Published on: June 9, 2023

ಚುಟುಕು ಸಮಾಚಾರ : 7 ಜೂನ್ 2023

ಚುಟುಕು ಸಮಾಚಾರ : 7 ಜೂನ್ 2023

  • ಪರಿಸರ ರಕ್ಷಣೆಯಲ್ಲಿ ಹಾಗೂ ವನ್ಯ ಜೀವಿ ಸಂಕುಲದ ಏರಿಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಈಗ ಕರಾವಳಿ ಪ್ರದೇಶದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಿರುವ ಮೊದಲ ರಾಜ್ಯವಾಗಿದ್ದು, ಇದಕ್ಕಾಗಿ ಕೆ-ಶೋರ್ (Karnataka – Surface Sustainable Harvest of Ocean Resources) ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಇದನ್ನು ನೀಲಿ-ಪ್ಲಾಸ್ಟಿಕ್ ಯೋಜನೆ ಎಂದೂ ಹೇಳಲಾಗುತ್ತದೆ.
  • ಒಡಿಶಾದಲ್ಲಿ ನಡೆದಿರುವ ರೈಲು ದುರ್ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಇಂಥ ಅಪಘಾತಗಳ ತಡೆಗೆ ಕವಚ್ ತಂತ್ರಜ್ಞಾನವನ್ನು ಪ್ರತಿ ರೈಲುಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಇದು ಒಂದು ಸ್ವದೇಶಿ ತಂತ್ರಜ್ಞಾನವಾಗಿದೆ. ರೈಲ್ವೆ ಇಲಾಖೆಯ ರಿಸರ್ಚ್ ಡಿಸೈನ್ ಆ್ಯಂಡ್ ಸ್ಟಾಂಡರ್ಡ್ ಆರ್ಗನೈಸೇಷನ್ (ಆರ್ ಡಿಎಸ್ಒ) ಸಂಸ್ಥೆ ಇದನ್ನು ತಯಾರಿಸಿದೆ. ಇದನ್ನು ಪರೀಕ್ಷಿಸುವ ಹೊಣೆಗಾರಿಕೆಯನ್ನು ದಕ್ಷಿಣ ಕೇಂದ್ರ ರೈಲ್ವೆ ವಿಭಾಗಕ್ಕೆ ವಹಿಸಲಾಗಿದೆ.
  • ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರಾಮಾಯಣ ಸರ್ಕ್ಯೂಟ್ ಯೋಜನೆಗಳ ಕೆಲಸವನ್ನು ವೇಗಗೊಳಿಸುವುದಾಗಿ ಘೋಷಿಸಿದರು. ನೇಪಾಳದ ರಾಮಾಯಣ ಸರ್ಕ್ಯೂಟ್ ಯೋಜನೆಯು ಭಾರತದಲ್ಲಿ ಪ್ರಸ್ತಾಪಿಸಲಾದ ಯೋಜನೆಯ ಮುಂದಿನ ಹಂತವಾಗಿದೆ, ಇದರ ಅಡಿಯಲ್ಲಿ ನೇಪಾಳದ ಜನಕ್ಪುರವನ್ನು ಅಯೋಧ್ಯೆಗೆ ಸಂಪರ್ಕಿಸುವ ಯೋಜನೆಯಾಗಿದೆ, ಒಟ್ಟಾರೆ ರಾಮಾಯಣ ಸರ್ಕ್ಯೂಟ್ ಯೋಜನೆಯನ್ನು  ನೇಪಾಳದಲ್ಲಿ 2 ಮತ್ತು ಭಾರತದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು 9 ರಾಜ್ಯಗಳಲ್ಲಿ 15 ಸ್ಥಳಗಳನ್ನು ಗುರುತಿಸಿದೆ. ಶ್ರೀರಾಮನು  ಓಡಾಡಿದ ಪ್ರದೇಶಗಳಿವು.
  • ಕೇಂದ್ರದ ಜಲ್ ಶಕ್ತಿ (ಸಂಪನ್ಮೂಲ) ಸಚಿವರು ಇತ್ತೀಚೆಗೆ ಭಾರತದಲ್ಲಿ ಜೈವಿಕ ಅನಿಲ ವಲಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಉಪಕ್ರಮವಾದ ‘ಗೋಬರ್ಧನ್’ ಗಾಗಿ ಏಕೀಕೃತ ನೋಂದಣಿ ಪೋರ್ಟಲ್ ಅನ್ನು ಅನಾವರಣಗೊಳಿಸಿದರು.