Published on: June 7, 2022

‘ಪರ್ಣಕುಟಿ’

‘ಪರ್ಣಕುಟಿ’

ಸುದ್ಧಿಯಲ್ಲಿಏಕಿದೆ?

ಆಧುನಿಕ ವೈದ್ಯಪದ್ಧತಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಆಯುರ್ವೇದ ದತ್ತ ಹೊರಳಲು ಪ್ರಯತ್ನಿಸುತ್ತಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಕೆಎಸ್‌ಆರ್‌ಡಿಪಿಆರ್) ವಿಶ್ವವಿದ್ಯಾನಿಲಯವು ಆಯುರ್ವೇದದ ಪ್ರಯೋಜನಗಳ ಕುರಿತು ಅರಿವು ಮೂಡಿಸಲು ಕಪ್ಪತಗುಡ್ಡದ ಆಯುರ್ವೇದ ಸಸ್ಯಗಳಾಧಾರಿತ ಚಿಕಿತ್ಸೆ ನೀಡುವ ಪರ್ಣಕುಟಿಯನ್ನು ನಿರ್ಮಿಸಿದೆ. 

ಮುಖ್ಯಾಂಶಗಳು

  • ಗ್ರಾಮೀಣ ಭಾಗದಲ್ಲಿ ಅರಳಿಕಟ್ಟೆಯಲ್ಲಿ ಔಷಧಿ ಪಡೆಯಲು ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಅತ್ಯಂತ ಪುರಾತನ ವೈದ್ಯಕೀಯ ಪದ್ಧತಿಯ ಇತಿಹಾಸದಿಂದ ಸ್ಫೂರ್ತಿ ಪಡೆದ ವಿಶ್ವವಿದ್ಯಾನಿಲಯವು 18×18 ಚದರ ಅಡಿ ವಿಸ್ತೀರ್ಣದಲ್ಲಿ 4 ಲಕ್ಷ ವೆಚ್ಚದಲ್ಲಿ ಬಿದಿರು ಮತ್ತು ನೀಲಗಿರಿ ಮರಗಳಿಂದ ಪರ್ಣಕುಟಿಯನ್ನು ನಿರ್ಮಿಸಲು ನಿರ್ಧರಿಸಿತು. ಇದೀಗ ಅರಳಿಕಟ್ಟೆ ಕೂಡ ಅಂತಿಮ ಹಂತದಲ್ಲಿದೆ.
  • ಸ್ಮೃತಿ ವನವು ಕಪ್ಪತಗುಡ್ಡದಿಂದ 150 ಕ್ಕೂ ಹೆಚ್ಚು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ಹೊಂದಿದೆ.

ಉದ್ದೇಶ

ನಮ್ಮ ಪೂರ್ವಜರು ಸ್ಥಳೀಯವಾಗಿ ಲಭ್ಯವಿರುವ ಸಸ್ಯಗಳಿಂದ ಔಷಧಿಗಳನ್ನು ಹೇಗೆ ತಯಾರಿಸುತ್ತಿದ್ದರು ಎಂಬುದನ್ನು ವಿದ್ಯಾರ್ಥಿಗಳು ತಿಳಿದಿರಬೇಕು.ಹೀಗಾಗಿ ಕಪ್ಪತಗುಡ್ಡದ ಆಯುರ್ವೇದ ಸಸ್ಯಗಳಾಧಾರಿತ ಚಿಕಿತ್ಸೆ ನೀಡುವ ಪರ್ಣಕುಟಿಯನ್ನು ನಿರ್ಮಿಸಲಾಗಿದೆ.