Published on: November 18, 2021

ವಾರಣಾಸಿಗೆ ಇನ್ಮುಂದೆ ಕರ್ನಾಟಕದಿಂದ ರೇಷ್ಮೆ

ವಾರಣಾಸಿಗೆ ಇನ್ಮುಂದೆ ಕರ್ನಾಟಕದಿಂದ ರೇಷ್ಮೆ

ಸುದ್ಧಿಯಲ್ಲಿ ಏಕಿದೆ ? ಉತ್ತರ ಪ್ರದೇಶದ ವಾರಣಾಸಿಗೆ ರೇಷ್ಮೆ ಪೂರೈಕೆ ಮಾಡಲು ಕರ್ನಾಟಕ ಮುಂದಾಗಿದೆ.‌ ಈ ಕುರಿತಾಗಿ ಉತ್ತರ ಪ್ರದೇಶ ರೇಷ್ಮೆ ಸಚಿವರ ಜೊತೆ ಸಚಿವ ಡಾ.ಕೆ.ಸಿ. ನಾರಾಯಣಗೌಡ ಅವರ ನೇತೃತ್ವದ ನಿಯೋಗದ ಸಭೆ ನಡೆಸಲಿದೆ. ಈ ಸಂಬಂಧ ಸಚಿವ ನಾರಾಯಣಗೌಡ ನೇತೃತ್ವದ ನಿಯೋಗ ವಾರಣಾಸಿಗೆ ತೆರಳಲಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಉತ್ತಮ ಗುಣಮಟ್ಟದ ರೇಷ್ಮೆ ಬೆಳೆಯಲಾಗುತ್ತಿದ್ದು, ಕರ್ನಾಟಕ ರಾಜ್ಯ ರೇಷ್ಮೆ ಉತ್ಪಾದನೆಯಲ್ಲಿ ವಿಶ್ವವಿಖ್ಯಾತಿ ಪಡೆದಿದೆ. ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೆ, ಬನಾರಸ್ ಸೀರೆಗಳ ನೇಯ್ಗೆಗೆ ವಾರಣಾಸಿ ಹೆಸರುವಾಸಿಯಾಗಿದೆ. ಹಾಗಾಗಿ, ವಾರಣಾಸಿಗೆ ಕರ್ನಾಟಕ ರೇಷ್ಮೆ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಇದೀಗ ಚಿಂತನೆ ನಡೆದಿದೆ.
  • ಕರ್ನಾಟಕದ ರೇಷ್ಮೆಗೂ ವಾರಣಾಸಿ ನೇಕಾರರಿಗೂ ಅವಿನಾಭಾವ ಸಂಬಂಧವಿದೆ. ವಾರಣಾಸಿಗೆ ಕರ್ನಾಟಕ ಮತ್ತು ಚೀನಾದಿಂದ ರೇಷ್ಮೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಚೀನಾದ‌ ಅಗ್ಗದ ರೇಷ್ಮೆ ಅಬ್ಬರಕ್ಕೆ ಸಿಲುಕಿ ಕರ್ನಾಟಕದ ರೇಷ್ಮೆ ಖರೀದಿಯಲ್ಲಿ ಕುಂಠಿತವಾಗಿತ್ತು. ಆದರೀಗ ಚೀನಾದಿಂದ ರೇಷ್ಮೆ ಆಮದು ಸ್ಥಗಿತಗೊಳಿಸಿರುವುದರಿಂದ ಮತ್ತೆ ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಪೂರೈಕೆ ಮಾಡಲು ಹಾಗೂ ವಾರಣಾಸಿಗೆ ಸಂಪೂರ್ಣ ರೇಷ್ಮೆಯನ್ನು ಕರ್ನಾಟಕದಿಂದಲೇ ಪೂರೈಸುವ ಸಂಬಂಧ ಉತ್ತರ ಪ್ರದೇಶ ರೇಷ್ಮೆ ಸಚಿವರ ಜೊತೆ ಸಚಿವ ಡಾ. ನಾರಾಯಣಗೌಡ ಅವರು ಚರ್ಚಿಸಲಿದ್ದಾರೆ.