Published on: April 28, 2023

ಚುಟುಕು ಸಂಚಾರ : 27 ಏಪ್ರಿಲ್ 2023

ಚುಟುಕು ಸಂಚಾರ : 27 ಏಪ್ರಿಲ್ 2023

  • ಐತಿಹಾಸಿಕ ಕೇಶವಾನಂದ ಭಾರತಿ ಪ್ರಕರಣಕ್ಕೆ ಸಂಬಂಧಿಸಿದ ವಾದ, ಲಿಖಿತ ರೂಪದ ಹೇಳಿಕೆಗಳು ಮತ್ತು ತೀರ್ಪಿನ ಕುರಿತು ಮಾಹಿತಿ ಒಳಗೊಂಡಿರುವ ವೆಬ್ಪೇಜ್ ಅನ್ನು ಸಂಶೋಧಕರು ಸೇರಿ ದೇಶದ ಜನರಿಗೆ ಸುಪ್ರೀಂ ಕೋರ್ಟ್ ಅರ್ಪಿಸಿತು.1973ರ ಏಪ್ರಿಲ್ 24ರಂ ದು ಈ ಪ್ರಕರಣದ ತೀರ್ಪು ಪ್ರಕಟಿಸಲಾಗಿತ್ತು. ಈ ತೀರ್ಪು ಹೊರಬಿದ್ದು 50 ವರ್ಷ ಗಳು ತುಂಬಿದ ಸಂದರ್ಭದಲ್ಲಿ ವೆಬ್ಪೇಜ್ ಅನ್ನು ಅರ್ಪಿಸಲಾಗಿದೆ.
  • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇರಳ ರಾಜ್ಯದಲ್ಲಿ ತಿರುವನಂತಪುರಂ ಹಾಗೂ ಕಾಸರಗೋಡು ನಡುವೆ ಸಂಚರಿಸುವ ಮೊದಲ ವಂದೇ ಭಾರತ್ ರೈಲಿಗೆ ಮತ್ತು ದೇಶದ ಮೊದಲ ವಾಟರ್ ಮೆಟ್ರೋಗೆ ಚಾಲನೆ ನೀಡಿದರು.
  • ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಮೊದಲ ಚಲನಚಿತ್ರ ‘ದಿ ಚಾಲೆಂಜ್’ ರಷ್ಯಾದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತು.
  • ಭಾರತದ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ಆಸ್ಟ್ರೇಲಿಯಾವನ್ನು ಸ್ವೀಕರಿಸಿದರು.