡಿದ ಬರಹಗಾರರಿಗೆ ಇದನ್ನು ನೀಡಲಾಗುತ್ತದೆ.

ಇದು ₹5 ಲಕ್ಷ ನಗದು ಪ್ರಶಸ್ತಿ, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಮತ್ತು ಬೆಳ್ಳಿ ಪದಕಗಳನ್ನು ಒಳಗೊಂಡಿರುತ್ತದೆ.

ಕುವೆಂಪು ಕುರಿತು:

ಕನ್ನಡ ಕವಿ: ಕುವೆಂಪು ಎಂದೇ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಭಾರತೀಯ ಕವಿ, ನಾಟಕಕಾರ, ಕಾದಂಬರಿಕಾರ ಮತ್ತು ವಿಮರ್ಶಕರಾಗಿದ್ದರು.

ಅವರು 20 ನೇ ಶತಮಾನದ ಕನ್ನಡದ ಶ್ರೇಷ್ಠ ಕವಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಜನನ: 29 ಡಿಸೆಂಬರ್ 1904

ಕರ್ನಾಟಕ ರಾಜ್ಯ ಗೀತೆಯ ಲೇಖಕ: ಅವರು ಕರ್ನಾಟಕ ರಾಜ್ಯ ಗೀತೆ “ಜಯ ಭಾರತ ಜನನಿಯ ತನುಜಾತೆ” ಅನ್ನು ಬರೆದಿದ್ದಾರೆ.

ಸಾಧನೆಗಳು:

ಜ್ಞಾನಪೀಠ ಪ್ರಶಸ್ತಿ: 1967 ರಲ್ಲಿ, ಅವರು ತಮ್ಮ ರಾಮಾಯಣದ ಆವೃತ್ತಿಯಾದ ‘ಶ್ರೀ ರಾಮಾಯಣ ದರ್ಶನಂ’ ಗಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡ ಬರಹಗಾರರಾದರು.

ರಾಷ್ಟ್ರಕವಿ: 1964 ರಲ್ಲಿ, ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗಾಗಿ, ಕರ್ನಾಟಕ ಸರ್ಕಾರವು ಅವರಿಗೆ ಗೌರವಾನ್ವಿತ ರಾಷ್ಟ್ರಕವಿ ಪ್ರಬಿರುದನ್ನು ನೀಡಿ ಗೌರವಿಸಿತು.

ಕರ್ನಾಟಕ ರತ್ನ: 1992 ರಲ್ಲಿ, ಅವರು ಕರ್ನಾಟಕ ರತ್ನ ಗೌರವವನ್ನು ಪಡೆದರು.

ಪದ್ಮವಿಭೂಷಣ: 1988 ರಲ್ಲಿ, ಅವರಿಗೆ ಭಾರತ ಸರ್ಕಾರದಿಂದ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ: 1955 ರಲ್ಲಿ, ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.

ನಿಮಗಿದು ತಿಳಿದಿರಲಿ

ರಾಷ್ಟ್ರಕವಿ, ವಿಶ್ವ ಮಾನವ ತಣ್ತೀದ ಹರಿಕಾರ ಕುವೆಂಪು ಅವರ ಜನುಮ ದಿನ. 20ನೇ ಶತಮಾನದಲ್ಲಿ ಅವರು ಬೋಧಿಸಿದ ವಿಶ್ವ ಮಾನ ತಣ್ತೀವನ್ನು ಗೌರವಿಸುವ ಸಲುವಾಗಿ ಪ್ರತೀ ವರ್ಷ ಅವರ ಜನ್ಮ ದಿನವಾದ ಡಿಸೆಂಬರ್ 29 ಅನ್ನು ವಿಶ್ವ ಮಾನವ ದಿನ ಎಂದು ಆಚರಿಸಲಾಗುತ್ತದೆ.