Published on: December 30, 2023

ಚುಟುಕು ಸಮಾಚಾರ : 30 ಡಿಸೆಂಬರ್ 2023

ಚುಟುಕು ಸಮಾಚಾರ : 30 ಡಿಸೆಂಬರ್ 2023

  • ಭಾರತೀಯ ಹವಾಮಾನ ಇಲಾಖೆ (IMD) ಇತ್ತೀಚೆಗೆ ದೇಶಕ್ಕೆ ಹವಾಮಾನ ಮತ್ತು ಹವಾಮಾನ ಸೇವೆಗಳನ್ನು ಒದಗಿಸುವ ತನ್ನ 150 ನೇ ವರ್ಷವನ್ನು ಪ್ರಾರಂಭಿಸುವ ಮೊದಲು ಹೊಸ ಲೋಗೋವನ್ನು ಪಡೆದುಕೊಂಡಿದೆ.
  • ‘ಪ್ರಸಕ್ತ ವರ್ಷದಲ್ಲಿ 18 ಲಕ್ಷ ಭಾರತೀಯ ಮುಸ್ಲಿಮರು ಪವಿತ್ರ ಮೆಕ್ಕಾ ಯಾತ್ರೆ ಕೈಗೊಂಡಿದ್ದು, ಇದು ಜಾಗತಿಕ ಮಟ್ಟದಲ್ಲೇ 3ನೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ’ ಎಂದು ಸೌದಿ ಅರೇಬಿಯಾ ಸರ್ಕಾರದ ಹೇಳಿದೆ. ಉಮ್ರಾ (ಮೆಕ್ಕಾ ಯಾತ್ರೆ) ವರ್ಷದ ಯಾವುದೇ ಸಮಯದಲ್ಲಿ ಕೈಗೊಳ್ಳಬಹುದಾಗಿದೆ. ಸೌದಿ ಅರೇಬಿಯಾದ ಹಜ್ ಹಾಗೂ ಉಮ್ರಾದ ಸಚಿವರು ಡಿಸೆಂಬರ್ 4ರಂದು ಭಾರತಕ್ಕೆ ಭೇಟಿ ನೀಡಿದ್ದರು. ಏಕೀಕೃತ ಸರ್ಕಾರಿ ವೇದಿಕೆ ಆಯೋಜಿಸಿದ್ದ ‘ನುಸುಕ್‘(ಉಮ್ರಾ ಮತ್ತು ಪ್ರವಾದಿ ಅವರ ಮಸೀದಿಗೆ ಭೇಟಿ ನೀಡುವವರ ಅನುಕೂಲಕ್ಕಾಗಿ ಎಲೆಕ್ಟ್ರಾನಿಕ್ ವೀಸಾ ಮತ್ತು ಸ್ವಯಂಚಾಲಿತ ಪ್ರವೇಶ ಸೌಲಭ್ಯ) ನಲ್ಲಿ ಅವರು ಪಾಲ್ಗೊಂಡಿದ್ದರು.
