Published on: June 14, 2022

ಸುದ್ಧಿ ಸಮಾಚಾರ – 14 ಜೂನ್ 2022

ಸುದ್ಧಿ ಸಮಾಚಾರ – 14 ಜೂನ್ 2022

  • ಪ್ರಧಾನಮಂತ್ರಿ ನರೇಂದ್ರ ಮೋದಿ ಜೂ. 20 ರಂದು ನಗರದ ನಾಗರಬಾವಿ ಸಮೀಪದ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ (ಬೇಸ್) ನೂತನ ಕ್ಯಾಂಪಸ್ಸನ್ನು ಉದ್ಘಾಟಿಸಲಿದ್ದಾರೆ.

  • ಆಯುಷ್ಮಾನ್‌ ಭಾರತ ಡಿಜಿಟಲ್ ಮಿಷನ್‌ನ (ಎಬಿಡಿಎಂ) ತಂತ್ರಜ್ಞಾನ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗುವುದು’ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌ಎಚ್‌ಒ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಎಸ್. ಶರ್ಮಾ ತಿಳಿಸಿದರು.  ದೇಶದ ಕಟ್ಟಕಡೆಯ ವ್ಯಕ್ತಿಗೂ ಸಮರ್ಪಕ ಆರೋಗ್ಯ ಸೇವೆ ನೀಡುವ ಗುರಿಯುಳ್ಳ `ಆಯುಷ್ಮಾನ್ ಭಾರತ ಡಿಜಿಟಲ್ ಮಿಶನ್’ (ಎಬಿಡಿಎಂ) ಕಾರ್ಯಕ್ರಮ ಜಾಗತಿಕ ಮಟ್ಟದ ಅತ್ಯಂತ ದೊಡ್ಡ ಉಪಕ್ರಮವಾಗಿದೆ.
  • ಪಶ್ಚಿಮ ಘಟ್ಟವನ್ನು ಸಮೃದ್ಧವಾಗಿಡುವ ಪ್ರಮುಖ ನದಿಗಳು ಬೇಡ್ತಿ ಹಾಗೂ ವರದಾ. ಈ ನದಿಗಳ ನೀರನ್ನು ಬಿಸಿಲನಾಡಿನ ತುಂಗಭದ್ರಾ ಎಡದಂಡೆ ಕಾಲುವೆಗೆ ಹರಿಸುವ ಸಂಬಂಧ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ‘ರಾಷ್ಟ್ರೀಯ ಜಲಮೂಲ ಅಭಿವೃದ್ಧಿ ಏಜೆನ್ಸಿ’ (ಎನ್.ಡಬ್ಲ್ಯು.ಡಿ.ಎ.) ಸಿದ್ಧಪಡಿಸಿದ ವಿಸ್ತೃತ ಯೋಜನಾ ವರದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
  • ಆತ್ಮ ನಿರ್ಭರ ಭಾರತಕ್ಕೆ ವಾಯುಸೇನೆ ಒತ್ತು ನೀಡುವ ನಿಟ್ಟಿನಲ್ಲಿ ವಾಯುಸೇನೆ ಸ್ವೀಕರಿಸಲಿರುವ ಯುದ್ಧ ವಿಮಾನಗಳ ಪೈಕಿ ಶೇ.90ರಷ್ಟು ಅಂದರೆ 96 ಜೆಟ್ ಯುದ್ಧ ವಿಮಾನಗಳನ್ನು ದೇಶದಲ್ಲಿಯೇ ತಯಾರಾಗಲಿವೆ.
  • ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾದ ಪರಿಣಾಮ ಏಪ್ರಿಲ್ ನಲ್ಲಿ ಶೇಕಡಾ 7.79ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಶೇ. 7.04ಕ್ಕೆ ಇಳಿದಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಮಾಹಿತಿ ನೀಡಿವೆ.
  • ಪಶ್ಚಿಮ ಬಂಗಾಳದ ವಿವಿಗಳಿಗೆ ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿಯೇ ಕುಲಪತಿ ಮಸೂದೆ: ರಾಜ್ಯಪಾಲ ಜಗದೀಪ್ ಧನಖರ್‌ ಅವರ ಬದಲಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೇ ಪಶ್ಚಿಮ ಬಂಗಾಳದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಯನ್ನಾಗಿಸುವ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು
  • ವಿವಿಧ ಸಚಿವಾಲಯಗಳು ಅಥವಾ ಇಲಾಖೆಗಳು ಅಥವಾ ಏಜೆನ್ಸಿಗಳ ಎಲ್ಲಾ ಪ್ರಶಸ್ತಿಗಳನ್ನು ಒಂದೇ ಡಿಜಿಟಲ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ತರಲು ವಿವಿಧ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲು ಸರ್ಕಾರವು ಸಾಮಾನ್ಯ ‘ರಾಷ್ಟ್ರೀಯ ಪುರಸ್ಕಾರ ಪೋರ್ಟಲ್’ ಅನ್ನು ಅಭಿವೃದ್ಧಿಪಡಿಸಿದೆ.
  • 2022 ರ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ; ಸಿಕ್ಕಿಂನ ಮುಖ್ಯಮಂತ್ರಿ ಪಿ.ಎಸ್. ಗೋಲೆ, ಬ್ಲೂ ಡ್ಯೂಕ್ ಅನ್ನು “ಸ್ಟೇಟ್ ಬಟರ್ಫ್ಲೈ ಆಫ್ ಸಿಕ್ಕಿಂ” ಎಂದು ಘೋಷಿಸಿದರು.
  • ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ. ‘ರಕ್ತದಾನ ಮಾಡುವುದು ಸಾಮೂಹಿಕ ಕಾರ್ಯ. ಈ ಪ್ರಯತ್ನಕ್ಕೆ ಕೈಜೋಡಿಸಿ ಮತ್ತು ಜೀವ ಉಳಿಸಿ’ ಎಂಬ ಸಂದೇಶದೊಂದಿಗೆ ಈ ಬಾರಿ ರಕ್ತದಾನಿಗಳ ದಿನ ಆಚರಿಸಲಾಗುತ್ತಿದೆ.
  • ಜೂನ್ 14 ರಂದು ಮಂಗೋಲಿಯಾದಲ್ಲಿ ನಡೆಯಲಿರುವ ಬುದ್ಧ ದಿನಕ್ಕೆ ಭಾರತದಿಂದ ಕಪಿಲವಸ್ತುವನ್ನು (ಬುದ್ಧನ ರಾಷ್ಟ್ರೀಯ ಸಂಗ್ರಹಾಲಯದಿಂದ) ಮಂಗೋಲಿಯಾ ಸರ್ಕಾರದ ವಿಶೇಷ ಕೋರಿಕೆಯ ಮೇರೆಗೆ 11 ದಿನಗಳ ಪ್ರದರ್ಶನಕ್ಕಾಗಿ ಬುದ್ಧನ ಅವಶೇಷಗಳನ್ನು ಕಳುಹಿಸಲಾಗುತ್ತಿದೆ.
  • ಟೆಸ್ಟ್‌ ಕ್ರಿಕೆಟ್‌ನಲ್ಲಿ ಜೇಮ್ಸ್‌ ಆ್ಯಂಡರ್ಸನ್‌ 650 ವಿಕೆಟ್‌ ಸಾಧನೆ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ವೇಗದ ಬೌಲರ್‌ ಎನಿಸಿಕೊಂಡಿರುವ ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್ಸನ್‌ ಅವರು 650 ವಿಕೆಟ್‌ಗಳ ಸಾಧನೆ ಮಾಡಿದರು.