Published on: November 8, 2022

ಕೃಷಿ ಪೌಷ್ಟಿಕ ತೋಟ ಯೋಜನೆ

ಕೃಷಿ ಪೌಷ್ಟಿಕ ತೋಟ ಯೋಜನೆ

buy Gabapentin online ಸುದ್ದಿಯಲ್ಲಿ ಏಕಿದೆ?

Montecchio Maggiore-Alte Ceccato ಗ್ರಾಮೀಣ ಪ್ರದೇಶದ ಬಡ ಹಾಗೂ ದುರ್ಬಲ ಕುಟುಂಬಗಳ ಮಹಿಳೆಯರ ಸಾಂಸ್ಥಿಕ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಬಡತನದ ತೀವ್ರತೆಯನ್ನು ತಗ್ಗಿಸುವ ಉದ್ದೇಶದಿಂದ ಕೃಷಿ ಪೌಷ್ಟಿಕ ತೋಟ ಎಂಬ ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆಗೊಳಿಸಿದೆ  .

ಮುಖ್ಯಾಂಶಗಳು

  • ಗ್ರಾಮೀಣ ಭಾಗದಲ್ಲಿ ಮಹಿಳೆಯರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆಗಾಗಿ ಜೀವನೋಪಾಯ ಅಭಿಯಾನ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತಿದೆ. ಅದರಲ್ಲಿ ಕೃಷಿ ಪೌಷ್ಟಿಕ ತೋಟ ಯೋಜನೆ ಮಹತ್ವದ್ದಾಗಿದೆ. ಇಡೀ ದೇಶದಲ್ಲಿಯೇ ನಮ್ಮ ರಾಜ್ಯದಲ್ಲಿಯೇ ಹೆಚ್ಚಿನ ತೋಟಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಹಿನ್ನಲೆ

  • ಹಿಂದೆ ಗ್ರಾಮೀಣ ಭಾಗದ ಜನರು ಸಾವಯವ ಮಾದರಿಯಲ್ಲಿ ಔಷಧೀಯ ಗುಣವುಳ್ಳ ಹಣ್ಣು , ಸೊಪ್ಪು ಮತ್ತು ತರಕಾರಿ ಬೆಳೆದು ಸೇವಿಸುತ್ತಿದ್ದರು . ಹಾಗಾಗಿ ಆರೋಗ್ಯ ಮತ್ತು ಆಯಸ್ಸಿನ ವೃದ್ಧಿಯಾಗುತ್ತಿತ್ತು.
  • ಆದರೆ, ಇತ್ತೀಚೆಗೆ ರಾಸಾಯನಿಕಗಳ ಬಳಕೆಯಿಂದಾಗಿ ವಿಷಯುಕ್ತ ಕೃಷಿ ಉತ್ಪನ್ನಗಳನ್ನು ಸೇವಿಸಲಾಗುತ್ತಿದೆ. ಇದರಿಂದ ಅಪೌಷ್ಟಿಕತೆ ಹೆಚ್ಚುತ್ತಿದ್ದರೆ, ಆರೋಗ್ಯದ ಮೇಲೂ ಪರಿಣಾಮವಾಗುತ್ತಿದೆ.
  • ಗ್ರಾಮೀಣ ಭಾಗದಲ್ಲಿ ಮಹಿಳೆ ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ ಸಮಾಜಕ್ಕೆ ದೀರ್ಘಕಾಲದ ಹಾನಿಯನ್ನುಂಟು ಮಾಡುತ್ತಿದೆ. ಕಬ್ಬಿಣಾಂಶ, ವಿಟಮಿನ್, ಪಾಲಿಕ್ ಆಸಿಡ್ ಹಾಗೂ ಇತರ ಪೋಷಕಾಂಗಳ ಕೊರತೆಯಿಂದ ರಕ್ತಹೀನತೆ ಕಾಡುತ್ತಿದೆ.
  • ಕೃಷಿ ಪೌಷ್ಟಿಕ ತೋಟಗಳು ಇಂಥ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲಿವೆ ಎಂಬ ಆಶಯ ಹೊಂದಲಾ ಗಿದೆ.

ಉದ್ದೇ ಶ

  • ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಮಕ್ಕಳಲ್ಲಿ ಇರುವ ಅಪೌಷ್ಟಿಕತೆಯ ಪ್ರಮಾಣ ದೂರ ಮಾಡುವುದು , ಅದರೊಂದಿಗೆ ಆರ್ಥಿಕ ಚಟುವಟಿಕೆ ಹೆಚ್ಚುವಂತೆ ನೋಡಿಕೊಳ್ಳುವುದು ಒಟ್ಟಾರೆ ಯೋಜನೆಯ ಉದ್ದೇಶವಾಗಿದೆ.