  • ಸೈಲೆಂಟ್ ಏರ್ಪೋರ್ಟ್ ಉಪಕ್ರಮ: ಕೇರಳ ರಾಜಧಾನಿ ತಿರುವನಂತಪುರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು(ಟಿಐಎಎಲ್) ಜನವರಿ 1ರಿಂದ ಸೈಲೆಂಟ್ ಏರ್ಪೋರ್ಟ್ ಆಗಿ ಬದಲಾಗಲಿದೆ. ಪ್ರಯಾಣಿಕರಿಗೆ ಶಬ್ಧರಹಿತ ಮತ್ತು ಶಾಂತಿಯುತ ಪ್ರಯಾಣದ ಅನುಭವ ನೀಡಲಾಗುವುದು ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
  • ಸೈಲೆಂಟ್ ಏರ್ಪೋರ್ಟ್ ಉಪಕ್ರಮದ ಉದ್ದೇಶವು ಪ್ರಯಾಣಿಕರು ತಮ್ಮ ಕಾಯುವಿಕೆ ಸಮಯವನ್ನು ತೊಂದರೆಯಿಲ್ಲದೆ ತಮ್ಮ ನೆಚ್ಚಿನ ಚಟುವಟಿಕೆಗಳನ್ನು ಮಾಡುತ್ತಾ ಆನಂದಿಸುವ ಮೂಲಕ ವಿಶ್ರಾಂತಿ ಪಡೆಯುವುದನ್ನು ಖಚಿತಪಡಿಸುವುದಾಗಿದೆ. ಟರ್ಮಿನಲ್ -1 ಮತ್ತು ಟರ್ಮಿನಲ್ -2ರಲ್ಲಿ ಎಲ್ಲ ವಿಮಾನಗಳ
  • ಮಾಹಿತಿಯನ್ನು ಪ್ರದರ್ಶನ ಪರದೆಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಗೇಟ್ ಮತ್ತು ಇನ್ಲೈನ್ ಬ್ಯಾಗೇಜ್ ಸ್ಕ್ರೀನಿಂಗ್ ಸಿಸ್ಟಮ್ನಲ್ಲಿ ಬದಲಾವಣೆಗೆ ಸಂಬಂಧಿಸಿದ ಪ್ರಕಟಣೆಗಳನ್ನು ಮಾತ್ರ ಮೈಕ್ ಮೂಲಕ ಘೋಷಣೆ ಮಾಡಲಾಗುವುದು. ತುರ್ತು ಮತ್ತು ಭದ್ರತೆಗೆ ಸಂಬಂಧಿಸಿದ ಪ್ರಕಟಣೆಗಳ ಅಗತ್ಯತೆಗಳಿಗೆ ಅನುಗುಣವಾಗಿ ಘೋಷಣೆ ಮಾಡಲಾಗುತ್ತದೆ.
  • ಗಾಂಧಿ ಪೀಡಿಯಾ: ಮಹಾತ್ಮಾ ಗಾಂಧೀಜಿಯವರ ಜೀವನ, ತತ್ವ ಮತ್ತು ಬೋಧನೆಗಳ ಕುರಿತ ಎಐ ಆಧರಿತ ಭಂಡಾರವಾದ ‘ಗಾಂಧಿ ಪೀಡಿಯಾ’ ವೆಬ್ ಪೋರ್ಟಲ್ ಅನ್ನು ಅನಾವರಣಗೊಳಿಸಿದರು. ಈ ಸಂವಾದಾತ್ಮಕ ವೆಬ್ ಪೋರ್ಟಲ್, ಬಳಕೆದಾರರಿಗೆ ಸುಲಭ ಪ್ರವೇಶವನ್ನು ಖಚಿತಪಡಿಸುತ್ತದೆ. ‘ಗಾಂಧೀ ಪೀಡಿಯಾ’ವು ಯುವಜನತೆ ಮತ್ತು ಸಮಾಜವನ್ನು ಗಾಂಧಿ ಮೌಲ್ಯಗಳ ಬಗ್ಗೆ ಜಾಗೃತಗೊಳಿಸುತ್ತದೆ ಗಾಂಧೀಜಿಯವರ ಬರಹಗಳ ಕುರಿತಾದ ಏಳು ಪ್ರಮುಖ ಪಠ್ಯಗಳು, ನೆಟ್ವರ್ಕ್ ಮ್ಯಾಪಿಂಗ್ ಪಾತ್ರಗಳು ಮತ್ತು ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ. ‘ಗಾಂಧಿ ಪೀಡಿಯಾ’ ಬಳಕೆದಾರರಿಗೆ ನಿರ್ದಿಷ್ಟ ಮಾಹಿತಿಯನ್ನು ಸೆಕೆಂಡುಗಳಲ್ಲಿ ಪಡೆಯಲು ಅನುಮತಿಸುತ್ತದೆ. 