Published on: September 23, 2021

ಪಿಎಂ ಕೇರ್ಸ್ ಫಂಡ್

ಪಿಎಂ ಕೇರ್ಸ್ ಫಂಡ್

ಸುದ್ಧಿಯಲ್ಲಿ ಏಕಿದೆ? ಕೊರೊನಾ ವೇಳೆಯಲ್ಲಿ ಸ್ಥಾಪಿಸಲಾದ ಪರಿಹಾರ ನಿಧಿ, ಪಿ.ಎಂ ಕೇರ್ಸ್‌ ಫಂಡ್‌, ಸರ್ಕಾರದ ನಿಧಿ ಅಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ಕಾರ್ಯಾಲಯ ದೆಹಲಿ ಹೈ ಕೋರ್ಟ್‌ಗೆ ತಿಳಿಸಿದೆ.

ಕೇಂದ್ರ ಸರ್ಕಾರ ಏನು ಹೇಳುತ್ತದೆ  ?

  • ಪಿಎಂ ಕೇರ್ಸ್‌ ಫಂಡ್‌ ಬಗ್ಗೆ ದೆಹಲಿ ಹೈ ಕೋರ್ಟ್‌ಗೆ ಲಿಖಿತ ಅಫಿಡವಿಟ್‌ ಸಲ್ಲಿಸಿರುವ ಕೇಂದ್ರ ಸರ್ಕಾರ, ಇದೊಂದು ನಿಯಮದಡಿ ಬರುವ ಚಾರಿಟೇಬಲ್‌ ಟ್ರಸ್ಟ್‌ ಅಷ್ಟೇ. ಇದನ್ನು ಸಾರ್ವಜನಿಕ ಪ್ರಾಧಿಕಾರ ಅಥವಾ ರಾಜ್ಯದ ವ್ಯಾಖ್ಯೆಯಲ್ಲಿ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಇದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಯ) ಒಳಪಡುವುದಿಲ್ಲ ಎಂದು ಹೇಳಿದೆ.
  • ಪಿಎಂ ಕೇರ್ಸ್‌ ನಿಧಿ ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರದ ಮಾಲೀಕತ್ವ ಅಥವಾ ನಿಯಂತ್ರಣದಲ್ಲೂ ಇಲ್ಲ. ಅಥವಾ ಯಾವುದೇ ಸರ್ಕಾರ ಇದಕ್ಕೆ ಹಣವನ್ನೂ ಒದಗಿಸುತ್ತಲೂ ಇಲ್ಲ.
  • ಪಿಎಂ ಕೇರ್ಸ್‌ ನಿಧಿಯಲ್ಲಿ ಸಾರ್ವಜನಿಕರು ಅಥವಾ ಸಂಸ್ಥೆಗಳು ಸ್ವ ಇಚ್ಛೆಯಿಂದ ನೀಡಿದ ಹಣ ಇದ್ದು, ಕೇಂದ್ರ ಸರ್ಕಾರದ ಯಾವುದೇ ಉದ್ದಿಮೆಯ ಭಾಗ ಅಲ್ಲ. ಕೇಂದ್ರ ಸರ್ಕಾರದ ಯಾವುದೇ ಯೋಜನೆಯ ಭಾಗವೂ ಅಲ್ಲ. ಇದೊಂದು ಸಾರ್ವಜನಿಕ ಟ್ರಸ್ಟ್ ಆಗಿದ್ದಿ, ಮಹಾಲೇಖಪಾಲಕರ ಆಡಿಟ್‌ಗೂ ಇದು ಒಳ ಪಡುವುದಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ಉತ್ತರದಲ್ಲಿ ಹೇಳಿದೆ.
  • ಆರ್‌ಟಿಐ ಕಾಯ್ದೆ ಸೆಕ್ಷನ್‌ 2(h) ರಲ್ಲಿ ಹೇಳಲಾಗಿರುವ ‘ಸಾರ್ವಜನಿಕ ಪ್ರಾಧಿಕಾರ’ದ ವ್ಯಾಖ್ಯೆಯಡಿ ಕೂಡ ಪಿಎಂ ಕೇರ್ಸ್‌ ಫಂಡ್‌ ಬರುವುದಿಲ್ಲ. ಹೀಗಾಗಿ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳು ಮಾನ್ಯವಲ್ಲ ಎಂದು ತನ್ನ ಹೇಳಿಕೆಯಲ್ಲಿ ಕೇಂದ್ರ ಸರ್ಕಾರ ಹೇಳಿದೆ.

ಪಿಎಂ ಕೇರ್ಸ್ ನಿಧಿ ಬಗ್ಗೆ

  • ಪ್ರಧಾನ ಮಂತ್ರಿ ವಿಪತ್ತು ನಿರ್ವಹಣಾ ನಿಧಿಯ ಬದಲಾಗಿ 2020 ರ ಮಾರ್ಚ್‌ 27ರಂದು ಈ ನಿಧಿಯನ್ನು ಸ್ಥಾಪನೆ ಮಾಡಲಾಗಿತ್ತು.
  • ಈ ನಿಧಿಯು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಆಗಿದ್ದು, ಪ್ರಧಾನ ಮಂತ್ರಿ ಇದರ ಅಧ್ಯಕ್ಷರಾಗಿರುತ್ತಾರೆ. ಇತರ ಸದಸ್ಯರಲ್ಲಿ ರಕ್ಷಣಾ ಮಂತ್ರಿ, ಗೃಹ ಮಂತ್ರಿ ಮತ್ತು ಹಣಕಾಸು ಸಚಿವರಿದ್ದಾರೆ.
  • ನಿಧಿಯು ಸೂಕ್ಷ್ಮ ದೇಣಿಗೆಗಳನ್ನು ಸಕ್ರಿಯಗೊಳಿಸುತ್ತದೆ, ಇದರ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯ ಜನರು ಸಣ್ಣ ಪಂಗಡಗಳೊಂದಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ.
  • ನಿಧಿಯು ವಿಪತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ ಮತ್ತು ನಾಗರಿಕರನ್ನು ರಕ್ಷಿಸುವ ಸಂಶೋಧನೆಯನ್ನು ಪ್ರೋತ್ಸಾಹಿಸುತ್ತದೆ.