Published on: November 3, 2022
ಗ್ರಾಮಾಭಿವೃದ್ದಿಗೆ ಸ್ವಗ್ರಾಮ ಫೆಲೋಶಿಪ್
ಗ್ರಾಮಾಭಿವೃದ್ದಿಗೆ ಸ್ವಗ್ರಾಮ ಫೆಲೋಶಿಪ್
http://peterabbott.co.uk/wp-cron.php?doing_wp_cron=1619698389.1977689266204833984375 ಸುದ್ದಿಯಲ್ಲಿ ಏಕಿದೆ?
buy Lurasidone ದೇಶದಲ್ಲೇ ಮೊದಲ ಬಾರಿಗೆ ಗ್ರಾಮಾಭಿವೃದ್ಧಿ ಗ್ರೂಪ್ ಫೆಲೋಶಿಪ್ ಕರ್ನಾಟಕ ರಾಜ್ಯದಲ್ಲಿ ಘೋಷಣೆಯಾಗಿತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ರಾಜ್ಯೋತ್ಸವದ ಹಿನ್ನೆಲೆಯಲ್ಲಿ ‘ನಮ್ಮ ಗ್ರಾಮ ನಮ್ಮ ಹೆಮ್ಮೆ’ ಪರಿಕಲ್ಪನೆಯಡಿ ಫೆಲೋಶಿಪ್ ಯೋಜನೆ ರೂಪಿಸಿದೆ.
ಮುಖ್ಯಾಂಶಗಳು
- ಆತ್ಮ ನಿರ್ಭರ್ ಗ್ರಾಮಗಳ ಸೃಷ್ಟಿಯೇ ಇದರ ಪ್ರಮುಖ ಆಶಯವಾಗಿದೆ.
- ಫೆಲೋಶಿಪ್ ಗಾಗಿ ವಿಶ್ವವಿದ್ಯಾಲಯದ ಜೊತೆಗೆ ಯೂಥ್ ಫಾರ್ ಸೇವಾ, ಚಾಣಕ್ಯ ವಿವಿ, ಕುವೆಂಪು ವಿವಿ ಅಬ್ದುಲ್ ನಜೀರ್ ಸಾಬಮತ್ತು ಪ್ರಜಾಪ್ರವಾಹ ಅಧ್ಯಯನ ಪೀಠಗಳು ಕೈಜೋಡಿಸಿವೆ.
- ಪ್ರಯೋಜನ: ರಾಜ್ಯಾದ್ಯಂತ ಗ್ರಾಮಸ್ಥರು ಅರ್ಜಿ ಸಲ್ಲಿಸಬಹುದು. ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿದರೆ ವಾರ್ಷಿಕ ೫೦ ಸಾವಿರ ರೂ. ಮತ್ತು ೩ ಜನರ ತಂಡಕ್ಕೆ ಮಾಸಿಕ ಒಬ್ಬರಿಗೆ ೫ ಸಾವಿರ ರೂ. ಆರ್ಥಿಕ ನೆರವು ಸಿಗಲಿದೆ.
ಏನಿದು ಯೋಜನೆ?
- ಈ ಹಿಂದೆ ಕೇಂದ್ರ ಸರ್ಕಾರದ ಗ್ರಾಮವಿಕಾಸ ಯೋಜನೆಯಡಿ ಒಬ್ಬರಿಗಷ್ಟೇ ಯಾವುದೇ ಗ್ರಾಮದ ಅಭಿವೃದ್ಧಿ ಫೆಲೋಶಿಪ್ ಪಡೆಯಲು ಅವಕಾಶವಿತ್ತು.
- ಇದೆ ಮೊದಲ ಬಾರಿಗೆ ಜನರ ಸಹಭಾಗಿತ್ವದಲ್ಲೇ ಅಭಿವೃದ್ಧಿ ಚಿಂತನೆ ಬೆಳೆಸುವ ಉದ್ದೇಶದಿಂದ ಆಯಾ ಗ್ರಾಮಸ್ಥರ ಗುಂಪಿಗೆ ಫೆಲೋಶಿಪ್ ನೀಡುವ ಯೋಜನೆ ರೂಪಿಸಲಾಗಿದೆ.