100 ಸಂಪುಟದ ಸಂಗ್ರಹದಲ್ಲಿ ಪ್ರಮುಖ ಪಠ್ಯಗಳು, ಪ್ರಮುಖ ವ್ಯಕ್ತಿಗಳು ಮತ್ತು ಐತಿಹಾಸಿಕವಾಗಿ ಮಹತ್ವದ ವ್ಯಕ್ತಿಗಳು ಮತ್ತು ಗಾಂಧಿಯವರ ಜೀವನವನ್ನು ರೂಪಿಸಿದ ಸ್ಥಳಗಳು, ಪತ್ರಗಳನ್ನು ಪ್ರದರ್ಶಿಸುವ ನ್ಯಾವಿಗೇಷನ್ ವೈಶಿಷ್ಟ್ಯಗಳನ್ನು ಇದು ಹೊಂ ದಿದೆ. ಗಾಂಧೀಜಿ ನಡೆದು ಬಂದ ಹಾದಿ ಕುರಿತ ‘ವರ್ಚುವಲ್ ಪ್ರದರ್ಶನ’, ಫೋಟೊ ಮತ್ತು ವಿಡಿಯೊಗಳು ಹಾಗೂ ‘ಲಾಸ್ಟ್ ಜರ್ನಿ ‘ಯಲ್ಲಿ ರಾಷ್ಟ್ರಪಿತನ ಕುರಿತು ಶಕ್ತಿಯುತ ದೃಶ್ಯ ನಿರೂಪಣೆಗಳನ್ನು ಕಾಣಬಹುದಾಗಿದೆ. ಈ ಯೋಜನೆಯನ್ನು 2019ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ಘೋಷಿಸಿದ್ದರು.
  • ‘ಭಾರತ್ ಜಿಪಿಟಿ’: ಭಾರತ್ ಜಿಪಿಟಿ ಅಭಿವೃದ್ಧಿ ಸಂಬಂಧ ಐಐಟಿ–ಬಾಂಬೆ ಜೊತೆಗೆ ರಿಲಯನ್ಸ್ ಜಿಯೋ ಸಂಸ್ಥೆಯು ಜೊತೆಯಾಗಿ ಕೆಲಸ ನಿರ್ವಹಿಸಲಿದೆ. ಅಲ್ಲದೇ, ಜಿಯೋ ಇನ್ಫೋಕಾಮ್ನಿಂದ ಟಿ.ವಿಗಾಗಿ ಆಪರೇಟಿವ್ ಸಿಸ್ಟಂ ಅಭಿವೃದ್ಧಿಪಡಿಸುವುದಕ್ಕೂ ಚಿಂತಿಸಲಾಗುತ್ತಿದೆ ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆಯು ಪರಿವರ್ತನೆ ತರುತ್ತಿದೆ. ಇದಕ್ಕೆ ಸಂಬಂಧಿಸಿದ ಅಪ್ಲಿಕೇಷನ್ಗಳ ಅಭಿವೃದ್ಧಿಗೆ ಕಂಪನಿ ಮುಂದಾಗಿದೆ.
  • ರೇಡಿಯೊ ಮತ್ತು ಟೆಲಿವಿಷನ್ ಪ್ರಸಾರ ಕ್ಷೇತ್ರದಲ್ಲಿನ ಸಹಕಾರವನ್ನು ಇನ್ನಷ್ಟು ವೃದ್ಧಿಸುವ ನಿಟ್ಟಿನಲ್ಲಿ ‘ಪ್ರಸಾರ ಭಾರತಿ’ಯು ಮಲೇಷ್ಯಾದ ಸರ್ಕಾರಿ ಸ್ವಾಮ್ಯದ ‘ರೇಡಿಯೊ ಟೆಲಿವಿಷನ್ ಮಲೇಷ್ಯಾ’ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪ್ರಸಾರ, ಸುದ್ದಿಗಳು ಹಾಗೂ ಧ್ವನಿ ಮತ್ತು ದೃಶ್ಯ ಕಾರ್ಯ ಕ್ರಮಗಳ ವಿನಿಮಯ ಮತ್ತು ಈ ಕ್ಷೇತ್ರದಲ್ಲಿನ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ನವೆಂಬರ್ ನಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ‘ಪ್ರಸಾರ ಭಾರತಿಯು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶ ಹಾಗೂ ವಿದೇಶಗಳಲ್ಲಿ ಎಲ್ಲರಿಗೂ ಅರ್ಥ ಪೂರ್ಣ ಮತ್ತು ನಿಖರ ಮಾಹಿತಿ ಒದಗಿಸುವುದರತ್ತ ಗಮನ ಹರಿಸಿದೆ’. ಪ್ರಸಾರ ಭಾರತಿಯು ಒಟ್ಟು 46 ರಾಷ್ಟ್ರಗಳ ಜತೆ ಇಂತಹ ಒಪ್ಪಂದ ಮಾಡಿಕೊಂಡಿದೆ.