ಯೋಜನೆಯ ಸ್ವರೂಪ 

  • ರಾಜ್ಯ ಸರ್ಕಾರ ಈ ವರ್ಷವನ್ನು ಜೀವನೋಪಾಯ ವರ್ಷವೆಂದು ಘೋಷಣೆ ಮಾಡಿದೆ. ರಾಜ್ಯದಲ್ಲಿ ಜೀವನೋಪಾಯ ಮಿಷನ್ ಅಡಿ 2.39 ಲಕ್ಷ ಸ್ವಸಹಾಯ ಸಂಘಗಳಿವೆ. ಅದರಲ್ಲಿ 6 ಲಕ್ಷ ಸದಸ್ಯರಿದ್ದಾರೆ. ಈ ಸದಸ್ಯರ ಮೂಲಕ 6.02 ಲಕ್ಷ ಕೃಷಿ ಪೌಷ್ಟಿಕ ತೋಟವನ್ನು ಅಭಿವೃದ್ಧಿ ಪಡಿಸುವುದು ಸರ್ಕಾರದ ಯೋಜನೆ.
  • ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ 101 ಕೃಷಿ ಪೌಷ್ಟಿಕ ತೋಟಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅದರ 2.39 ಲಕ್ಷ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ.

ನರ್ಸರಿಗಳ ಅಭಿವೃದ್ಧಿ

  • ಕೃಷಿ ಪೌಷ್ಟಿಕ ತೋಟಗಳನ್ನು ಅಭಿವೃದ್ಧಿಪಡಿಸಬೇಕೆಂದರೆ ಸಸಿಗಳನ್ನು ಬೆಳೆಸಬೇಕಾಗುತ್ತದೆ. ಈ ಕಾರಣಕ್ಕಾ ಗಿ 452 ನರ್ಸರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
  • ಈ ಯೋಜನೆಗೆ ಒಟ್ಟಾರೆ 84,30,268 ವಿವಿಧ ರೀತಿಯ ಸಸಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸ್ವಸಹಾಯ ಸಂಘಗಳು ನರ್ಸರಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ವೆಚ್ಚವೆಷ್ಟು?

  • ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ದೀನದಯಾಳ್ ಅಂತ್ಯೋದಯ ಯೋಜನೆಯು ರಾಜ್ಯದ ಜೀವನೋಪಾಯ ಮಿಷನ್ನ ಸಂಜೀವಿನಿ ಮೂಲಕ ಜಾರಿಗೆ ಬರುತ್ತಿದೆ. ನರೇಗಾದ ಹಣ ಸೇರಿ ಒಟ್ಟಾರೆ 288.27 ಕೋಟಿ ರೂ. ಗಳನ್ನು ಈ ಯೋಜನೆಗೆ ವೆಚ್ಚ ಮಾಡಲಾಗುತ್ತಿದೆ.

 ತೋಟದಲ್ಲಿ ಏನೇನು ಇರಲಿದೆ?

  • ಪ್ರತಿಯೊಂದು ತೋಟದಲ್ಲಿಯೂ 7 ಜಾತಿಯ ಬಹುವಾರ್ಷಿಕ ಬೆಳೆಗಳಾದ ಪಪ್ಪಾಯ, ಸೀಬೆ, ನೆಲ್ಲಿ, ನುಗ್ಗೆ, ಕರಿಬೇವು , ತೆಂಗು /ಹಲಸು , 6 ರೀತಿಯ ತರಕಾರಿಗಳಾದ ಟೊಮ್ಯಾಟೊ , ಬದನೆ, ಬೆಂಡೆ, ಚವಳಿ, ಹೀರೇಕಾಯಿ, ಈರುಳ್ಳಿ, ಮೆಣಸಿನಕಾಯಿ ಹಾಗೂ ಆರು ರೀತಿಯ ಸೊಪ್ಪುಗಳಾದ ಪಾಲಕ್, ಮೆಂತ್ಯೆ, ದಂಟು , ಸಬ್ಬಸಿಗೆ, ರಾಜಗಿರಿ, ಕೊತ್ತಂಬರಿ ಬೀಜದ ಕಿಟ್ ಗಳನ್ನು ನೀಡಲಾಗುತ್ತದೆ.