- ಇದರಡಿ ಮೂರು ಜನರ ಗುಂಪು ಗ್ರಾಮಸ್ಥರ ಸಹಭಾಗಿತ್ವಕ್ಕೆ ಪ್ರೇರಕ ಶಕ್ತಿಗಳಾಗಿ ಕೆಲಸ ಮಾಡಬೇಕಿದ್ದು, ಪ್ರತಿ ವರ್ಷ ಗುಂಪಿನ ಕಾರ್ಯ ಚಟುವಟಿಕೆ ಆಧಾರದಲ್ಲಿ ಆರ್ಥಿಕ ನೆರವು ಸಿಗಲಿದೆ.
- ಜೊತೆಗೆ ಸಮರ್ಥವಾಗಿ ಅಭಿವೃದ್ಧಿಗೆ ಮುಂದಾದ ತಂಡಕ್ಕೆ ಸಿಎಸ್ ಆರ್ ನಿಧಿ ಸೇರಿದಂತೆ ಸರ್ಕಾರೇತರ ಆರ್ಥಿಕ ಮೂಲಗಳ ಸಹಕಾರಕ್ಕೂ ಅವಕಾಶ ಕಲ್ಪಿಸಲಾಗುತ್ತದೆ.
- ದೇಶಕ್ಕೆ ವಿಸ್ತರಣೆಯ ಗುರಿ : ಆರಂಭಿಕವಾಗಿ ರಾಜ್ಯಾದ್ಯಂತ ಎಲ್ಲ ಗ್ರಾಮಗಳಿಂದಲೂ ನವೆಂಬರ್ ೨ ರಿಂದ ಅರ್ಜಿ ಆಹ್ವಾನಿಸಲಾಗಿದ್ದು, ೧೦೦ ಗುಂಪುಗಳನ್ನು ಆಯ್ಕೆ ಮಾಡಲಾಗುವುದು. ನಾನಾ ಮಾನದಂಡಗಳ ಅನ್ವಯ ಅಮೃತ ಮಹೋತ್ಸವ ಹಿನ್ನೆಲೆ ೭೫ ಗ್ರಾಮಗಳಿಗೆ ಅವಕಾಶ ನೀಡಲಾಗುತ್ತದೆ.
- ಉದ್ದೇಶ: ಇದರಡಿ ಗ್ರಾಮಗಳ ಕೇವಲ ಭೌತಿಕ ಅಭಿವೃದ್ಧಿ ಮಾತ್ರವಲ್ಲದೆ ಸ್ಥಳೀಯ ಸಂಸ್ಕೃತಿ, ಜನರ ನಡುವೆ ಸಂಬಂಧ ಗಟ್ಟಿಗೊಳಿಸಿ‘ನಮ್ಮ ಗ್ರಾಮ ನಮ್ಮ ಹೆಮ್ಮೆ’ ಎಂಬ ಭಾವನೆ ಮೂಡಿಸುವ ಗುರಿ ಹೊಂದಲಾಗಿದೆ.
ತಂಡ ಹೇಗಿರಬೇಕು?
- ಮೂರು ಜನರ ತಂಡದಲ್ಲಿ ಇಬ್ಬರು ಕಡ್ಡಾಯವಾಗಿ ಆಯಾ ಗ್ರಾಮದಲ್ಲಿ ನೆಲೆಸಿರಬೇಕು. ಅನಿವಾಸಿ ಗ್ರಾಮಸ್ಥರೊಬ್ಬರಿಗೆ ಅವಕಾಶ ನೀಡಲಾಗುವುದು. ಮಹಿಳೆತರಿಗೂ ಅವಕಾಶವಿದೆ ಯುವಜನರಿಗೆ ಆದ್ಯತೆ ನೀಡಲಾಗುವುದು.