Published on: September 10, 2023

ಚುಟುಕು ಸಮಾಚಾರ : 8 ಸೆಪ್ಟೆಂಬರ್ 2023

ಚುಟುಕು ಸಮಾಚಾರ : 8 ಸೆಪ್ಟೆಂಬರ್ 2023

  • ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಅಪರೂಪದ ಶ್ವೇತ ವರ್ಣದ ಕಡವೆ ಕಂಡು ಬಂದಿದೆ. ಈ ಸ್ಥಿತಿಯನ್ನು ಲ್ಯೂಸಿಸ್ಟಿಕ್ ಎಂದು ಗುರುತಿಸಲಾಗಿದೆ. ಪ್ರಾಣಿಗಳ ಚರ್ಮದಲ್ಲಿ ವರ್ಣದ್ರವ್ಯದ ಕೊರತೆ ಉಂಟಾಗಿ, ಚರ್ಮ ಬಿಳಿ ಅಥವಾ ಮಂದ ಬಣ್ಣಕ್ಕೆ ಬದಲಾಗುವ ವಿರಳ ಪ್ರಕ್ರಿಯೆಯನ್ನು ಲ್ಯೂಸಿಸಮ್ ಎಂದು ಕರೆಯಲಾಗುತ್ತದೆ.
  • ಅಕ್ಕಿಗಳ ರಾಜ ಎಂದೇ ಹೆಸರುವಾಸಿಯಾಗಿರುವ ಕೋರಾಪುಟ್ ಜಿಲ್ಲೆಯ ‘ಕಾಲಾ ಜೀರಾ ಅಕ್ಕಿ‘ಗೆ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ನೀಡಿರುವುದರ ಕುರಿತು ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (ಎಂಎಸ್ಎಸ್ಆರ್ಎಫ್) ಆಕ್ಷೇಪ ವ್ಯಕ್ತಡಿಸಿದೆ.
  • ಇತ್ತೀಚೆಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ ಏರ್ ಇಂಡಿಯಾ ಮತ್ತು ಸಿಂಗಪುರ್ ಏರ್ಲೈನ್ಸ್ ವಿಸ್ತಾರ ನಾಗರಿಕ ವಿಮಾನಯಾನ ಸೇವಾ ಸಂಸ್ಥೆಗಳ ವಿಲೀನ ಪ್ರಕ್ರಿಯೆಗೆ ಅನುಮೋದನೆ ನೀಡಿದೆ. ಟಾಟಾ ಆ್ಯಂಡ್ ಸನ್ಸ್ ಪ್ರೈವೇಟ್ ಸಂಸ್ಥೆಯ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಏರ್ ಇಂಡಿಯಾ ಸಂಸ್ಥೆಯು ವಿಸ್ತಾರ ವಿಮಾನಯಾನ ಸೇವಾ ಸಂಸ್ಥೆಯನ್ನು ತನ್ನ ಸಂಸ್ಥೆಯ ಅಡಿಯಲ್ಲಿ ವಿಲೀನ ಮಾಡಿಕೊಳ್ಳಲು ನಿರ್ಧರಿಸಿದೆ. ವಿಲೀನ ಪ್ರಕ್ರಿಯೆ ಮಾರ್ಚ್ 2024 ರ ಒಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
  • ಅಖಿಲ ಭಾರತ ವಸತಿ ದರ ಸೂಚ್ಯಂಕ: ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಅಖಿಲ ಭಾರತ ವಸತಿ ದರ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು ಕಳೆದ ವರ್ಷದಿಂದ ಪ್ರಸ್ತುತ ವರ್ಷದಲ್ಲಿ ಜನವಸತಿಗಳ ದರ ಸರಾಸರಿ 5.1 ರಷ್ಟು ಹೆಚ್ಚಳವಾಗಿದೆ. ಎಂದು ವರದಿಯನ್ನು ಬಿಡುಗಡೆ ಮಾಡಿದೆ. ವಸತಿ ವಲಯದ ಬೇಡಿಕೆ ದೆಹಲಿಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, ವಸತಿ ವಲಯದ ಬೇಡಿಕೆ ಶೇ 14.9 ರಷ್ಟು ಹೆಚ್ಚಳವಾಗಿದೆ ದೆ. ಭಾರತದ 10 ನಗರಗಳಲ್ಲಿ ವಸತಿ ದರಗಳ ಬಗ್ಗೆಸಂಪೂರ್ಣ ಮಾಹಿತಿಯನ್ನು ಒದಗಿಸಲು ಈ ಸೂಚ್ಯಂಕವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮೂರು ತಿಂಗಳಿಗೊಮ್ಮೆ ಬಿಡುಗಡೆ ಮಾಡುತ್ತದೆ. ಹತ್ತು ನಗರಗಳು ಹೀಗಿವೆ; ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಜೈಪುರ, ಕಾನ್ಪುರ್, ಕೊಚ್ಚಿ, ಕೊಲ್ಕತ್ತಾ, ಲಖನೌ ಮತ್ತುಮುಂಬೈ