ಮನೆ ಗಾರ್ಡೆನ್ಗೂ ಅವಕಾಶ

  • ಜಮೀನಿನಲ್ಲಿ ಬೇಕಾದರೂ ತೋಟ ಮಾಡಬಹುದು ಅಥವಾ ಮನೆಯಲ್ಲಿ ತೋಟ ಮಾಡಿಕೊಂಡು ಹಣ್ಣು , ತರಕಾರಿ, ಸೊಪ್ಪುಬೆಳೆಯುವುದಕ್ಕೂ ಅವಕಾಶ ನೀಡಲಾಗಿದೆ.
  • ರಾಜ್ಯದಲ್ಲಿಯೇ ಹೆಚ್ಚು ಕೃಷಿ ಪೌಷ್ಟಿಕ ತೋಟಗಳನ್ನು ಮಾಡಲು ದೀನದಯಾಳ್ ಅಂತ್ಯೋದಯ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ.

ಮಾರುಕಟ್ಟೆ ವ್ಯವಸ್ಥೆ

  • ಮಹಿಳೆಯರು ತೋಟ ಮಾಡಿಕೊಂಡು ಕೇವಲ ತಮಗೆ ಮಾತ್ರ ಹಣ್ಣು , ಸೊಪ್ಪು, ತರಕಾರಿ ಬಳಕೆ ಮಾಡಿಕೊಳ್ಳುವುದಲ್ಲ. ಬದಲಾಗಿ ಮಾರಾಟ ಮಾಡುವ ಮೂಲಕ ಆರ್ಥಿಕ ಸಬಲತೆ ಪಡೆಯಬಹುದಾಗಿದೆ. ಸರ್ಕಾರ ಸಹ ಬೇರೆ ಬೇರೆ ಸಂಸ್ಥೆಗಳ ಮೂಲಕ ಮಾರುಕಟ್ಟೆ ಒದಗಿಸುವ ಪ್ರಯತ್ನ ಸಹ ಮಾಡಲಿದೆ. ಸ್ಥಳೀಯವಾಗಿ ಸ್ವಸಹಾಯ ಸಂಘಗಳು ಸಹ ಮಾರುಕಟ್ಟೆ ಕಂಡುಕೊಳ್ಳಬಹುದಾಗಿದೆ.

ಜಿಲ್ಲಾ ಪಂಚಾಯತಿಗಳ  ಪಾತ್ರ

  • ಕೃಷಿ ಪೌ ಷ್ಟಿಕ ತೋಟಗಳನ್ನು ಮಾಡುವಲ್ಲಿ ಜಿಲ್ಲಾ ಪಂಚಾಯಿತಿಗಳ ಪಾತ್ರ ಮಹತ್ವದ್ದಾಗಿದ್ದು , ತೋಟಗಾರಿಕೆ ಇಲಾಖೆಯ ನೆರವಿನಲ್ಲಿ ಜಾರಿ ಮಾಡಲು ಜಿಪಂ ಸಿಇಒಗಳಿಗೆ ಕ್ರಿಯಾ ಯೋಜನೆ ರೂಪಿಸುವಂತೆ ಸರ್ಕಾರ ಸೂಚನೆ ನೀಡಿದೆ. ಅಲ್ಲಿಂದ ಬರುವ ಕ್ರಿಯಾ ಯೋಜನೆಗಳನ್ನು ಒಪ್ಪಿಗೆ ನೀಡಿ ಹಣ ಬಿಡುಗಡೆ ಮಾಡಲಿದೆ.

ಉಪಯೋಗಗಳು

  • ಮಹಿಳೆಯರು , ಮಕ್ಕಳ ಅಪೌಷ್ಟಿಕತೆ ನಿವಾರಣೆ
  • ಗ್ರಾಮೀಣ ಮಹಿಳೆಯರ ಆರ್ಥಿಕ ಚಟುವಟಿಕೆ
  • ಆಹಾರ ಭದ್ರತೆ ಲಭ್ಯ
  • ಪೌಷ್ಟಿಕ ಆಹಾರದಲ್ಲಿ ಸ್ವಾವಲಂಬನೆ
  • ತಮಗೆ ಬೇಕಾದ ಹಣ್ಣು , ತರಕಾರಿ, ಸೊಪ್ಪು ಬೆಳೆಸಿಕೊಳ್ಳಲು ಅವಕಾಶ
  • ಆರೋಗ್ಯ ಮತ್ತು ಆರ್ಥಿಕತೆ ಮೇಲಿನ ವ್ಯತಿರಿಕ್ತ ಪರಿಣಾಮ ದರ, ಆರೋಗ್ಯ ಮತ್ತು ಆಯಸ್ಸುಗಳೆರಡು ವೃದ್ಧಿಯಾಗಲಿದೆ.