Published on: March 17, 2024

ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ 2023

ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ 2023

ಸುದ್ದಿಯಲ್ಲಿ ಏಕಿದೆ? ಕೇಂದ್ರ ಸಾಹಿತ್ಯ ಅಕಾಡೆಮಿ ವಿವಿಧ ಭಾಷೆಗಳ 24 ಕೃತಿಗಳಿಗೆ ಭಾಷಾಂತರ ಪ್ರಶಸ್ತಿಯನ್ನು ಪ್ರಕಟಿಸಿದೆ. ಭಾಷಾಂತರ ಪ್ರಶಸ್ತಿಗೆ ಕನ್ನಡ ವಿಭಾಗದಲ್ಲಿ ಲೇಖಕ ಕೆ.ಕೆ.ಗಂಗಾಧರನ್ ಅವರ ‘ಮಲಯಾಳಂ ಕಥೆಗಳು’ ಕೃತಿ ಆಯ್ಕೆಯಾಗಿದೆ. ಮಲಯಾಳಂ ಭಾಷೆಯ ವಿವಿಧ ಲೇಖಕರ ಸಣ್ಣ ಕತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಈ ಕೃತಿ ರಚಿಸಿದ್ದಾರೆ. ಲೇಖಕಿ ಸುಧಾಮೂರ್ತಿ ಅವರ ‘ಮಕ್ಕಳಿಗಾಗಿ ನನ್ನ ನೆಚ್ಚಿನ ಕತೆಗಳು’ ಕೃತಿಯನ್ನು ಲೇಖಕಿ ನಾಗರತ್ನ ಹೆಗ್ಡೆ ಅವರು ಸಂಸ್ಕೃತಕ್ಕೆ ಭಾಷಾಂತರಿಸಿದ್ದು, ‘ರುಚಿರಾಹ್ ಬಾಲಕಥಾ’ ಕೃತಿಗೆ ಸಂಸ್ಕೃತ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಸಾಹಿತಿ ಕೋಟ ಶಿವರಾಮ ಕಾರಂತ ಅವರ ‘ಚೋಮನದುಡಿ’ ಕೃತಿಯನ್ನು ಕಾಶ್ಮೀರಿ ಭಾಷೆಗೆ ಗುಲ್ಜಾರ್ ಅಹ್ಮದ್ ರಥೇರ್ ಅವರು ‘ಚೂಮ ಸುಂಡ್ ಡೋಲ್’ ಹೆಸರಿನಲ್ಲಿ ಭಾಷಾಂತರಿಸಿದ್ದು, ಈ ಕೃತಿಗೆ ಕಾಶ್ಮೀರಿ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ.

ಮುಖ್ಯಾಂಶಗಳು

  • ಪ್ರಶಸ್ತಿ: ಒಟ್ಟು ₹ 50 ಸಾವಿರ ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ.
  • ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ವಿಮರ್ಶಕಿ ಎಂ .ಎಸ್.ಆಶಾದೇವಿ, ಕಥೆಗಾರ ಕೇಶವ ಮಳಗಿ ಮತ್ತು ಪ್ರೊ.ಎಸ್.ಸಿರಾಜ್ ಅಹ್ಮದ್ ಇದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿ

  • ಸ್ಥಾಪನೆ: 1954
  • ಪೋಷಕ ಸಂಸ್ಥೆ: ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ
  • ಪ್ರಧಾನ ಕಛೇರಿ: ದೆಹಲಿ
  • ಅಧ್ಯಕ್ಷ: ಮಾಧವ್ ಕೌಶಿಕ್
  • ಮಾನ್ಯತೆ ಪಡೆದ ಭಾಷೆಗಳು: ಭಾರತದ ಸಂವಿಧಾನದಲ್ಲಿರುವ 22 ಭಾಷೆಗಳ ಜೊತೆಗೆ, ಸಾಹಿತ್ಯ ಅಕಾಡೆಮಿ ಇಂಗ್ಲಿಷ್ ಮತ್ತು ರಾಜಸ್ಥಾನಿ ಭಾಷೆಗಳಿಗೆ ಪ್ರಶಸ್ತಿಯನ್ನು ನೀಡುತ್ತದೆ
  • ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು 4 ವಿಭಾಗಗಳಲ್ಲಿ ನೀಡಲಾಗುತ್ತದೆ
  • ಭಾಷಾ ಸಮ್ಮಾನ್ ಪ್ರಶಸ್ತಿ, ಭಾಷಾಂತರ ಪ್ರಶಸ್ತಿ, ಬಾಲ ಸಾಹಿತ್ಯ ಪುರಸ್ಕಾರ, ಯುವ ಪುರಸ್ಕಾರ

2023 ರ ಕನ್ನಡದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು

ಲಕ್ಷ್ಮೀಶ ತೋಳ್ಪಾಡಿ ಪ್ರಬಂಧ ವಿಭಾಗದಲ್ಲಿ ಮಹಾಭಾರತ ಅನುಸಂಧಾನ ಭಾರತಯಾತ್ರೆ ಕೃತಿ

ಯುವ ಪುರಸ್ಕಾರ: ಮಂಜು ನಾಯಕ ಚಳ್ಳೂರ್: ಫೂ ಮತ್ತು ಇತರ ಕಥೆಗಳು (ಸಣ್ಣ ಕಥೆಗಳು ವಿಭಾಗ)

ಬಾಲ ಸಾಹಿತ್ಯ ಪುರಸ್ಕಾರ: ವಿಜಯಶ್ರೀ ಹಾಲಾಡಿ: ಸೂರಕ್ಕಿ ಗೇಟ್ ಕೃತಿ, ಇಂಗ್ಲಿಷ್ ಭಾಷೆಯ ಗ್ರಾಂಡ್ ಪೇರೆಂಟ್ಸ್ ಬ್ಯಾಗ್ ಆಫ್ ಸ್ಟೋರೀಸ್ ಕೃತಿಗೆ ಸುಧಾ ಮೂರ್ತಿ ಅವರಿಗೆ ದೊರಕಿದೆ