Published on: February 13, 2024

ಚುಟುಕು ಸಮಾಚಾರ : 13 ಫೆಬ್ರವರಿ 2024

ಚುಟುಕು ಸಮಾಚಾರ : 13 ಫೆಬ್ರವರಿ 2024

  • ಕೇರಳದ ನಿಲಂಬೂರಿನಿಂದ ಕರ್ನಾಟಕದ ನಂಜನಗೂಡಿಗೆ ಸಂಪರ್ಕ ಕಲ್ಪಿಸಲು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ ರೈಲು ಮಾರ್ಗದ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ. ಗೋಲ್ಡನ್ ಐಟಿ ಕಾರಿಡಾರ್: ಇದು ಕೇರಳದ ನಿಲಂಬೂರ್ನಿಂದ ಕರ್ನಾಟಕದ ನಂಜನಗೂಡಿಗೆ ಸಂಪರ್ಕಿಸುವ 236 ಕಿಮೀ ಬ್ರಾಡ್-ಗೇಜ್ ರೈಲು ಮಾರ್ಗವಾಗಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ 19.7 ಕಿಲೋಮೀಟರ್ ಹಾಡು ಹೋಗುತ್ತದೆ.
  • ಇತ್ತೀಚಿಗೆ, ಶ್ರೀಲಂಕಾ ಮತ್ತು ಮಾರಿಷಸ್ನಲ್ಲಿ ಭಾರತದ UPI ಸೇವೆಗಳು ಮತ್ತು ಮಾರಿಷಸ್ನಲ್ಲಿ RuPay ಕಾರ್ಡ್ ಸೇವೆಗಳನ್ನು ಪ್ರಾರಂಭಿಸಲಾಯಿತು. UPI ಸೇವೆಗಳನ್ನು ಸ್ವೀಕರಿಸಿದ ದೇಶಗಳು: ಭೂತಾನ್ (1 ನೇ ದೇಶ), UAE (1 ನೇ ಗಲ್ಫ್ ದೇಶ), ಸಿಂಗಾಪುರ್, ನೇಪಾಳ, ಓಮನ್, ಫ್ರಾನ್ಸ್ (1 ನೇ ಯುರೋಪಿಯನ್ ದೇಶ), ಶ್ರೀಲಂಕಾ, ಮಾರಿಷಸ್. ರುಪೇ ಕಾರ್ಡ್ ಸೇವೆಗಳನ್ನು ಸ್ವೀಕರಿಸಿದ ದೇಶಗಳು: ಭೂತಾನ್, ಸಿಂಗಾಪುರ, ಯುಎಇ, ನೇಪಾಳ, ಮಾರಿಷಸ್
  • ಇತ್ತೀಚೆಗೆ, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರು(ಸೂದ್ ಅಜಯ್) “ಮಹಿಳೆಯರಿಗೆ ವಿಜ್ಞಾನ-ತಂತ್ರಜ್ಞಾನ ಮತ್ತು ನಾವೀನ್ಯತೆ (SWATI)” ಪೋರ್ಟಲ್ ಅನ್ನು ಪ್ರಾರಂಭಿಸಿದರು. ಫೆಬ್ರವರಿ 11 ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಮಹಿಳೆಯರು ಮತ್ತು ಹುಡುಗಿಯರ ವಿಜ್ಞಾನ ದಿನದಂದು ಪೋರ್ಟಲ್ ಅನ್ನು ಪ್ರಾರಂಭಿಸಲಾಯಿತು. ಅಭಿವೃದ್ಧಿಪಡಿಸಿದವರು: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಂಟ್ ಜೀನೋಮ್ ರಿಸರ್ಚ್ (NIPGR), ನವದೆಹಲಿ
  • 2024 ರಲ್ಲಿ ಈ ಕೆಳಗಿನ ಐದು ಗಣ್ಯ ವ್ಯಕ್ತಿಗಳಾದ ಕರ್ಪೂರಿ ಠಾಕೂರ್, ಲಾಲ್ ಕೃಷ್ಣ ಅಡ್ವಾಣಿ, ಪಿ ವಿ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಮತ್ತು  ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ  ರತ್ನ ನೀಡಲಾಗುವುದು ಎಂದು ಭಾರತ ಸರ್ಕಾರ ಘೋಷಿಸಿದೆ.