  • ಒಡಿಶಾದಲ್ಲಿ ಉಡಾನ್ ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ಉತ್ಕಲ ವಿಮಾನ ನಿಲ್ದಾಣವನ್ನು ಇತ್ತೀಚೆಗೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉದ್ಘಾಟಿಸಿದರು. ಭುವನೇಶ್ವರದಿಂದ ಉತ್ಕಲಗೆ ವಿಮಾನದಲ್ಲಿ ಪ್ರಯಾಣ ಬೆಳೆಸುವ ಮೂಲಕ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲಾಯಿತು. ಉತ್ಕಲ ವಿಮಾನ ನಿಲ್ದಾಣದ ಸೇರ್ಪಡೆಯೊಂದಿಗೆ, ಒಡಿಶಾ ರಾಜ್ಯದಲ್ಲಿ ಐದು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುವಂತಾಗಿದೆ.
  • ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವರಾಗಿದ್ದ ಷಣ್ಮುಗಂ ಚೆಟ್ಟಿ ಅವರ ಪ್ರತಿಮೆಯ ಅನಾವರಣ ಇತ್ತೀಚೆಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೇಂದ್ರ ಸಚಿವ ಪಿಯುಶ್ ಗೋಯಲ್ ಅನಾವರಣಗೊಳಿಸಿದರು. ದಕ್ಷಿಣ ಭಾರತದ ಪಂಚಾಯತ್ ಸಂಘಟನೆಯ ಸಂಕೀರ್ಣದಲ್ಲಿಈ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಷಣ್ಮುಗಂ ಚೆಟ್ಟಿ ಅವರು ಹಣಕಾಸು ಸಚಿವರು ಮಾತ್ರವಲ್ಲದೆ ಪ್ರಖ್ಯಾತ ವಕೀಲರು, ಅರ್ಥಶಾಸ್ತ್ರಜ್ಞರು ಮತ್ತುರಾಜಕೀಯ ವಿಶ್ಲೇಷಕರು ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ ಹಂತದಲ್ಲಿ ಮೊಟ್ಟಮೊದಲ ಮುಂಗಡಪತ್ರವನ್ನು ಜಾರಿಗೆ ತಂದ ಕೀರ್ತಿ ಇವರದ್ದಾಗಿತ್ತುಇದಲ್ಲದೆ ಶಿಕ್ಷಣ ವಲಯಕ್ಕೂ ಕೂಡ ಇವರ ಕೊಡುಗೆ ಅಪಾರವಾಗಿದ್ದುಅಣ್ಣಾಮಲೈ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದರು.
  • ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಕಾರಣದಿಂದ ಆಫ್ರಿಕಾದಲ್ಲಿ ವಲಸೆ ಪ್ರಕ್ರಿಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು ಈ ಪ್ರಕ್ರಿಯೆಯನ್ನು ಸಮರ್ಥವಾಗಿ ನಿರ್ವಹಿಸಲು ಹಾಗೂ ಪರಿಸರ ಸಂರಕ್ಷಣೆ ಮತ್ತುಹವಾಮಾನ ಬದಲಾವಣೆಗೆ ಸಂಬಂಧಿಸಿದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಆಫ್ರಿಕಾ ಖಂಡದ 48 ರಾಷ್ಟ್ರಗಳು ಕಂಪಾಲ ಘೋಷಣೆಯನ್ನು ಮಾಡಿವೆ.