  • ಆಕ್ಲೆಂಡ್ನಲ್ಲಿ ಕಾನ್ಸುಲೇಟ್ ಕಚೇರಿ: ನ್ಯೂಜಿಲೆಂಡ್ನ ಆಕ್ಲೆಂಡ್ನಲ್ಲಿ ಭಾರತವು ಶೀಘ್ರವೇ ಕಾನ್ಸುಲೇಟ್ ಜನರಲ್ ಕಚೇರಿ ಆರಂಭಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಈ ಕಚೇರಿಯು ವರ್ಷದೊಳಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಕಾನ್ಸುಲೇಟ್ ಜನರಲ್ ಆಗಿ ಭಾರತೀಯ ವಿದೇಶಾಂಗ ಸೇವೆಯ (ಐಎಫ್ಎಸ್) ಅಧಿಕಾರಿಯನ್ನು ಸಾಮಾನ್ಯವಾಗಿ ನೇಮಿಸಲಾಗುತ್ತದೆ.
  • ದೇಶದ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಇರುವ ವಿಮಾನ ನಿಲ್ದಾಣಗಳಿಗೆ ಭದ್ರತೆ ಒದಗಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ(CISF)ಗೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಮುಖ್ಯಸ್ಥೆಯಾಗಿ ಆಗಮಿಸಿದ್ದು, ರಾಜಸ್ಥಾನ ಕೆಡರ್‌ನ 1989 ಬ್ಯಾಚಿನ ಐಪಿಎಸ್ ಅಧಿಕಾರಿ ನೀನಾ ಸಿಂಗ್ ಅವರು ಸಿಐಎಸ್‌ಎಫ್‌ನ ಪ್ರಧಾನ ನಿರ್ದೇಶಕಿಯಾಗಿ ನೇಮಕವಾಗಿದ್ದಾರೆ. ಮುಂದಿನ ವರ್ಷ ಜುಲೈ 31ರಂದು ಅವರು ನಿವೃತ್ತರಾಗಲಿದ್ದು, ಅಲ್ಲಿಯವರೆಗೆ ಅವರೂ ಸಿಐಎಸ್‌ಎಫ್ ಡಿಜಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
  • ವಲಸೆ ಪ್ರಕ್ರಿಯೆ ಒಪ್ಪಂದ: ಇಟಲಿಯೊಂದಿಗೆ ವಲಸೆ ಪ್ರಕ್ರಿಯೆ ಒಪ್ಪಂದಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಮತ್ತು ಇಟಲಿಯ ವಿದೇಶಾಂಗ ಸಚಿವ ಸಹಿಮಾಡಿದ್ದು ಇದಕ್ಕೆ ಕೂಟ ಒಪ್ಪಿಗೆ ನೀಡಲಾಯಿತು. ಭಾರತದ ವಿದ್ಯಾರ್ಥಿಗಳು ಇಟಲಿಯಲ್ಲಿ ವಿದ್ಯಾಭ್ಯಾಸ ಮುಗಿದ ಬಳಿಕ ಒಂದು ವರ್ಷದವರೆಗೆ ನೆಲೆಸಿ ವೃತ್ತಿಪರ ಅನುಭವವನ್ನು ಪಡೆಯಲು ಈ ಒಪ್ಪಂದ ಅನುವು ಮಾಡಿಕೊಡುತ್ತದೆ.